ಆ್ಯಪ್ನಗರ

ರಾಯಚೂರು ಪ್ರೇಮಿಗಳಿಗೆ ಧಾರವಾಡದಲ್ಲಿ ಕಂಕಣ ಭಾಗ್ಯ

ಧಾರವಾಡ : ಪ್ರೇಮ ವಿವಾಹಕ್ಕೆ ಮನೆಯವರು ವಿರೋಧಿಸಿದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಿಂದ ಬಂದಿದ್ದ ಯುವ ಪ್ರೇಮಿಗಳ ವಿವಾಹ ಸಮಾರಂಭ ಸಾಧನಾ ಮಹಿಳಾ ಸಾಂತ್ವಾನ ಸಂಸ್ಥೆ ನೇತೃತ್ವದಲ್ಲಿ ಸೋಮವಾರ ನಗರದ ಲಕ್ಷ್ಮೇ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಡೆಯಿತು.

Vijaya Karnataka 30 Jul 2019, 5:00 am
ಧಾರವಾಡ : ಪ್ರೇಮ ವಿವಾಹಕ್ಕೆ ಮನೆಯವರು ವಿರೋಧಿಸಿದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಿಂದ ಬಂದಿದ್ದ ಯುವ ಪ್ರೇಮಿಗಳ ವಿವಾಹ ಸಮಾರಂಭ ಸಾಧನಾ ಮಹಿಳಾ ಸಾಂತ್ವಾನ ಸಂಸ್ಥೆ ನೇತೃತ್ವದಲ್ಲಿ ಸೋಮವಾರ ನಗರದ ಲಕ್ಷ್ಮೇ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನಡೆಯಿತು.
Vijaya Karnataka Web DRW-29NIJAGUNI4
ಮದುವೆಯಾದ ಮಾರುತಿ ಸಿಂಗ್‌ ಹಾಗೂ ಭಾರತಿ ವಾಲಿ.


ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ನೌಕರರಾಗಿರುವ ಮಾರುತಿ ಸಿಂಗ್‌ ಹಾಗೂ ಭಾರತಿ ವಾಲಿ ನಾಲ್ಕು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಜಾತಿ ಅಡ್ಡಿ ಬಂದ ಕಾರಣ ಇಬ್ಬರ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಧಾರವಾಡಕ್ಕೆ ಇವರು ಸಾಧನಾ ಸಂಸ್ಥೆಯ ಇಸಬೆಲ್ಲಾ ಝೇವಿಯರ್‌ ಅವರ ಸಹಾಯ ಅರಸಿ ಬಂದಿದ್ದರು.

ಅದರಂತೆ ಇಸಬೆಲ್ಲಾ ಅವರು ಸೋಮವಾರ ಹಿಂದೂ ಧರ್ಮದ ಧಾರ್ಮಿಕ ವಿಧಿ-ವಿಧಾನಗಳ ಪ್ರಕಾರ ನಗರದ ಕೆಪಿಎಸ್ಸಿ ಕಾನೂನು ಕಾಲೇಜಿನ ಲಕ್ಷ್ಮೀ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ. ನವ ಜೋಡಿಗಳಿಗೆ ತಮ್ಮ ಸಂಸ್ಥೆಯಲ್ಲಿಯೇ ವಾಸ್ತವ್ಯ ಹೂಡಲು ಅವಕಾಶ ಮಾಡಿಕೊಟ್ಟಿದ್ದು, ದಂಪತಿಗೆ ರಕ್ಷ ಣೆ ನೀಡಲು ಹು-ಧಾ ಪೊಲೀಸ್‌ ಆಯುಕ್ತರು ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳಿಗೂ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಇಸಬೆಲ್ಲಾ, 'ಇಬ್ಬರೂ ವಯಸ್ಕರರು. ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಇಬ್ಬರಿಗೂ ತಂದೆಯ ಅನುಕಂಪದ ನೌಕರಿ ಸಿಕ್ಕಿದೆ. ಆದರೆ, ಮದುವೆಗೆ ಕುಟುಂಬದವರ ವಿರೋಧ ಬಂದಿದ್ದರಿಂದ ಸ್ವಲ್ಪ ಸಮಸ್ಯೆ ಆಗಿದೆ. ಈಗ ಮದುವೆ ಮಾಡಿಸಲಾಗಿದ್ದು, ಪೊಲೀಸರ ನೆರವಿನೊಂದಿಗೆ ಸುರಕ್ಷಿತವಾಗಿ ಅವರ ಊರಿಗೆ ಬಿಟ್ಟು ಪಾಲಕರನ್ನು ಮನವೊಲಿಸಲಾಗುವುದು' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ