ಆ್ಯಪ್ನಗರ

ಹುಬ್ಬಳ್ಳಿ: ಪೊಲೀಸ್‌ ಠಾಣೆಯಲ್ಲಿ ಚಹಾ, ಕಾಫಿ ಬದಲು ಕಷಾಯ

ಈಗಾಗಲೇ ಕೇಶ್ವಾಪುರ, ವಿದ್ಯಾನಗರ, ಶಹರ, ಉಪನಗರ, ಕಸಬಾಪೇಟೆ, ಉತ್ತರ, ದಕ್ಷಿಣ, ಮತ್ತು ಪೂರ್ವ ಸಂಚಾರ ಪೊಲೀಸ್‌ ಠಾಣೆ ಸೇರಿದಂತೆ ಬಹುತೇಕ ಠಾಣೆಯ ಸಿಬ್ಬಂದಿಗೆ ಕಷಾಯ ನೀಡಲಾಗುತ್ತಿದೆ. ಈ ಠಾಣೆಗಳಲ್ಲಿಯೇ ಮಹಿಳಾ ಸಿಬ್ಬಂದಿ ಕಷಾಯ ತಯಾರಿಸಿ ಎಲ್ಲ ಸಿಬ್ಬಂದಿಗೆ ನೀಡುತ್ತಿದ್ದಾರೆ.

Vijaya Karnataka Web 24 Jul 2020, 6:11 pm
ಹುಬ್ಬಳ್ಳಿ: ಕೊರೊನಾ ನಿಯಂತ್ರಿಸಲು ಪೊಲೀಸರು ಸದಾ ಜನರ ಮಧ್ಯೆಯೇ ಇದ್ದು, ಅದರ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯ. ಹೀಗಾಗಿ ಅವರಲ್ಲಿರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹುಬ್ಬಳ್ಳಿ ಧಾರವಾಡ ಕಮಿಷನರೇಟ್‌ ವ್ಯಾಪ್ತಿಯ ಬಹುತೇಕ ಪೊಲೀಸ್‌ ಠಾಣೆಗಳಲ್ಲಿ ಕಷಾಯ ನೀಡಲಾಗುತ್ತಿದೆ.
Vijaya Karnataka Web ಕಷಾಯ
ಕಷಾಯ


ಈ ಮೊದಲು ಪೊಲೀಸ್‌ ಠಾಣೆಗಳಲ್ಲಿ ನಿತ್ಯ ಬೆಳಗ್ಗೆಯಿಂದ ಹಿಡಿದು ರಾತ್ರಿ ವೇಳೆಯಲ್ಲೂ ಚಹಾ, ಕಾಫಿ ನೀಡಲಾಗುತ್ತಿತ್ತು. ಆದರೀಗ ಅವಳಿನಗರದ ಪೊಲೀಸರನ್ನು ಕೊರೊನಾ ಬೆಂಬಿಡದೇ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಲ್ಲಿ ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಬೇಕಿದೆ. ಇದಕ್ಕೆ ಪೂರಕವಾಗಿ ಕಷಾಯ ನೀಡಲಾಗುತ್ತಿದೆ.

ಈಗಾಗಲೇ ಕೇಶ್ವಾಪುರ, ವಿದ್ಯಾನಗರ, ಶಹರ, ಉಪನಗರ, ಕಸಬಾಪೇಟೆ, ಉತ್ತರ, ದಕ್ಷಿಣ, ಮತ್ತು ಪೂರ್ವ ಸಂಚಾರ ಪೊಲೀಸ್‌ ಠಾಣೆ ಸೇರಿದಂತೆ ಬಹುತೇಕ ಠಾಣೆಯ ಸಿಬ್ಬಂದಿಗೆ ಕಷಾಯ ನೀಡಲಾಗುತ್ತಿದೆ. ಈ ಠಾಣೆಗಳಲ್ಲಿಯೇ ಮಹಿಳಾ ಸಿಬ್ಬಂದಿ ಕಷಾಯ ತಯಾರಿಸಿ ಎಲ್ಲಸಿಬ್ಬಂದಿಗೆ ನೀಡುತ್ತಿದ್ದಾರೆ. ಕೆಲ ಠಾಣೆಗಳಲ್ಲಿಕಷಾಯ ತಯಾರಿಸುವವರಿಲ್ಲದ ಕಾರಣ ಅಲ್ಲಿ ಚಹಾ, ಕಾಫಿಯೇ ಮುಂದುವರಿದಿದೆ.

ಕಷಾಯವಷ್ಟೇ ಅಲ್ಲದೇ, ಪೊಲೀಸರಿಗೆ ಜಿಲ್ಲಾ ಆಯುಷ್‌ ಇಲಾಖೆಯಿಂದಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ನೀಡಲಾಗುತ್ತಿದೆ. ಅಲ್ಲದೇ, ಸಿಬ್ಬಂದಿ ಕಡ್ಡಾಯವಾಗಿ ಮಾತ್ರೆಗಳನ್ನು ತೆಗೆದುಕೊಂಡು ಕೊರೊನಾದಿಂದ ದೂರವಿರಬೇಕೆಂದು ಮೇಲಧಿಕಾರಿಗಳಿಂದ ಹಿಡಿದು ಆಯಾ ಠಾಣಾಧಿಕಾರಿಗಳು ಸಲಹೆ ಜತೆಗೆ ಸೂಚನೆಯನ್ನು ನೀಡಿದ್ದಾರೆ.

ಹೊರಗಿನ ಆಹಾರವೂ ಬಂದ್‌

ಕೆಲ ಠಾಣೆಯಲ್ಲಿ ಸ್ವಯಂ ಹಾಗೂ ಸಿಬ್ಬಂದಿ ಹಿತದೃಷ್ಟಿಯಿಂದ ಮುಂಜಾಗ್ರತೆಯೊಂದಿಗೆ ಸಿಬ್ಬಂದಿಯೇ ಕಷಾಯ ತಯಾರಿಸಿ ನೀಡುತ್ತಿದ್ದಾರೆ. ಅಲ್ಲದೇ, ಮುಂಜಾಗ್ರತೆ ಹಿನ್ನೆಲೆಯಲ್ಲಿ ಹೊರಗಡೆಯ ಆಹಾರ ಪದಾರ್ಥದಿಂದ ಹಿಡಿದು ಎಲ್ಲವನ್ನೂ ದೂರ ಮಾಡಲಾಗಿದೆ. ಇದಕ್ಕೆ ಬಹುತೇಕ ಸಿಬ್ಬಂದಿಯೂ ಸಹಕಾರ ನೀಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ