ಆ್ಯಪ್ನಗರ

ಪ್ರಾಮಾಣಿಕತೆ ಮೆರೆದ ಕೆಎಸ್ಆರ್‌ಟಿಸಿ ಸಾರಿಗೆ ನಿಯಂತ್ರಣಾಧಿಕಾರಿ

ಕೆಎಸ್ಆರ್‌ಟಿಸಿ ಸಾರಿಗೆ ನಿಯಂತ್ರಣಾಧಿಕಾರಿ ಪ್ರಾಮಾಣಿಕತೆ ಮೆರೆದಿದ್ದು, ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಅಧಿಕಾರಿ ಮಹಿಳೆಗೆ ಮರಳಿಸಿದ್ದಾರೆ. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ ಬಸ್ ಇಳಿಯುವಾಗ ಮಹಿಳೆ ಅಪಾರ ಮೌಲ್ಯದ ಒಡವೆ ಬಿಟ್ಟು ಕೆಳಗೆ ಇಳಿದಿದ್ದರು.

Vijaya Karnataka Web 22 Jun 2018, 1:06 pm
ಹುಬ್ಬಳ್ಳಿ: ಕೆಎಸ್ಆರ್‌ಟಿಸಿ ಸಾರಿಗೆ ನಿಯಂತ್ರಣಾಧಿಕಾರಿ ಪ್ರಾಮಾಣಿಕತೆ ಮೆರೆದಿದ್ದು, ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಅಧಿಕಾರಿ ಮಹಿಳೆಗೆ ಮರಳಿಸಿದ್ದಾರೆ. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ ಬಸ್ ಇಳಿಯುವಾಗ ಮಹಿಳೆ ಅಪಾರ ಮೌಲ್ಯದ ಒಡವೆ ಬಿಟ್ಟು ಕೆಳಗೆ ಇಳಿದಿದ್ದರು.
Vijaya Karnataka Web ksrtc bus


ಸುಮಾರು 2.50 ಲಕ್ಷ ಮೌಲ್ಯದ ಆಭರಣ ಹಾಗೂ ದಾಖಲೆಗಳಿದ್ದ ಲಗೇಜ್ ಬಿಟ್ಟು ಅನುಸೂಯಮ್ಮ ಎಂಬ ಮಹಿಳೆ ಬಸ್‌ನಿಂದ ಕೆಳಗಿಳಿದಿದ್ದರು. ಕಲಘಟಗಿಯಿಂದ ಹುಬ್ಬಳ್ಳಿಗೆ ಬಂದು ಬಿಜಾಪುರಕ್ಕೆ ಮಹಿಳೆ ಹೊರಟಿದ್ದಳು. ಆದರೆ, ಈ ವೇಳೆ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಿಂದ ಬಸ್ ಹೊರಟು ಹೋಗಿದ್ದನ್ನು ಕಂಡು ಮಹಿಳೆ ಗಾಬರಿಯಾಗಿದ್ದಾರೆ. ಕೂಡಲೇ ಹಳೇ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕರಿಗೆ ಅನುಸೂಯಮ್ಮ ದೂರು ನೀಡಿದ್ದಾರೆ.

ಈ ದೂರನ್ನು ಆಲಿಸಿ ಬಸ್ ಅನ್ನು ಒಂದು ಗಂಟೆಯೊಳಗೆ ಪತ್ತೆ ಹಚ್ಚಿದ ಕೆಎಸ್ಆರ್‌ಟಿಸಿ ನಿಯಂತ್ರಕ ಲಕ್ಷ್ಮಣ ಡೋಂಗರೆ ಪೊಲೀಸರ ಸಮ್ಮುಖದಲ್ಲಿಯೇ ಲಗೇಜ್ ಸಮೇತ ಆಭರಣಗಳನ್ನು ಮಹಿಳೆಗೆ ಮರಳಿಸಿದ್ದಾರೆ. ಇನ್ನು, ಸಾರಿಗೆ ಇಲಾಖೆಯ ಅಧಿಕಾರಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ