ಆ್ಯಪ್ನಗರ

ಕನ್ನಡ ವಿಮರ್ಶೆಯ ಅಸ್ಮಿತೆ ಡಾ ಜಿಎಸ್‌ ಆಮೂರ

ದ.ರಾ.ಬೇಂದ್ರೆ ಕುರಿತು 'ಭುವನದ ಭಾಗ್ಯ', ಶ್ರೀರಂಗ ಸಾಹಿತ್ಯ ಕುರಿತಾದ 'ಆಧುನಿಕ ಕನ್ನಡ ಸಾಹಿತ್ಯದ ವಿರಾಟ್‌ ಪುರುಷ', 'ಯುಗದ ಕವಿ ಕುವೆಂಪು', 'ಗಿರೀಶ್‌ ಕಾರ್ನಾಡ್‌ ಹಾಗೂ ಭಾರತೀಯ ರಂಗಭೂಮಿ' ಇತ್ಯಾದಿ ಗ್ರಂಥಗಳು ಆಮೂರ ಅವರ ಸಮಗ್ರ ಅಧ್ಯಯನಕ್ಕೆ ನಿದರ್ಶನಗಳಾಗಿವೆ.

Vijaya Karnataka Web 28 Sep 2020, 10:44 pm
ಆಧುನಿಕ ಕನ್ನಡ ಸಾಹಿತ್ಯದ ಶ್ರೇಷ್ಠ ವಿಮರ್ಶಕರಲ್ಲಿ ಡಾ. ಜಿ.ಎಸ್‌.ಆಮೂರ ಅಗ್ರಗಣ್ಯರು. ಕನ್ನಡ ವಿಮರ್ಶೆಯ ವ್ಯಾಪ್ತಿ ಘನತೆಗಳನ್ನು ವಿಸ್ತರಿಸಿದ ಪ್ರಮುಖ ವಿಮರ್ಶಕರಾಗಿದ್ದರು. ಆಳವಾದ ಅಧ್ಯಯನ, ಮುಕ್ತ ಸಂವೇದನೆ, ಪರಿಪಕ್ವ ಪ್ರತಿಭೆ ಹಾಗೂ ಮೌಲಿಕ ರಚನೆಗಳಿಂದ ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆಯ ಆಯಾಮವನ್ನು ಹಿಗ್ಗಿಸಿದ ಕೀರ್ತಿ ಆಮೂರರವರಿಗೆ ಸಲ್ಲುತ್ತದೆ.
Vijaya Karnataka Web ಜಿಎಸ್‌ ಆಮೂರ
ಜಿಎಸ್‌ ಆಮೂರ


1961ರಲ್ಲಿ ಪ್ರಬಂಧಕ್ಕೆ ಕರ್ನಾಟಕ ವಿವಿಯಿಂದ ಪಿಎಚ್‌.ಡಿ.ಪಡೆದ ಅವರು, ವಿಮರ್ಶಾ ಕೃಷಿಯಲ್ಲಿ ಇಂಗ್ಲಿಷ್‌-ಕನ್ನಡ ಎರಡೂ ಭಾಷೆಗಳನ್ನು ಸಮಾನವಾಗಿ ಸ್ವೀಕರಿಸಿದ್ದರು. ಆದುದರಿಂದಲೇ ಇವೆರಡೂ ಭಾಷೆಗಳಲ್ಲಿ ಅವರ ವಿಮರ್ಶಾ ಬರವಣಿಗೆಯು ಅತ್ಯಂತ ಧೀಮಂತವಾಗಿ ಕಂಡಿತು.ನವ್ಯ ಸಂದರ್ಭದಲ್ಲಿ ಕೃತಿ ನಿಷ್ಠ ವಿಮರ್ಶೆಯಿಂದ ಹಿಡಿದು ಇಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಮರ್ಶೆಯವರೆಗೂ ಸಾಗುತ್ತದೆ. ಕನ್ನಡದಲ್ಲಿ ಮೂವತ್ತೈದಕ್ಕೂ ಮಿಕ್ಕಿದ ವಿಮರ್ಶಾ ಗ್ರಂಥಗಳನ್ನು ಪ್ರಕಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ದ.ರಾ.ಬೇಂದ್ರೆ ಕುರಿತು 'ಭುವನದ ಭಾಗ್ಯ', ಶ್ರೀರಂಗ ಸಾಹಿತ್ಯ ಕುರಿತಾದ 'ಆಧುನಿಕ ಕನ್ನಡ ಸಾಹಿತ್ಯದ ವಿರಾಟ್‌ ಪುರುಷ', 'ಯು.ಆರ್‌. ಅನಂತಮೂರ್ತಿ ವೈಚಾರಿಕತೆ ಹಾಗೂ ಸಾಹಿತ್ಯ', 'ಯುಗದ ಕವಿ ಕುವೆಂಪು', 'ಗಿರೀಶ್‌ ಕಾರ್ನಾಡ್‌ ಹಾಗೂ ಭಾರತೀಯ ರಂಗಭೂಮಿ' ಇತ್ಯಾದಿ ಗ್ರಂಥಗಳು ಆಮೂರ ಅವರ ಸಮಗ್ರ ಅಧ್ಯಯನಕ್ಕೆ ನಿದರ್ಶನಗಳಾಗಿವೆ.

ಇದಲ್ಲದೆ ಕನ್ನಡ ಕಾದಂಬರಿಯ ಬೆಳವಣಿಗೆ, ಅ.ನ.ಕೃಷ್ಣರಾಯರು, ವ್ಯವಸಾಯ, ಕಾಮಿಡಿ, ಕನ್ನಡದ ಕಥನ ಸಾಹಿತ್ಯ, ಕಾದಂಬರಿ, ಕನ್ನಡ ಕಥನ ಸಾಹಿತ್ಯ : ಸಣ್ಣಕಥೆ, ಸಾತ್ವಿಕ ಪಥ, ಕಾದಂಬರಿ ಸ್ವರೂಪ, ಅಮೃತವಾಹಿನಿ, ಶಾಂತಿನಾಥ ದೇಸಾಯಿ, ಬೇಂದ್ರೆ ಕಾವ್ಯದ ಪ್ರತಿಮಾ ಲೋಕ, ನಿಂದ ಹೆಜ್ಜೆ, ಕೊರಳು-ಕೊಳಲು, ನಾರಾಯಣರಾವ್‌ ಹುಯುಲಗೋಳರ ಸಮಗ್ರ ಸಾಹಿತ್ಯ, ಕೊರಡು ಕೊನರಿದಾಗ, ಆಧುನಿಕ ಕನ್ನಡ ವಿಮರ್ಶೆ ಎಂಬಿತ್ಯಾದಿ ಗ್ರಂಥಗಳನ್ನು ರಚಿಸುವುದರ ಮೂಲಕ ಕನ್ನಡ ವಿಮರ್ಶಾ ಕ್ಷೇತ್ರವನ್ನು ಹಿಗ್ಗಿಸಿದ್ದಾರೆ. ಆಮೂರರು ತಮ್ಮ ವ್ಯಕ್ತಿತ್ವದ ಅಭಿವ್ಯಕ್ತಿಗಾಗಿ ವಿಮರ್ಶೆ ಬರೆದವರಲ್ಲ. ಬದಲಾಗಿ ಕೃತಿ, ಕೃತಿಗಾರನನ್ನು ಮುನ್ನೆಲೆಗೆ ತರುವ ಕೆಲಸ ಮಾಡಿದ್ದಾರೆ. ಇದಕ್ಕೆ ಅವರ ವಿಮರ್ಶಾ ಕೃತಿಗಳೇ ಸಾಕ್ಷಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ