ಆ್ಯಪ್ನಗರ

ಜ.26 ರಂದು ಕುಂದಗೋಳದಲ್ಲಿ ನಗೆಹಬ್ಬ

ಕುಂದಗೋಳ : ಪಟ್ಟಣದ ಟಿಎಪಿಸಿಎಂಎಸ್‌ ಆವರಣದಲ್ಲಿ ಜ. 26ರಂದು ಪ್ರಜಾರಾಜ್ಯೋತ್ಸವದ ಅಂಗವಾಗಿ ವ್ಯಾಪಾರಸ್ಥರ ಸಂಘ, ತಾಲೂಕು ಔಷಧ ವ್ಯಾಪಾರಸ್ಥರ ಸಂಘ ಹಾಗೂ ಟಿವಿಎಸ್‌ ಮೋಟಾರ್‌ ಕಂಪನಿ ಅವರ ಸಹಯೋಗದಲ್ಲಿ ನಗೆಹಬ್ಬ ಆಯೋಜಿಸಲಾಗಿದೆ ಎಂದು ಔಷಧ ವ್ಯಾಪಾರಸ್ಥರ ಸಂಘ ಅಧ್ಯಕ್ಷ ನಿಂಗರಾಜ ಸಂಶಿ ಅವರು ಹೇಳಿದರು.

Vijaya Karnataka 24 Jan 2019, 5:00 am
ಕುಂದಗೋಳ : ಪಟ್ಟಣದ ಟಿಎಪಿಸಿಎಂಎಸ್‌ ಆವರಣದಲ್ಲಿ ಜ. 26ರಂದು ಪ್ರಜಾರಾಜ್ಯೋತ್ಸವದ ಅಂಗವಾಗಿ ವ್ಯಾಪಾರಸ್ಥರ ಸಂಘ, ತಾಲೂಕು ಔಷಧ ವ್ಯಾಪಾರಸ್ಥರ ಸಂಘ ಹಾಗೂ ಟಿವಿಎಸ್‌ ಮೋಟಾರ್‌ ಕಂಪನಿ ಅವರ ಸಹಯೋಗದಲ್ಲಿ ನಗೆಹಬ್ಬ ಆಯೋಜಿಸಲಾಗಿದೆ ಎಂದು ಔಷಧ ವ್ಯಾಪಾರಸ್ಥರ ಸಂಘ ಅಧ್ಯಕ್ಷ ನಿಂಗರಾಜ ಸಂಶಿ ಅವರು ಹೇಳಿದರು.
Vijaya Karnataka Web jan 26 laughter festival
ಜ.26 ರಂದು ಕುಂದಗೋಳದಲ್ಲಿ ನಗೆಹಬ್ಬ


ಅವರು ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಾವು ಕೇವಲ ವ್ಯಾಪಾರಕ್ಕೋಸ್ಕರ ಹಾತೊರೆಯದೆ ಮುಖ್ಯವಾಗಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಗ್ರಾಹಕರ ಜಿಎಸ್‌ಟಿ ಶಿಬಿರ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಜರುಗಿಸುತ್ತ ಬಂದಿದ್ದೇವೆ. ಪ್ರತಿವರ್ಷದಂತೆ ಈ ಬಾರಿಯೂ ಸಾರ್ವಜನಿಕರಿಗಾಗಿ ನಗೆಹಬ್ಬ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಬ್ಬದ ಉದ್ಘಾಟನೆ ಸಂಜೆ 5ಕ್ಕೆ ಜರುಗಲಿದ್ದು, ಪೌರಾಡಳಿತ ಸಚಿವ ಸಿ.ಎಸ್‌.ಶಿವಳ್ಳಿ ನೆರವೇರಿಸುವರು. ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಗೇಶ ಗಂಗಾಯಿ ಅಧ್ಯಕ್ಷ ತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಸ್‌.ಐ.ಚಿಕ್ಕನಗೌಡ್ರ, ಎಂ.ಆರ್‌.ಪಾಟೀಲ, ಅರವಿಂದ ಕಟಗಿ, ಐ.ಎಂ.ನಾವಳ್ಳಿಮಠ, ಪ.ಪಂ ಅಧ್ಯಕ್ಷೆ ಹಾಸಂಬಿ ಚಡ್ಡಿ ಸೇರಿದಂತೆ ಅನೇಕ ಗಣ್ಯರು ಆಗಮಿಸುವರು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಚಿವ ಸಿ.ಎಸ್‌.ಶಿವಳ್ಳಿ, ಪ್ರಶಸ್ತಿ ವಿಜೇತ ಗುಡಗೇರಿ ಪಿಎಸ್‌ಐ ನವೀನ ಜಕಲಿ ಹಾಗೂ ರಾಷ್ಟ್ರೀಯ ಇನ್‌ಸ್ಪೈರ್‌ ಪ್ರಶಸ್ತಿ ವಿಜೇತೆ ಅದಗುಂಚಿ ಗ್ರಾಮದ ಲಕ್ಷ್ಮೀ ಇಟಗಿ ಅವರನ್ನು ಸತ್ಕರಿಸಲಾಗುವುದು ಎಂದು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಗೇಶ ಗಂಗಾಯಿ ತಿಳಿಸಿದರು.

ಖ್ಯಾತ ಹಾಸ್ಯಕಲಾವಿದೆ ಸುಧಾ ಬರಗೂರ, ನಗೆಮೋಡಿಗಾರ ರವಿ ಭಜಂತ್ರಿ, ಜ್ಯೂ.ಅಂಬರೀಶ, ಜ್ಯೂ.ಶಂಕರನಾಗ ಅವರು ಆಗಮಿಸಲಿದ್ದು, ಸಾರ್ವಜನಿಕರು ಹೆಚ್ಚಿನಸಂಖ್ಯೆಯಲ್ಲಿ ಪಾಲ್ಗೊಂಡು ಹಬ್ಬಕ್ಕೆ ಶೋಭೆತರಬೇಕು ಎಂದು ವಾಗೇಶ ವಿವರಿಸಿದರು.

ದಶರಥ ಕಲಾಲ, ಪ್ರಕಾಶ ಸವಣೂರ, ಏಕನಾಥ ಪಲ್ಲೇದ, ಬಸುರಾಜ ಮುದಗಣ್ಣವರ, ಜಲಾಲ ಜಂಗ್ಲಿ, ಸುರೇಶ ಗಂಗಾಯಿ, ಹುಸೇನಸಾಬ ಕಡಲಿ, ನಿಂಗಪ್ಪ ಗುಡ್ಡದಕೇರಿ, ಗಿರೀಶ ಗಾಣಿಗೇರ, ಜಯಪ್ರಕಾಶ ಗೋಣಿ, ಚಂದ್ರಶೇಖರ ಕಟಗಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ