ಹುಬ್ಬಳ್ಳಿ : ಬಹುತೇಕ ಬೆಂಗಳೂರು ಮೆಟ್ರೋದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಂದ ತಯಾರಿಸಿದ 'ಜರ್ಕ್' ಕನ್ನಡ ಚಲನಚಿತ್ರ ಜು.26ರಂದು ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಮಹಾಂತೇಶ್ ಮದಕರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಮನುಷ್ಯನ ಜೀವನದ ತಿರುವುಗಳ ಬಗ್ಗೆ ಸ್ಪಷ್ಟ ಸಂದೇಶ ತಿಳಿಸುವ ಈ ಚಿತ್ರ ಪ್ರೇಕ್ಷಕರಿಗೆ ಕೊನೆಯವರೆಗೂ ಕುತೂಹಲ ಮೂಡಿಸುತ್ತದೆ. ಬೇರೊಂದು ಊರಿನಿಂದ ಕೆಎಎಸ್ ತರಬೇತಿಗೆ ಬೆಂಗಳೂರಿಗೆ ಬರುವ ಹುಡುಗನಿಗೆ ಇಲ್ಲಿ ಆಗುವ ಅನುಭಗಳ ಪರಿಕಲ್ಪನೆಯ ಸುತ್ತ ಜರ್ಕ್ ಚಿತ್ರದ ಕಥೆ ಹೆಣೆಯಲಾಗಿದೆ. ಕಮರ್ಷಿಯಲ್ ಅಂಶಗಳ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಚಿತ್ರ ಇದಾಗಿದೆ ಎಂದರು.
ಮಯೂರ್ ಪ್ರೋಡಕ್ಷನ್ ವತಿಯಿಂದ ತಯಾರಾದ ಜರ್ಕ್ ನನ್ನ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಚಿತ್ರದಲ್ಲಿ ಒಟ್ಟು 62 ದೃಶ್ಯಗಳಿದ್ದು, ಪ್ರತಿಯೊಂದು ಸೀನ್ನಲ್ಲೂ ಒಂದು ಸಂದೇಶವಿರುತ್ತದೆ. ಐಟಂ ಸಾಂಗ್ನಲ್ಲಿ ಬೆಲ್ಲಿ ನೃತ್ಯವನ್ನು ತ್ರಿಭುವನ್ ಮಾಸ್ಟರ್ ಅವರು ಸಂಯೋಜಿಸಿದ್ದಾರೆ. ಚಿತ್ರದ ಮೊದಲರ್ಧ ಕಥೆ ಸಾಗಿದರೆ, ನಂತರ ಕುತೂಹಲ ಹುಟ್ಟಿಸುತ್ತದೆ. ಬೆಂಗಳೂರು, ದೇವರಾಯನ ದುರ್ಗ ಹಾಗೂ ಕುಲು ಮನಾಲಿಯಂಥ ಸುಂದರ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಮದಕರಿ ವಿವರಿಸಿದರು.
ಚಿತ್ರದ ನಾಯಕ ನಟರಾಗಿ ಬೀದರ್ ಮೂಲದ ಕೃಷ್ಣರಾಜ್ ಮತ್ತು ಸಚ್ಚಿನ್ ಸಿದ್ದು ಅಭಿನಯಿಸಿದ್ದು, ನಿತ್ಯಾರಾಜ್ ಹಾಗೂ ಆಶಾ ಭಂಡಾರಿ ನಾಯಕಿಯರಾಗಿದ್ದಾರೆ. ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ತಿಥಿ ಚಿತ್ರದ ಖ್ಯಾತಿಯ ಗಡ್ಡಪ್ಪ ಹಾಗೂ ಅವರ ಸ್ನೇಹಿತನಾಗಿ ಮಜಾಟಾಕೀಸ್ನ ಪವನ್ ನಟಿಸಿದ್ದಾರೆ. ನೆಲೆಮನೆ ರಾಘವೇಂದ್ರ, ಪಾಲ್ಸ್ ನಾಗ ಅವರ ಸಾಹಿತ್ಯವಿರುವ ನಾಲ್ಕು ಹಾಡುಗಳಿಗೆ ಎಡ್ವರ್ಡ್ ಷಾ ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಕೆ. ಮತ್ತು ಸೌಭಾಗ್ಯಮ್ಮ ಚಿತ್ರದ ನಿರ್ಮಾಣ ಮಾಡಿದ್ದಾರೆ ಎಂದ ಅವರು, ವಿಶೇಷ ಆ್ಯಕ್ಷನ್ ಹಾಗೂ ಸಸ್ಪೆನ್ಸ್ ಕಥೆ ಒಳಗೊಂಡಿರುವ ಜರ್ಕ್ ಚಿತ್ರವನ್ನು ಪ್ರತಿಯೊಬ್ಬರು ನೋಡಬೇಕು ಎಂದು ಮನವಿ ಮಾಡಿದರು.
ನಾಯಕ ನಟ ಕೃಷ್ಣರಾಜ್, ನಾಯಕ ನಟಿಯರಾದ ಆಶಾ ಭಂಡಾರಿ,ನಿತ್ಯಾರಾಜ್ ಹಾಗೂ ಚಿತ್ರದ ನಿರ್ಮಾಪಕ ರವಿಕುಮಾರ, ಕಂಪಾಲಿ ಇದ್ದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಮನುಷ್ಯನ ಜೀವನದ ತಿರುವುಗಳ ಬಗ್ಗೆ ಸ್ಪಷ್ಟ ಸಂದೇಶ ತಿಳಿಸುವ ಈ ಚಿತ್ರ ಪ್ರೇಕ್ಷಕರಿಗೆ ಕೊನೆಯವರೆಗೂ ಕುತೂಹಲ ಮೂಡಿಸುತ್ತದೆ. ಬೇರೊಂದು ಊರಿನಿಂದ ಕೆಎಎಸ್ ತರಬೇತಿಗೆ ಬೆಂಗಳೂರಿಗೆ ಬರುವ ಹುಡುಗನಿಗೆ ಇಲ್ಲಿ ಆಗುವ ಅನುಭಗಳ ಪರಿಕಲ್ಪನೆಯ ಸುತ್ತ ಜರ್ಕ್ ಚಿತ್ರದ ಕಥೆ ಹೆಣೆಯಲಾಗಿದೆ. ಕಮರ್ಷಿಯಲ್ ಅಂಶಗಳ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಚಿತ್ರ ಇದಾಗಿದೆ ಎಂದರು.
ಮಯೂರ್ ಪ್ರೋಡಕ್ಷನ್ ವತಿಯಿಂದ ತಯಾರಾದ ಜರ್ಕ್ ನನ್ನ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಚಿತ್ರದಲ್ಲಿ ಒಟ್ಟು 62 ದೃಶ್ಯಗಳಿದ್ದು, ಪ್ರತಿಯೊಂದು ಸೀನ್ನಲ್ಲೂ ಒಂದು ಸಂದೇಶವಿರುತ್ತದೆ. ಐಟಂ ಸಾಂಗ್ನಲ್ಲಿ ಬೆಲ್ಲಿ ನೃತ್ಯವನ್ನು ತ್ರಿಭುವನ್ ಮಾಸ್ಟರ್ ಅವರು ಸಂಯೋಜಿಸಿದ್ದಾರೆ. ಚಿತ್ರದ ಮೊದಲರ್ಧ ಕಥೆ ಸಾಗಿದರೆ, ನಂತರ ಕುತೂಹಲ ಹುಟ್ಟಿಸುತ್ತದೆ. ಬೆಂಗಳೂರು, ದೇವರಾಯನ ದುರ್ಗ ಹಾಗೂ ಕುಲು ಮನಾಲಿಯಂಥ ಸುಂದರ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಮದಕರಿ ವಿವರಿಸಿದರು.
ಚಿತ್ರದ ನಾಯಕ ನಟರಾಗಿ ಬೀದರ್ ಮೂಲದ ಕೃಷ್ಣರಾಜ್ ಮತ್ತು ಸಚ್ಚಿನ್ ಸಿದ್ದು ಅಭಿನಯಿಸಿದ್ದು, ನಿತ್ಯಾರಾಜ್ ಹಾಗೂ ಆಶಾ ಭಂಡಾರಿ ನಾಯಕಿಯರಾಗಿದ್ದಾರೆ. ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ತಿಥಿ ಚಿತ್ರದ ಖ್ಯಾತಿಯ ಗಡ್ಡಪ್ಪ ಹಾಗೂ ಅವರ ಸ್ನೇಹಿತನಾಗಿ ಮಜಾಟಾಕೀಸ್ನ ಪವನ್ ನಟಿಸಿದ್ದಾರೆ. ನೆಲೆಮನೆ ರಾಘವೇಂದ್ರ, ಪಾಲ್ಸ್ ನಾಗ ಅವರ ಸಾಹಿತ್ಯವಿರುವ ನಾಲ್ಕು ಹಾಡುಗಳಿಗೆ ಎಡ್ವರ್ಡ್ ಷಾ ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಕೆ. ಮತ್ತು ಸೌಭಾಗ್ಯಮ್ಮ ಚಿತ್ರದ ನಿರ್ಮಾಣ ಮಾಡಿದ್ದಾರೆ ಎಂದ ಅವರು, ವಿಶೇಷ ಆ್ಯಕ್ಷನ್ ಹಾಗೂ ಸಸ್ಪೆನ್ಸ್ ಕಥೆ ಒಳಗೊಂಡಿರುವ ಜರ್ಕ್ ಚಿತ್ರವನ್ನು ಪ್ರತಿಯೊಬ್ಬರು ನೋಡಬೇಕು ಎಂದು ಮನವಿ ಮಾಡಿದರು.
ನಾಯಕ ನಟ ಕೃಷ್ಣರಾಜ್, ನಾಯಕ ನಟಿಯರಾದ ಆಶಾ ಭಂಡಾರಿ,ನಿತ್ಯಾರಾಜ್ ಹಾಗೂ ಚಿತ್ರದ ನಿರ್ಮಾಪಕ ರವಿಕುಮಾರ, ಕಂಪಾಲಿ ಇದ್ದರು.