ಆ್ಯಪ್ನಗರ

ಇಸ್ಕಾನ್‌ನಲ್ಲಿ ಕೃಷ್ಣಾಷ್ಟಮಿ ಸಂಭ್ರಮ

ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡದ ಇಸ್ಕಾನ್‌ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸೋಮವಾರ ವೈಭವದಿಂದ ಆಚರಿಸಲಾಯಿತು. ಬೆಳಗ್ಗೆ 4.30ಕ್ಕೆ ನೂರಾರು ಭಕ್ತರು ಶ್ರೀಕೃಷ್ಣನ ಜನ್ಮದ ಸ್ಮರಣೆ ನಡೆಸಿದರು. ವೃಂದಾವನವನ್ನು ವಿಶೇಷವಾಗಿ ತಯಾರಾದ, ಬಂಗಾರದ ಕುಸುರಿಯುಳ್ಳ ನೀಲಿ, ಕೆಂಪು ಬಣ್ಣದ ವಸ್ತ್ರಗಳಿಂದ ಶೃಂಗರಿಸಲಾಗಿತ್ತು.

Vijaya Karnataka 4 Sep 2018, 5:00 am
ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡದ ಇಸ್ಕಾನ್‌ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸೋಮವಾರ ವೈಭವದಿಂದ ಆಚರಿಸಲಾಯಿತು.
Vijaya Karnataka Web krishnasthami celebration in iskcon
ಇಸ್ಕಾನ್‌ನಲ್ಲಿ ಕೃಷ್ಣಾಷ್ಟಮಿ ಸಂಭ್ರಮ

ಬೆಳಗ್ಗೆ 4.30ಕ್ಕೆ ನೂರಾರು ಭಕ್ತರು ಶ್ರೀಕೃಷ್ಣನ ಜನ್ಮದ ಸ್ಮರಣೆ ನಡೆಸಿದರು. ವೃಂದಾವನವನ್ನು ವಿಶೇಷವಾಗಿ ತಯಾರಾದ, ಬಂಗಾರದ ಕುಸುರಿಯುಳ್ಳ ನೀಲಿ, ಕೆಂಪು ಬಣ್ಣದ ವಸ್ತ್ರಗಳಿಂದ ಶೃಂಗರಿಸಲಾಗಿತ್ತು.

ವಾತ್ಸಲ್ಯ ಸತ್ಸಂಗದ ಸದಸ್ಯರು ಮಹಾನ್‌ ವೈಷ್ಣವ ಆಚಾರ್ಯರು ಸಂಯೋಜಿಸಿದ ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು. ನಂತರ, ಭಕ್ತಾದಿಗಳಿಂದ ತಯಾರಿಸಲಾದ 108 ವಿವಿಧ ಬಗೆಯ ಭಕ್ಷ ್ಯಗಳನ್ನು ಶ್ರೀಕೃಷ್ಣ ಬಲರಾಮರಿಗೆ ನೈವೇದ್ಯಮಾಡಲಾಯಿತು. ಶುದ್ಧತುಪ್ಪದಿಂದ ತಯಾರಿಸಲಾದ 151 ಕಿಲೋ ಭಾರದ ಬೃಹತ್‌ ಲಡ್ಡುವನ್ನು ಭಗವಂತನಿಗೆ ಸಮರ್ಪಿಸಿದ್ದು ವಿಶೇಷವಾಗಿತ್ತು.

ವಿವಿಧ ಕಲಾವಿದರು ಅರ್ಪಿಸಿದ ಭಕ್ತಿ ಸಂಗೀತವು ಭಕ್ತರ ಮನಸೂರೆಗೊಂಡಿತು. ಮೋಹನ್‌ಗುರುಸ್ವಾಮಿ ಮತ್ತು ತಂಡದವರು ಭಕ್ತರೆಲ್ಲರು ಭಕ್ತಿಯ ಪರಾಕಾಷ್ಟೆ ತಲುಪುವಂತೆ ಮಾಡಿದರು. ನಂತರ ವಿದುಷಿ ಸಹನಾ ಭಟ್‌ ಹಾಗೂ ಸಂಗಡಿಗರು ನಡೆಸಿಕೊಟ್ಟ ಸತ್ಯಭಾಮ ಎಂಬ ನೃತ್ಯರೂಪಕ ಎಲ್ಲರ ಗಮನ ಸೆಳೆಯಿತು.

ಮಹಾಭಿಷೇಕವನ್ನು ಶಂಖನಾದದೊಂದಿಗೆ ಆರಂಭಿಸಲಾಯಿತು. ಸ್ವರ್ಣ ಪೀಠದ ಮೇಲೆ ಆರ್ಚಾ ವಿಗ್ರಹಗಳನ್ನು ಸ್ಥಾಪಿಸಿ ವಿಧ ಬಗೆಯ ಉಪಚಾರಗಳನ್ನು ಸಮರ್ಪಿಸಲಾಯಿತು. ನಂತರ ವಿಗ್ರಹಗಳಿಗೆ ಗಂಧದ ಏಣ್ಣೆಯನ್ನು ಪೂಸಲಾಯಿತು. ನಂತರ ಎಳ್ಳು, ಶುದ್ಧೋದಕ ಸ್ನಾನ, ಪಂಚಗವ್ಯ( ಹಾಲು, ಮೊಸರು, ತುಪ್ಪ, ಗೋಮೂತ್ರ, ಮತ್ತು ಗೋಮಯದ ಮಿಶ್ರಣ) ಸ್ನಾನ, ಪಂಚಾಮೃತ (ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಬೆಲ್ಲದ ನೀರಿನ ಮಿಶ್ರಣ)ಸ್ನಾನ, ರತ್ನೋದಕ(ಅಮೂಲ್ಯವಾದ ಹರಳುಗಳು ಮತ್ತು ಬಂಗಾರವನ್ನು ಅದ್ದಿದ ನೀರು)ಸ್ನಾನ, ಫಲೋದಕ (ಎಲ್ಲ ಬಗೆಯ ಹಣ್ಣುಗಳ ರಸಗಳು)ಸ್ನಾನ, ಮುಂತದವುಗಳಿಂದ ನೆರವೇರಿಸಲಾದ ಮಹಾಭಿಷೇಕವು ಸಮಾರೋಪಗೊಂಡಿತು.

ಇಸ್ಕಾನ್‌, ಹುಬ್ಬಳ್ಳಿ- ಧಾರವಾಡದ ಅಧ್ಯಕ್ಷ ರಾಜೀವ ಲೋಚನ ದಾಸ ಅವರು ಶ್ರೀಕೃಷ್ಣನÜ ಅವತಾರ ಮತ್ತು ಅವನ ಲೀಲೆಗಳನ್ನು ಕುರಿತು ಪ್ರವಚನ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ