ಆ್ಯಪ್ನಗರ

ಕನ್ನಡ ಭಾಷೆ ಸಂಪದ್ಭರಿತ ಭಾಷೆ

ಧಾರವಾಡ: ಅನ್ಯ ಭಾಷೆಗಳ ಪ್ರೀತಿ ಹಾಗೂ ನಮ್ಮೆಲ್ಲರ ಕನ್ನಡತನದ ಕೀಳರಿಮೆಯಿಂದ ಕನ್ನಡ ಭಾಷೆಯು ಸೊರಗುವುದರ ಜತೆಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಲೇಖಕಿ ಡಾ. ಸುನಂದಾ ನಿಂಬಣ್ಣವರ ಹೇಳಿದರು.

Vijaya Karnataka 2 Nov 2019, 5:00 am
ಧಾರವಾಡ: ಅನ್ಯ ಭಾಷೆಗಳ ಪ್ರೀತಿ ಹಾಗೂ ನಮ್ಮೆಲ್ಲರ ಕನ್ನಡತನದ ಕೀಳರಿಮೆಯಿಂದ ಕನ್ನಡ ಭಾಷೆಯು ಸೊರಗುವುದರ ಜತೆಗೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಲೇಖಕಿ ಡಾ. ಸುನಂದಾ ನಿಂಬಣ್ಣವರ ಹೇಳಿದರು.
Vijaya Karnataka Web 1MAILAR08_21
ಧಾರವಾಡದ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ64ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡತನದ ಹಿರಿಮೆ-ಗರಿಮೆ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.


ನಗರದ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ64ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡತನದ ಹಿರಿಮೆ-ಗರಿಮೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿಶುಕ್ರವಾರ ಮಾತನಾಡಿದರು.

ಕನ್ನಡಿಗರಾದ ನಾವು, ನಮ್ಮೆಲ್ಲರ ಹೃದಯದಿಂದ ಕನ್ನಡ ಭಾಷೆಯು ಹೊರ ಹೊಮ್ಮಿದಾಗ ಮಾತ್ರ ಕನ್ನಡ ಭಾಷೆಗೆ ಭವಿಷತ್ತಿನಲ್ಲಿಅಸ್ತಿತ್ವವನ್ನು ಗಟ್ಟಿಗೊಳಿಸಲು ಸಾಧ್ಯವಿದೆ. ಕನ್ನಡ ಭಾಷೆ ಬಹಳ ಸಂಪದ್ಭರಿತ ಭಾಷೆ ಶಾಸ್ತೀ್ರಯ ಭಾಷೆಯಾಗಿ ಮಾನ್ಯತೆ ಪಡೆದ ಈ ಭಾಷೆ ನಮ್ಮ ಕನ್ನಡಿಗರ ನರನಾಡಿಗಳಲ್ಲಿಅಡುಗೆ ಮನೆ ಭಾಷೆಯಾಗಿ ಹೊರ ಹೊಮ್ಮಬೇಕಾಗಿದೆ ಎಂದರು.

ಅತಿಥಿ ಸಂಪನ್ಮೂಲ ವ್ಯಕ್ತಿ, ಲೇಖಕಿ ವಿ. ಎನ್‌. ಕೀರ್ತಿವತಿ, ಕನ್ನಡ ಭಾಷೆಯು ತನ್ನದೆ ಆದ ಗಾಂಭೀರ್ಯತೆಯನ್ನು ಹೊಂದಿ ಜಗತ್ತಿನ ಎಲ್ಲಭಾಷೆಗಳಿಗೆ ಮಾದರಿಯಾಗಿದೆ. ಕನ್ನಡಿಗರಾದ ನಾವೆಲ್ಲಕೇವಲ ರಾಜ್ಯೋತ್ಸವಕ್ಕೆ ಸೀಮಿತರಾಗಿ ಕನ್ನಡದ ಬಗ್ಗೆ ಅಭಿಮಾನ ಹೊಂದುವದಕ್ಕಿಂತ ಪ್ರತಿ ನಿತ್ಯ ನಾವೆಲ್ಲಕನ್ನಡ ಭಾಷಾಭಿಮಾನಿಗಳಾಗಿ ನಮ್ಮ ಭಾಷೆಯ ಹಿರಿಮೆ-ಗರಿಮೆ ಮೆರೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಫ್‌.ಬಿ.ಕಣವಿ ಮಾತನಾಡಿದರು. ಸದಾಶಿವ ಮರ್ಜಿ, ಎಂ.ವಿ.ಅಡಿವೇರ, ಪ್ರಮೋದ ರಡ್ಡೇರ, ಎಂ.ಎಂ.ಗೊಲ್ಲರ, ಶ್ರೀಧರಗೌಡ ಪಾಟೀಲ, ಸಾನಿಯಾ ದೊಡಮನಿ, ಪಿ. ಎಫ್‌. ಗುಡೇನಕಟ್ಟಿ ಇದ್ದರು. ಎಸ್‌.ಎಸ್‌.ಜೋಶಿ ಸ್ವಾಗತಿಸಿದರು. ಡಾ. ಶಿವಾನಂದ ಟವಳಿ ನಿರೂಪಿಸಿದರು. ಪ್ರಮಿಳಾ ಜಕ್ಕಣ್ಣವರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ