ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ಪ್ರಹ್ಲಾದ್ ಜೋಶಿ ಪರ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಶ್ರೀರಾಮುಲು ಗುರುವಾರ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿದರು.
ಮಂಟೂರು ರಸ್ತೆ ಅರಳಿಕಟ್ಟಿ ಓಣಿಯಿಂದ ಆರಂಭವಾದ ರೋಡ್ ಶೋ ಕೆಇಬಿ ಸರ್ಕಲ್, ಬಾಕಳೆ ಗಲ್ಲಿ, ಗಣಪತಿ ದೇವಸ್ಥಾನ, ಗಣೇಶ ಪೇಟ ಮುಖ್ಯರಸ್ತೆ, ಮರಾಠಾ ಗಲ್ಲಿ, ಬ್ರಾಡವೇ ಗಲ್ಲಿಯಲ್ಲಿ ಹಾದು ದುರ್ಗದಬೈಲ್ ತಲುಪಿತು.
ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಶ್ರೀರಾಮುಲು ' ಭ್ರಷ್ಟಾಚಾರಿಗಳು ಮತ್ತು ಭ್ರಷ್ಟ ಪಕ್ಷಗಳು ಸೇರಿಕೊಂಡು, ದೇಶಕ್ಕಾಗಿ 24 ಗಂಟೆ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ನಡೆಸಿರುವ ಪ್ರಯತ್ನದಲ್ಲಿ ಸಫಲರಾಗುವುದಿಲ್ಲ 'ಎಂದು ಹೇಳಿದರು.
'ಮಹಾಘಟಬಂಧನ್ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುದೇ ಗೊತ್ತಿಲ್ಲ. ಅವರೇನಾದರೂ ಅಧಿಕಾರಕ್ಕೆ ಬಂದರೆ, ದಿನಕ್ಕೊಬ್ಬ ಪ್ರಧಾನಿ ಆದರೂ ಆಶ್ಚರ್ಯಪಡಬೇಕಿಲ್ಲ. ಅದಕ್ಕಾಗಿ ಮೈತ್ರಿಯನ್ನು ಅಭ್ಯರ್ಥಿಯನ್ನು ಬೆಂಬಲಿಸದೇ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಬೇಕು' ಎಂದು ಮನವಿ ಮಾಡಿದರು.
'ಕಾಂಗ್ರೆಸ್ಗೆ ಸೋಲಿನ ಭಯ ಕಾಡುತ್ತಿದೆ. ಅದಕ್ಕಾಗಿ ರಾಹುಲ್ಗಾಂಧಿ ಅಮೇಥಿ ಬಿಟ್ಟು ಕೇರಳಕ್ಕೆ ಪಲಾಯನ ಮಾಡಿದ್ದಾರೆ ಎಂದ ಅವರು, ಆರ್ಥಿಕವಾಗಿ 4ನೇ ಸ್ಥಾನದಲ್ಲಿರುವ ಭಾರತ ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ 1ನೇ ಸ್ಥಾನಕ್ಕೆ ಬರಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಮಾತನಾಡಿ, ಸಂಸದ ಪ್ರಹ್ಲಾದ್ ಜೋಶಿ ಅವರು ಉಡಾನ್ ಯೋಜನೆಯಲ್ಲಿ ವಿಮಾನ ನಿಲ್ದಾಣ, ಐಐಟಿ, ಸಿಆರ್ಎಫ್ ಫಂಡ್, ಫಸಲ್ ಬೀಮಾ ಯೋಜನೆ, ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದಾರೆ. ಆದರೆ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಕೊಡುಗೆ ಅವಳಿನಗರಕ್ಕೆ ಏನೂ ಇಲ್ಲ ಎಂದರು.
ಮಂಟೂರ ರಸ್ತೆ ಅರಳಿಕಟ್ಟಿ ಓಣಿ ಸಮುದಾಯ ಭವನದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದ ಶ್ರೀರಾಮುಲು ಅವರನ್ನು ಪಕ್ಷದ ಕಾರ್ಯಕರ್ತರು ಹೂವು ಎರಚುವ ಮೂಲಕ ಸ್ವಾಗತಿಸಿದರು.
ರೋಡ ಶೋನಲ್ಲಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಾಜಿ ಉಪ ಮೇಯರ್ ಲಕ್ಷ್ಮೀಭಾಯಿ ಬಿಜವಾಡ, ಮುಖಂಡರಾದ ಲಿಂಗರಾಜ ಪಾಟೀಲ, ಚಂದ್ರಶೇಖರ ಗೋಕಾಕ, ನಾರಾಯಣ ಜರತಾರಘರ, ಶಂಕ್ರಣ್ಣ ಬಿಜವಾಡ, ಶಿವಾನಂದ ಮುತ್ತಣ್ಣವರ, ಶಿವು ಮೆಣಸಿನಕಾಯಿ, ದೀಪಕ ಮೆಹರವಾಡೆ, ಬಸವರಾಜ ಅಮ್ಮಿನಭಾವಿ, ಸತೀಶ ಶೇಜವಾಡಕರ, ರಂಗಾ ಬದ್ದಿ, ವೆಂಕಟೇಶ ಹುಬ್ಬಳ್ಳಿ, ದೀಪಕ ಲಾಳಗೆ, ರಂಗನಾಯಕ ತಪೇಲಾ, ನಾಗರಾಜ ಟಗರಗುಂಟಿ, ಯಮನೂರ ಜಾಧವ, ಶಶಿಕಾಂತ ಬಿಜವಾಡ, ಪ್ರಭು ನವಲಗುಂದಮಠ ಹಾಗೂ ಮಹಿಳಾ ಮೋರ್ಚಾದ ಪಧಾಧಿಕಾರಿಗಳಾದ ಪ್ರತಿಭಾ ಪವಾರ, ಪೂರ್ಣಿಮಾ ಶಿಂಧೆ,
ಸುವರ್ಣಾ ಜಂಗಮ ಜಂಗಮಗೌಡ್ರ, ಶೋಭಾ ನಾಕೋಡ,ಸುವರ್ಣಾ ಕೊಠಾರಿ, ಪ್ರಮಿಳಮ್ಮಾ ಕೊಠಾರಿ, ನಿಲಮ್ಮಾ ಸೇರಿದಂತೆ ನೂರಾರು ಕಾರ್ಯಕರ್ತರು ರೋಡ ಶೋನಲ್ಲಿ ಭಾಗವಹಿಸಿದ್ದರು.
ಮಂಟೂರು ರಸ್ತೆ ಅರಳಿಕಟ್ಟಿ ಓಣಿಯಿಂದ ಆರಂಭವಾದ ರೋಡ್ ಶೋ ಕೆಇಬಿ ಸರ್ಕಲ್, ಬಾಕಳೆ ಗಲ್ಲಿ, ಗಣಪತಿ ದೇವಸ್ಥಾನ, ಗಣೇಶ ಪೇಟ ಮುಖ್ಯರಸ್ತೆ, ಮರಾಠಾ ಗಲ್ಲಿ, ಬ್ರಾಡವೇ ಗಲ್ಲಿಯಲ್ಲಿ ಹಾದು ದುರ್ಗದಬೈಲ್ ತಲುಪಿತು.
ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಶ್ರೀರಾಮುಲು ' ಭ್ರಷ್ಟಾಚಾರಿಗಳು ಮತ್ತು ಭ್ರಷ್ಟ ಪಕ್ಷಗಳು ಸೇರಿಕೊಂಡು, ದೇಶಕ್ಕಾಗಿ 24 ಗಂಟೆ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ನಡೆಸಿರುವ ಪ್ರಯತ್ನದಲ್ಲಿ ಸಫಲರಾಗುವುದಿಲ್ಲ 'ಎಂದು ಹೇಳಿದರು.
'ಮಹಾಘಟಬಂಧನ್ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುದೇ ಗೊತ್ತಿಲ್ಲ. ಅವರೇನಾದರೂ ಅಧಿಕಾರಕ್ಕೆ ಬಂದರೆ, ದಿನಕ್ಕೊಬ್ಬ ಪ್ರಧಾನಿ ಆದರೂ ಆಶ್ಚರ್ಯಪಡಬೇಕಿಲ್ಲ. ಅದಕ್ಕಾಗಿ ಮೈತ್ರಿಯನ್ನು ಅಭ್ಯರ್ಥಿಯನ್ನು ಬೆಂಬಲಿಸದೇ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಬೇಕು' ಎಂದು ಮನವಿ ಮಾಡಿದರು.
'ಕಾಂಗ್ರೆಸ್ಗೆ ಸೋಲಿನ ಭಯ ಕಾಡುತ್ತಿದೆ. ಅದಕ್ಕಾಗಿ ರಾಹುಲ್ಗಾಂಧಿ ಅಮೇಥಿ ಬಿಟ್ಟು ಕೇರಳಕ್ಕೆ ಪಲಾಯನ ಮಾಡಿದ್ದಾರೆ ಎಂದ ಅವರು, ಆರ್ಥಿಕವಾಗಿ 4ನೇ ಸ್ಥಾನದಲ್ಲಿರುವ ಭಾರತ ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ 1ನೇ ಸ್ಥಾನಕ್ಕೆ ಬರಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಮಾತನಾಡಿ, ಸಂಸದ ಪ್ರಹ್ಲಾದ್ ಜೋಶಿ ಅವರು ಉಡಾನ್ ಯೋಜನೆಯಲ್ಲಿ ವಿಮಾನ ನಿಲ್ದಾಣ, ಐಐಟಿ, ಸಿಆರ್ಎಫ್ ಫಂಡ್, ಫಸಲ್ ಬೀಮಾ ಯೋಜನೆ, ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದಾರೆ. ಆದರೆ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಕೊಡುಗೆ ಅವಳಿನಗರಕ್ಕೆ ಏನೂ ಇಲ್ಲ ಎಂದರು.
ಮಂಟೂರ ರಸ್ತೆ ಅರಳಿಕಟ್ಟಿ ಓಣಿ ಸಮುದಾಯ ಭವನದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದ ಶ್ರೀರಾಮುಲು ಅವರನ್ನು ಪಕ್ಷದ ಕಾರ್ಯಕರ್ತರು ಹೂವು ಎರಚುವ ಮೂಲಕ ಸ್ವಾಗತಿಸಿದರು.
ರೋಡ ಶೋನಲ್ಲಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಾಜಿ ಉಪ ಮೇಯರ್ ಲಕ್ಷ್ಮೀಭಾಯಿ ಬಿಜವಾಡ, ಮುಖಂಡರಾದ ಲಿಂಗರಾಜ ಪಾಟೀಲ, ಚಂದ್ರಶೇಖರ ಗೋಕಾಕ, ನಾರಾಯಣ ಜರತಾರಘರ, ಶಂಕ್ರಣ್ಣ ಬಿಜವಾಡ, ಶಿವಾನಂದ ಮುತ್ತಣ್ಣವರ, ಶಿವು ಮೆಣಸಿನಕಾಯಿ, ದೀಪಕ ಮೆಹರವಾಡೆ, ಬಸವರಾಜ ಅಮ್ಮಿನಭಾವಿ, ಸತೀಶ ಶೇಜವಾಡಕರ, ರಂಗಾ ಬದ್ದಿ, ವೆಂಕಟೇಶ ಹುಬ್ಬಳ್ಳಿ, ದೀಪಕ ಲಾಳಗೆ, ರಂಗನಾಯಕ ತಪೇಲಾ, ನಾಗರಾಜ ಟಗರಗುಂಟಿ, ಯಮನೂರ ಜಾಧವ, ಶಶಿಕಾಂತ ಬಿಜವಾಡ, ಪ್ರಭು ನವಲಗುಂದಮಠ ಹಾಗೂ ಮಹಿಳಾ ಮೋರ್ಚಾದ ಪಧಾಧಿಕಾರಿಗಳಾದ ಪ್ರತಿಭಾ ಪವಾರ, ಪೂರ್ಣಿಮಾ ಶಿಂಧೆ,
ಸುವರ್ಣಾ ಜಂಗಮ ಜಂಗಮಗೌಡ್ರ, ಶೋಭಾ ನಾಕೋಡ,ಸುವರ್ಣಾ ಕೊಠಾರಿ, ಪ್ರಮಿಳಮ್ಮಾ ಕೊಠಾರಿ, ನಿಲಮ್ಮಾ ಸೇರಿದಂತೆ ನೂರಾರು ಕಾರ್ಯಕರ್ತರು ರೋಡ ಶೋನಲ್ಲಿ ಭಾಗವಹಿಸಿದ್ದರು.