ಆ್ಯಪ್ನಗರ

ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಕೆಸಿಸಿಐ ನಿರ್ಧಾರ

ಹುಬ್ಬಳ್ಳಿ : ಸತತ ಮಳೆ ಸುರಿದ ಪರಿಣಾಮ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉಂಟಾದ ನೆರೆ, ಪ್ರವಾಹದಿಂದ ಸಂತ್ರಸ್ತರಿಗೆ ವಿವಿಧ ಸಂಘ ಸಂಸ್ಥೆಗಳೊಂದಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನೆರವು ನೀಡಲು ನಿರ್ಧರಿಸಿದೆ.

Vijaya Karnataka 11 Aug 2019, 5:00 am
ಹುಬ್ಬಳ್ಳಿ : ಸತತ ಮಳೆ ಸುರಿದ ಪರಿಣಾಮ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉಂಟಾದ ನೆರೆ, ಪ್ರವಾಹದಿಂದ ಸಂತ್ರಸ್ತರಿಗೆ ವಿವಿಧ ಸಂಘ ಸಂಸ್ಥೆಗಳೊಂದಿಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನೆರವು ನೀಡಲು ನಿರ್ಧರಿಸಿದೆ.
Vijaya Karnataka Web HBL-1008-2-3-10 VIJU 1
ನೆರೆ, ಪ್ರಹವಾಹ ಸಂತ್ರಸ್ತರಿಗೆ ಸಹಾಯ ನೀಡುವ ಸಲುವಾಗಿ ಹುಬ್ಬಳ್ಳಿ ಕರ್ನಾಟಕ ಚೇಂಬರ್‌ ಆಫ್‌ ಕಾಮರ್ಸ್‌ನಲ್ಲಿ ನಡೆದ ಸಭೆಯಲ್ಲಿ ಶಂಕ್ರಣ್ಣ ಮುನವಳ್ಳಿ ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ಇದ್ದರು.


ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಶನಿವಾರ ನಡೆದ ಸಭೆಯಲ್ಲಿ ರೋಟರಿ ಕ್ಲಬ್‌, ಗುಜರಾತ ಸಮಾಜ, ಲಾಯನ್ಸ್‌ ಕ್ಲಬ್‌, ಬೇಲೂರ ಇಂಡಸ್ಟ್ರೀಯಲ್‌ ಏರಿಯಾ ಅಸೋಸಿಯೇಶನ್‌, ಲಕಮನಹಳ್ಳಿ ಇಂಡಸ್ಟ್ರೀಯಲ್‌ ಏರಿಯಾ ಅಸೋಸಿಯೇಶನ್‌, ಸಿವಿಲ್‌ ಎಂಜಿನಿಯರಿಂಗ್‌ ಕನ್ಸಲ್ಟಿಂಗ್‌ ಅಸೋಸಿಯೇಶನ್‌ ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡು ಈ ಬಗ್ಗೆ ಒಮ್ಮತದ ನಿರ್ಧಾರ ತೆಗೆದುಕೊಂಡರು.

ಅಧ್ಯಕ್ಷ ತೆ ವಹಿಸಿದ್ದ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಮಾತನಾಡಿ, ಎಡೆಬಿಡದೇ ಸುರಿಯುತ್ತಿರುವ ಮಹಾಮಳೆಗೆ ಉತ್ತರ ಕರ್ನಾಟಕದ ಜನಜೀವನ ಅಸ್ತವ್ಯಸ್ತವಾಗಿದೆ. ನದಿ,ಹಳ್ಳ, ಕೆರೆ ಉಕ್ಕಿ ಹರಿದು ಬೆಳೆ, ಆಸ್ತಿ-ಪಾಸ್ತಿ ನಷ್ಟವಾಗಿದ್ದು, ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಮಹೇಂದ್ರ ಲದ್ದಡ, ಅಶೋಕ ತೋಳನವರ, ಜಿ.ಕೆ.ಆದಪ್ಪಗೌಡರ,ಅಶೋಕ ಗಡಾದ, ರಮೇಶ ಎ.ಪಾಟೀಲ, ಸದಾನಂದ ಕಾಮತ, ಕಾಂತಿಲಾಲ ಪುರೋಹಿತ, ನರೇಶ ಶಹಾ, ಬಿ.ಎಸ್‌.ಬೀಳಗಿ, ಸುರೇಶ ಕಿರೇಸೂರ, ನಾಗರಾಜ ಯಲಿಗಾರ, ವಿವೇಕ ಗಬ್ಬೂರ, ಜಿ.ಡಿ.ಉಪಾಧ್ಯ, ಎಸ್‌.ಎಂ.ಸೋಮನಗೌಡರ, ಸಿದ್ದೇಶ್ವರ ಕಮ್ಮಾರ, ಎಂ.ಡಿ. ಪಾಟೀಲ, ಮಹಾಂತೇಶ ಕುಮಟಗಿ, ಜ್ಞಾನೇಶ ನಾಥು, ಜಿ.ಎಸ್‌. ವಾಸುಕಿ, ಮಾಲತೇಶ ಕುಲಕರ್ಣಿ, ದೀಪಕ ಪಾಟೀಲ, ರತಿ ಶ್ರೀನಿವಾಸನ್‌, ಭಾಗ್ಯಶ್ರೀ ಆಯಾಚಿತ ಇದ್ದರು.

ದೇಣಿಗೆ ನೀಡಿದ ವಸ್ತುಗಳನ್ನು ಯಾವ ರೀತಿ ತಲುಪಿಸಬೇಕು ಎನ್ನುವುದರ ಕುರಿತು ಕ್ರಿಯಾ ಯೋಜನೆ ರೂಪಿಸುವ ಸಭೆ ಆ.11ರಂದು ಸಂಜೆ 5ಕ್ಕೆ ಕರೆಯಲಾಗಿದೆ. ಆ.12ಕ್ಕೆ

ನೆರೆ, ಪ್ರವಾಹ ಪ್ರದೇಶಗಳಿಗೆ ತೆರಳಿ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತು ಹಾಗೂ ಔಷಧ ವಿತರಿಸಲು ಚಾಲನೆ ನೀಡಲಾಗುವುದು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ