ಆ್ಯಪ್ನಗರ

ಸರಕಾರಿ ಸೌಲಭ್ಯಗಳ ತಿಳಿವಳಿಕೆ ಕಾರಾರ‍ಯಗಾರ

ಹುಬ್ಬಳ್ಳಿ: ಡಾ.ಬಾಬಾಸಾಹೇಬ ಅಂಬೇಡ್ಕರ್‌ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ಸಹಕಾರ ಇಲಾಖೆ ಹಾಗೂ ನಲ್ಮ್‌ ವತಿಯಿಂದ ಆಯೋಜಿಸಿದ್ದ ಸರಕಾರಿ ಸೌಲಭ್ಯಗಳ ಕುರಿತ ಒಂದು ದಿನದ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ ಜಿ. ತಳವಾರ ಉದ್ಘಾಟಿಸಿದರು.

Vijaya Karnataka 26 Jan 2020, 5:00 am
ಹುಬ್ಬಳ್ಳಿ: ಡಾ.ಬಾಬಾಸಾಹೇಬ ಅಂಬೇಡ್ಕರ್‌ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗೆ ಸಹಕಾರ ಇಲಾಖೆ ಹಾಗೂ ನಲ್ಮ್‌ ವತಿಯಿಂದ ಆಯೋಜಿಸಿದ್ದ ಸರಕಾರಿ ಸೌಲಭ್ಯಗಳ ಕುರಿತ ಒಂದು ದಿನದ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ ಜಿ. ತಳವಾರ ಉದ್ಘಾಟಿಸಿದರು.
Vijaya Karnataka Web knowledge of government facilities
ಸರಕಾರಿ ಸೌಲಭ್ಯಗಳ ತಿಳಿವಳಿಕೆ ಕಾರಾರ‍ಯಗಾರ


ಇಲ್ಲಿನ ಮಂಜುನಾಥ ನಗರದ ಮಹಿಳಾ ಸ್ವ ಸಹಾಯ ಸಂಘದ ಕಚೇರಿಯಲ್ಲಿಶುಕ್ರವಾರ ನಡೆದ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಸರಕಾರದಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಸಿಗುವ ಹಲವಾರು ಸಬ್ಸಿಡಿ ಸಾಲ ಸೌಲಭ್ಯದ ಕುರಿತು ಅರಿವು ಹಾಗೂ ಸಾಲ ಮರುಪಾವತಿ ಬಗ್ಗೆ ತಿಳಿವಳಿಕೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ನಿವೃತ್ತ ಉಪ ನಿರ್ದೇಶಕ ಪಿ.ಪಿ.ಗಾಯಕವಾಡ ಮಾತನಾಡಿ, ಸಹಕಾರ ಸಂಘಗಳು ಹಾಗೂ ಸ್ವ ಸಹಾಯ ಸಂಘಗಳು ನಡೆದು ಬಂದ ದಾರಿ ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣದ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಬಸವರಾಜ ಜಿ. ಬಸಲಿಂಗೋಳ, ಸಂಘದ ಪ್ರತಿನಿಧಿಗಳಾದ ಗಿರಿಜಾ ಬಿ. ಬಸಲಿಂಗೋಳ, ಲಕ್ಷಿತ್ರ್ಮೕದೇವಿ ಎ. ಚಲವಾದಿ, ಪದ್ಮಾವತಿ ಎಸ್‌. ಗುಡಿಮನಿ, ಪ್ರೇಮಾಬಾಯಿ ಚಲವಾದಿ, ಮಂಜುಳಾ ಸೊಗಲದ, ಮಂಜುಳಾ ಮ. ಬಸಲಿಂಗೋಳ, ಪ್ರಿಯಾಂಕ ಆರ್‌. ಗುಡಿಮನಿ, ಮಂಜುಳಾ ಗಂಜಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ