ಹುಬ್ಬಳ್ಳಿ : ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ ,ಒನಕೆ ಓಬ್ಬವ್ವ ಅವರಿಗೆ ಅವಮಾನ ಮಾಡಿದವರ ಮೇಲೆ ದಲಿತ ದೌರ್ಜನ್ಯ ಪ್ರಕರಣ ಹಾಕಿ ಗಡಿಪಾರು ಮಾಡುವಂತೆ ಒತ್ತಾಯಿಸಿ ನಗರದ ಕರ್ನಾಟಕ ಜೈ ಭೀಮ ಟೈಗರ್ಸ್ ಅಸೋಸಿಯೇಷನ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು, ಅವಹೇಳನಕಾರಿ ಹೇಳಿಕೆ ನೀಡಿದ ವ್ಯಕ್ತಿಗಳ ಪ್ರತಿಕೃತಿಗಳನ್ನು ಶವ ವಾಹನದಲ್ಲಿ ಸಾಗಿಸಿದರಲ್ಲದೇ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಚನ್ನಮ್ಮ ವೃತ್ತ, ಕೋರ್ಟ್ ವೃತ್ತದ ಮೂಲಕ ಹಾದು ತಹಸೀಲ್ದಾರ ಕಚೇರಿಗೆ ತಲುಪಿದರು.
ಅಸೋಸಿಯೇಷನ್ ಖಜಾಂಚಿ ಮೈಲಾರಿ ಹೊಸಮನಿ ಮಾತನಾಡಿ, ಇತ್ತೀಚೆಗೆ ಉಡುಪಿಯಲ್ಲಿ ನಡೆದ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ಸಂವಿಧಾನವನ್ನು ಅಂಬೇಡ್ಕರ್ ಮಾತ್ರ ಬರೆದಿಲ್ಲ. ಈ ಸಂವಿಧಾನವನ್ನು ಮರುಪರಿಶೀಲಿಸಿ ಸಂವಿಧಾನ ಹೊಸದಾಗಿ ಬರೆಯಬೇಕು ಎಂದು ಹೇಳುವ ಮೂಲಕ ಅಂಬೇಡ್ಕರ್ಗೆ ಅವಮಾನ ಮಾಡಿದ್ದರೆ, ಟಿವಿ ಕಾರ್ಯಕ್ರಮವೊಂದರಲ್ಲಿ ವಿಧಾನ ಪರಿಷತ್ ಸದಸ್ಯ ಗೋಮಧುಸೂಧನ ಅಂಬೇಡ್ಕರ್ ಬರೆದಿರುವ ಸಂವಿಧಾನ ಪ್ರಯೋಜನವಿಲ್ಲ ಎಂದಿದ್ದಾರೆ. ಅಲ್ಲದೆ ಸಂಸದ ಪ್ರತಾಪ್ ಸಿಂಹ ಪೇಸ್ಬುಕ್ಲ್ಲಿ ಚನ್ನಮ್ಮ ಬ್ರಿಟಿಷರ ಜತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಅವಮಾನಿಸಿದ್ದಾರೆ. ಇಂತಹ ಅವಹೇಳನಕಾರಿ ಮಾತುಗಳನ್ನಾಡಿದ ಇವರನ್ನು ಕೂಡಲೇ ದೇಶದ್ರೋಹ ಆರೋಪದ ಮೇಲೆ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ತಮ್ಮ ಬೇಡಿಕೆಗಳ ಮನವಿಯನ್ನು ತಹಸೀಲ್ದಾರರ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಪಿತಾಂಬರಪ್ಪ ಬಿಳಾರ, ಪ್ರಶಾಂತ ಚೌಗಲೆ, ದಿನೇಶ ಹೊಸಮನಿ, ನಿಂಗರಾಜ ಹೊಸಮನಿ, ನಾಗರಾಜ ಕಡಪಟ್ಟಿ, ಆನಂದ ಹೊಸಮನಿ, ಉತ್ತಮ ಹೊಸಮನಿ, ಅಭಿಷೇಕ ಕಾಳೆ, ಅತೀತಕುಮಾರ, ರಮೇಶ ಕಟ್ಟಿಮನಿ ಸೇರಿದಂತೆ ಮತ್ತಿತರರು ಇದ್ದರು.
ರು ರಾಣಿ ಚನ್ನಮ್ಮ ,ಒನಕೆ ಓಬ್ಬವ್ವ ಅವರಿಗೆ ಅವಮಾನ ಮಾಡಿದವರ ಮೇಲೆ ದಲಿತ ದೌರ್ಜನ್ಯ ಪ್ರಕರಣ ಹಾಕಿ ಗಡಿಪಾರು ಮಾಡುವಂತೆ ಒತ್ತಾಯಿಸಿ ನಗರದ ಕರ್ನಾಟಕ ಜೈ ಭೀಮ ಟೈಗರ್ಸ್ ಅಸೋಸಿಯೇಷನ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.