ಧಾರವಾಡ : ಶಿಕ್ಷ ಕರು ಮತ್ತು ಪದವೀಧರರು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರನ್ನು ಬೆಂಬಲಿಸುವ ಮೂಲಕ ಅವರ ಗೆಲುವಿಗೆ ಕೈ ಜೋಡಿಸಬೇಕು ಎಂದು ಕೆಪಿಸಿಸಿ ಶಿಕ್ಷ ಕರ ಮತ್ತು ಪದವೀಧರ ಘಟಕದ ರಾಜ್ಯಾಧ್ಯಕ್ಷ ಡಾ.ಆರ್.ಎಂ.ಕುಬೇರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಬೆಂಬಲಿಸಿ ಮಾತನಾಡಿದ ಅವರು, 2019ರ ಚುನಾವಣೆ ಔಚಿತ್ಯ ಪೂರ್ಣವಾಗಿದ್ದು, ಬುದ್ಧಿವಂತ ಮತದಾರರು ಹೆಚ್ಚು ಮತಗಳನ್ನು ನೀಡಿ ವಿನಯ ಕುಲಕರ್ಣಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ದೇಶದ ಚಿಂತಕರು ಹೇಳುವ ಪ್ರಕಾರ ಕಳೆದ 5 ವರ್ಷದಲ್ಲಿ ದೇಶದ ಪ್ರಗತಿ ಆಗಿಲ್ಲ. ಜಿಡಿಪಿ ದರ 2.5ರಷ್ಟು ಕಡಿಮೆ ಆಗಿದೆ. ಉದ್ಯೋಗ ಅವಕಾಶ ಕುಸಿತಗೊಂಡಿದೆ. ಕೈಗಾರಿಕೆಗಳು ಮುಚ್ಚುವ ಮೂಲಕ ಆರ್ಥಿಕ ಸ್ಥಿತಿ ಕುಸಿದಿದೆ ಎಂದು ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು.
ಪ್ರಧಾನಿ ಮೋದಿ ನೋಟು ಅಮಾನ್ಯೀಕರಣ ಮಾಡಿ ಹಣಕಾಸು ವ್ಯವಸ್ಥೆ ಹಾಳು ಮಾಡುವುದರ ಜತೆಗೆ ಸಣ್ಣ ಉದ್ಯಮಗಳನ್ನು ಹಾಳು ಮಾಡಿದ್ದಾರೆ. ಜತೆಗೆ ಜಿಎಸ್ಟಿಯಿಂದ ಜನಸಾಮನ್ಯರಿಗೆ ನೋವು ತಂದಿದೆ. ಪ್ರಧಾನಿ ಮೋದಿ ಅವರು ಸುಳ್ಳಿನ ಸರದಾರ ಆಗಿದ್ದು, ಸುಳ್ಳಿನ ಮೂಲಕ ದೇಶದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಕಳೆದ ಮೂರು ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಕಾರ್ಯಕರ್ತರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದು, ಜೋಶಿ ಬಗ್ಗೆ ಅವರ ಪಕ್ಷ ದಲ್ಲಿಯೇ ಅಸಮಾಧಾನ ಇದೆ ಎಂದರು.
ಜೋಶಿ ಅವರು ನನ್ನ ರಾಜಕೀಯ ಜೀವನ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ ಅವರು, ನಾವು ಅವರನ್ನು ಸೋಲಿಸುವುದಕ್ಕಿಂತ ಬಿಜೆಪಿಯವರೇ ಜೋಶಿ ಅವರನ್ನು ಸೋಲಿಸಲಿದ್ದು, ಇದರಲ್ಲಿ ಎರಡು ಮಾತಿಲ್ಲ ಎಂದು ಕುಟುಕಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಪಿ.ಎಚ್. ನೀರಲಕೇರಿ, ಹನಮಂತ ಕಲ್ಮನಿ, ಪ್ರೊ.ಬಿ.ಜೆ.ಪೋಳ, ಶಿವಾನಂದ ಕಲ್ಲೂರ ಸೇರಿದಂತೆ ಇತರರು ಇದ್ದರು.
ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಬೆಂಬಲಿಸಿ ಮಾತನಾಡಿದ ಅವರು, 2019ರ ಚುನಾವಣೆ ಔಚಿತ್ಯ ಪೂರ್ಣವಾಗಿದ್ದು, ಬುದ್ಧಿವಂತ ಮತದಾರರು ಹೆಚ್ಚು ಮತಗಳನ್ನು ನೀಡಿ ವಿನಯ ಕುಲಕರ್ಣಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ದೇಶದ ಚಿಂತಕರು ಹೇಳುವ ಪ್ರಕಾರ ಕಳೆದ 5 ವರ್ಷದಲ್ಲಿ ದೇಶದ ಪ್ರಗತಿ ಆಗಿಲ್ಲ. ಜಿಡಿಪಿ ದರ 2.5ರಷ್ಟು ಕಡಿಮೆ ಆಗಿದೆ. ಉದ್ಯೋಗ ಅವಕಾಶ ಕುಸಿತಗೊಂಡಿದೆ. ಕೈಗಾರಿಕೆಗಳು ಮುಚ್ಚುವ ಮೂಲಕ ಆರ್ಥಿಕ ಸ್ಥಿತಿ ಕುಸಿದಿದೆ ಎಂದು ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಹರಿಹಾಯ್ದರು.
ಪ್ರಧಾನಿ ಮೋದಿ ನೋಟು ಅಮಾನ್ಯೀಕರಣ ಮಾಡಿ ಹಣಕಾಸು ವ್ಯವಸ್ಥೆ ಹಾಳು ಮಾಡುವುದರ ಜತೆಗೆ ಸಣ್ಣ ಉದ್ಯಮಗಳನ್ನು ಹಾಳು ಮಾಡಿದ್ದಾರೆ. ಜತೆಗೆ ಜಿಎಸ್ಟಿಯಿಂದ ಜನಸಾಮನ್ಯರಿಗೆ ನೋವು ತಂದಿದೆ. ಪ್ರಧಾನಿ ಮೋದಿ ಅವರು ಸುಳ್ಳಿನ ಸರದಾರ ಆಗಿದ್ದು, ಸುಳ್ಳಿನ ಮೂಲಕ ದೇಶದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಕಳೆದ ಮೂರು ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಕಾರ್ಯಕರ್ತರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದು, ಜೋಶಿ ಬಗ್ಗೆ ಅವರ ಪಕ್ಷ ದಲ್ಲಿಯೇ ಅಸಮಾಧಾನ ಇದೆ ಎಂದರು.
ಜೋಶಿ ಅವರು ನನ್ನ ರಾಜಕೀಯ ಜೀವನ ಹಾಳು ಮಾಡಿದ್ದಾರೆ ಎಂದು ಆರೋಪಿಸಿದ ಅವರು, ನಾವು ಅವರನ್ನು ಸೋಲಿಸುವುದಕ್ಕಿಂತ ಬಿಜೆಪಿಯವರೇ ಜೋಶಿ ಅವರನ್ನು ಸೋಲಿಸಲಿದ್ದು, ಇದರಲ್ಲಿ ಎರಡು ಮಾತಿಲ್ಲ ಎಂದು ಕುಟುಕಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಪಿ.ಎಚ್. ನೀರಲಕೇರಿ, ಹನಮಂತ ಕಲ್ಮನಿ, ಪ್ರೊ.ಬಿ.ಜೆ.ಪೋಳ, ಶಿವಾನಂದ ಕಲ್ಲೂರ ಸೇರಿದಂತೆ ಇತರರು ಇದ್ದರು.