ಹುಬ್ಬಳ್ಳಿ : ಪಶ್ಚಿಮ ಬಂಗಾಳದಲ್ಲಿನ ವೈದ್ಯರ ಮೇಲಿನ ಹಲ್ಲೆ ಖಂಡಿಸ ಕಿಮ್ಸ…ನ ವೈದ್ಯರು ಹಾಗೂ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಶನಿವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ತಲೆಗೆ, ಕೈಗೆ ಬ್ಯಾಂಡೆಜ್ ಸುತ್ತಿಕೊಂಡು ಹಾಗೂ ಕಪ್ಪು ಪಟ್ಟಿ ಧರಿಸಿಕೊಂಡು ಪ್ರತಿಭಟನೆ ನಡೆಸಿದರು.
ಕಿಮ್ಸ…ನ ಹೊರರೋಗಿ ವಿಭಾಗವನ್ನು ಕೆಲಕಾಲ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರಿಂದ ರೋಗಿಗಳು ಪರದಾಡುವಂತಾಯಿತು. ಆದರೆ, ವೈದ್ಯರು ಹಣೆಗೆ ರಕ್ತದ ಗುರುತಿನ ಬ್ಯಾಂಡೆಜ್ ಕಟ್ಟಿಕೊಂಡಿದ್ದನ್ನು ನೋಡಿದ ರೋಗಿಗಳ ಸಂಬಂಧಿಗಳು ವೈದ್ಯರ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿ ಕೆಲವೇ ನಿಮಿಷಗಳಲ್ಲಿ ಕಿಮ್ಸ… ಆವರಣದಲ್ಲಿ ಜನ ಜಾತ್ರೆ ಸೇರಿತು. ಕೊನೆಗೆ ಅಲ್ಲಿ ನಡೆದಿರುವದು ವಿನೂತನ ಪ್ರತಿಭಟನೆ ಎಂಬುದನ್ನು ತಿಳಿದು ರೋಗಿಗಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.
ಪಶ್ವಿಮ ಬಂಗಾಳದಲ್ಲಿ ನಡೆದ ಘಟನೆ ಮುಂದೆ ರಾಜ್ಯದಲ್ಲಿಯೂ ನಡೆಯಬಹುದು. ಜೀವ ರಕ್ಷಣೆ ಮಾಡುವ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಬಗ್ಗೆ ದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕಿರಿಯ ವೈದ್ಯರ ಸಂಘಟನೆ ಅಧ್ಯಕ್ಷ ಡಾ. ಮಲ್ಲಪ್ಪ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಿರಿಯ ವೈದ್ಯರ ಸಂಘಟನೆ ಉಪಾಧ್ಯಕ್ಷ ಡಾ.ದರ್ಶನ, ಡಾ.ಮಾಲೇಗೌಡ, ಡಾ.ಗೋಪಿ, ಡಾ. ದನ್ಯಶ್ರೀ ಸಂಪಗಾವಿ,ಡಾ. ವರ್ಷ, ಡಾ.ಇಂಚರ ಸೇರಿದಂತೆ ನೂರಾರು ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ತಲೆಗೆ, ಕೈಗೆ ಬ್ಯಾಂಡೆಜ್ ಸುತ್ತಿಕೊಂಡು ಹಾಗೂ ಕಪ್ಪು ಪಟ್ಟಿ ಧರಿಸಿಕೊಂಡು ಪ್ರತಿಭಟನೆ ನಡೆಸಿದರು.
ಕಿಮ್ಸ…ನ ಹೊರರೋಗಿ ವಿಭಾಗವನ್ನು ಕೆಲಕಾಲ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರಿಂದ ರೋಗಿಗಳು ಪರದಾಡುವಂತಾಯಿತು. ಆದರೆ, ವೈದ್ಯರು ಹಣೆಗೆ ರಕ್ತದ ಗುರುತಿನ ಬ್ಯಾಂಡೆಜ್ ಕಟ್ಟಿಕೊಂಡಿದ್ದನ್ನು ನೋಡಿದ ರೋಗಿಗಳ ಸಂಬಂಧಿಗಳು ವೈದ್ಯರ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿ ಕೆಲವೇ ನಿಮಿಷಗಳಲ್ಲಿ ಕಿಮ್ಸ… ಆವರಣದಲ್ಲಿ ಜನ ಜಾತ್ರೆ ಸೇರಿತು. ಕೊನೆಗೆ ಅಲ್ಲಿ ನಡೆದಿರುವದು ವಿನೂತನ ಪ್ರತಿಭಟನೆ ಎಂಬುದನ್ನು ತಿಳಿದು ರೋಗಿಗಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.
ಪಶ್ವಿಮ ಬಂಗಾಳದಲ್ಲಿ ನಡೆದ ಘಟನೆ ಮುಂದೆ ರಾಜ್ಯದಲ್ಲಿಯೂ ನಡೆಯಬಹುದು. ಜೀವ ರಕ್ಷಣೆ ಮಾಡುವ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಬಗ್ಗೆ ದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕಿರಿಯ ವೈದ್ಯರ ಸಂಘಟನೆ ಅಧ್ಯಕ್ಷ ಡಾ. ಮಲ್ಲಪ್ಪ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಿರಿಯ ವೈದ್ಯರ ಸಂಘಟನೆ ಉಪಾಧ್ಯಕ್ಷ ಡಾ.ದರ್ಶನ, ಡಾ.ಮಾಲೇಗೌಡ, ಡಾ.ಗೋಪಿ, ಡಾ. ದನ್ಯಶ್ರೀ ಸಂಪಗಾವಿ,ಡಾ. ವರ್ಷ, ಡಾ.ಇಂಚರ ಸೇರಿದಂತೆ ನೂರಾರು ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.