ಆ್ಯಪ್ನಗರ

ಖಾದಿ ಬೃಹತ್‌ ಮಾರಾಟ ಮೇಳ ಇಂದಿನಿಂದ

ಹುಬ್ಬಳ್ಳಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ವಿಭಾಗೀಯ ಕಚೇರಿ ಹುಬ್ಬಳ್ಳಿ, ಎಂ.ಎಸ್‌.ಎಂ.ಇ. ಮತ್ತು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಇವರ ಸಂಯುಕ್ತ ಆಶ್ರಯದಲ್ಲಿರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ಬೃಹತ್‌ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಫೆ.20ರಿಂದ ಮಾರ್ಚ್ 5ರ

Vijaya Karnataka 20 Feb 2020, 5:00 am
ಹುಬ್ಬಳ್ಳಿ: ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ವಿಭಾಗೀಯ ಕಚೇರಿ ಹುಬ್ಬಳ್ಳಿ, ಎಂ.ಎಸ್‌.ಎಂ.ಇ. ಮತ್ತು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಇವರ ಸಂಯುಕ್ತ ಆಶ್ರಯದಲ್ಲಿರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ಬೃಹತ್‌ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಫೆ.20ರಿಂದ ಮಾರ್ಚ್ 5ರ ವರೆಗೆ ನಗರದ ಇಂದಿರಾ ಗಾಜಿನ ಮನೆಯಲ್ಲಿಹಮ್ಮಿಕೊಳ್ಳಲಾಗಿದೆ ಎಂದು ಕೆವಿಐಸಿ ನಿರ್ದೇಶಕ ಎಂ.ಜಗನ್ನಾಥ್‌ ರಾವ್‌ ಹೇಳಿದರು.
Vijaya Karnataka Web khadi massive sales fair from today
ಖಾದಿ ಬೃಹತ್‌ ಮಾರಾಟ ಮೇಳ ಇಂದಿನಿಂದ


ಬುಧವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಭಾರತ ಸರಕಾರ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿಉದ್ಯೋಗ ಸೃಷ್ಟಿಸುವ ಹಿನ್ನೆಲೆಯಲ್ಲಿಅನೇಕ ಖಾದಿ ಮತ್ತು ಗ್ರಾಮೋದ್ಯೋಗ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಾ ಬಂದಿದ್ದು, ಈ ನಿಟ್ಟಿನಲ್ಲಿಗ್ರಾಹಕರಿಗೆ ಖಾದಿ ಹಾಗೂ ಗ್ರಾಮೋದ್ಯೋಗ ಉತ್ಪನ್ನಗಳನ್ನು ಸರಬರಾಜು ಮಾಡಲು ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಮನ್‌ ಕಿ ಬಾತ್‌ನಲ್ಲಿಖಾದಿ ಬಗ್ಗೆ ಜನರಲ್ಲಿಜಾಗೃತಿ ಮೂಡಿಸಿದ ಪರಿಣಾಮ ಈಗ ಖಾದಿ ಬಟ್ಟೆಗಳ ಮಾರಾಟದಲ್ಲಿಶೇ.50ರಷ್ಟು ಹೆಚ್ಚಾಗಿದ್ದು, 2015-16ರಲ್ಲಿ110 ಕೋಟಿ ರೂ. 2018-19ರಲ್ಲಿ218 ಕೋಟಿ ರೂ. ಹಾಗೂ 2019-20ರಲ್ಲಿ375 ಕೋಟಿ ರೂ. ವಹಿವಾಟು ನಡೆಸಿದೆ ಎಂದರು.

ಫೆ.20ರಂದು ನಡೆಯಲಿರುವ ಮೇಳವನ್ನು ಹಿರಿಯ ಸಾಹಿತಿ ಪಾಟೀಲ್‌ ಪುಟ್ಟಪ್ಪ ಹಾಗೂ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಉದ್ಘಾಟಿಸುವರು. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಮಾಜಿ ಮೇಯರ್‌ ಸುಧೀರ್‌ ಸರಾಫ್‌, ಡಿಸಿ ಎಂ.ದೀಪಾ, ಮಾಜಿ ಪಾಲಿಕೆ ಸದಸ್ಯರಾದ ಮೋಹನ ಹಿರೇಮನಿ, ಬೀರಪ್ಪ ಖಂಡೇಕರ್‌ ಹಾಗೂ ವೈ.ಕೆ.ಬಾರಮತಿಕರ್‌, ಜಯವಿಭವ ಸ್ವಾಮಿ ಭಾಗವಹಿಸುವರು ಎಂದರು.

ಮಾರಾಟ ಮೇಳದಲ್ಲಿ75 ಮಳಿಗೆಗಳು ಇರಲಿದ್ದು, ರೇಷ್ಮೆ, ಖಾದಿಗಳ ಮೇಲೆ ಶೇ.30 ರಿಯಾಯಿತಿ ಇರುತ್ತದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿಕೆಕೆಜಿಎಸ್‌ ಕಾರ್ಯದರ್ಶಿ ಶಿವಾನಂದ ಮಠಪತಿ, ರಮೇಶ ಸಿದ್ಧಾಂತಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ