ಆ್ಯಪ್ನಗರ

ಸಿಬ್ಬಂದಿ ಕೊರತೆ: ಅಭಿವೃದ್ಧಿಗೆ ಹಿನ್ನಡೆ

ಅಳ್ನಾವರ : ಪಟ್ಟಣದ ಅಭಿವೃದ್ಧಿಗಾಗಿ ಸರಕಾರದಿಂದ ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಸಿಬ್ಬಂದಿಯ ಕೊರತೆ ಅಡಚಣೆಯಾಗುತ್ತಿದೆ. ಕೂಡಲೇ ಅಗತ್ಯ ಸಿಬ್ಬಂದಿ ನಿಯೋಜಿಸುವಂತೆ ಸದಸ್ಯರು ಡಿಸಿಯಿಂದ ಶಾಸಕರು ಸಚಿವರವರೆಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಿಲ್ಲದಂತಾಗಿದೆ ಎಂಬ ಜನರಿಂದ ದೂರು ಕೇಳಿ ಬಂದಿದೆ.

Vijaya Karnataka 12 Jun 2019, 5:00 am
ಅಳ್ನಾವರ : ಪಟ್ಟಣದ ಅಭಿವೃದ್ಧಿಗಾಗಿ ಸರಕಾರದಿಂದ ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲು ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಸಿಬ್ಬಂದಿಯ ಕೊರತೆ ಅಡಚಣೆಯಾಗುತ್ತಿದೆ. ಕೂಡಲೇ ಅಗತ್ಯ ಸಿಬ್ಬಂದಿ ನಿಯೋಜಿಸುವಂತೆ ಸದಸ್ಯರು ಡಿಸಿಯಿಂದ ಶಾಸಕರು ಸಚಿವರವರೆಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಿಲ್ಲದಂತಾಗಿದೆ ಎಂಬ ಜನರಿಂದ ದೂರು ಕೇಳಿ ಬಂದಿದೆ.
Vijaya Karnataka Web lack of staff backward development
ಸಿಬ್ಬಂದಿ ಕೊರತೆ: ಅಭಿವೃದ್ಧಿಗೆ ಹಿನ್ನಡೆ


ಸುಮಾರು 17 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಅಳ್ನಾವರ ಪಟ್ಟಣ ತಾಲೂಕು ಕೇಂದ್ರದ ಹಿರಿಮೆ ಜತೆಗೆ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಇಂತಹದರಲ್ಲಿ ಸ್ಥಳೀಯ ಪಟ್ಟಣ ಪಂಚಾಯತಿಯಲ್ಲಿ ಸಿಬ್ಬಂದಿ ಕೊರತೆಯಾಗಿದ್ದು ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಸಾರ್ವಜನಿಕರು ಕಚೇರಿಗೆ ಅಲೆಯುವಂತಾಗಿದೆ.

ಸ್ಥಳೀಯ ಸಂಪನ್ಮೂಲಗಳ ಜತೆಗೆ ಸರಕಾರದಿಂದ ಬರುವ ಕೋಟಿಗಟ್ಟಲೆ ಅನುದಾನವನ್ನು ಮೂಲ ಉದ್ದೇಶಗಳಿಗೆ ಬಳಸಲು ಅಗತ್ಯಕ್ಕೆ ತಕ್ಕ ಸಿಬ್ಬಂದಿಯ ಅವಶ್ಯಕತೆ ಇದೆ .ಆದರೆ ಪಟ್ಟಣ ಪಂಚಾಯಿತಿಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬೀಳುತ್ತಿವೆ .ಸರಕಾರದ ಯೋಜನೆಗಳು ಜನರನ್ನು ತಲುಪದೆ ಅನುದಾನ ಬಳಕೆಯಾಗುತ್ತಿಲ್ಲ.

ಪಟ್ಟಣ ಪಂಚಾಯಿತಿಯಲ್ಲಿ 25 ಹುದ್ದೆಗಳು ಮಂಜೂರಾತಿ ಇದ್ದು ಇವರಲ್ಲಿ ಕೇವಲ 14 ಜನ ಕಾರ್ಯನಿರ್ವಹಿಸುತ್ತಿದ್ದಾರೆ . ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕಾಗಿರುವುದು ಸ್ಥಳಿಯ ಆಡಳೀತದ ಮೇಲಿದೆ .ಆದರೆ ಪಟ್ಟಣದ ಬಹುತೇಕ ಚರಂಡಿಗಳು ಗಬ್ಬೆದ್ದು ನಾರುತ್ತಿವೆ.ಇದಕ್ಕೆ ಕಾರ್ಮಿಕರ ಕೊರತೆಯೇ ಕಾರಣ ಎಂದು ಆರೋಗ್ಯ ವಿಭಾಗದವರು ಹೇಳುತ್ತಿದ್ದಾರೆ .ರಸ್ತೆಯ ಇಕ್ಕೆಲಗಳಲ್ಲಿ ಕಸ ಕಡ್ಡಿಗಳೇ ಕಾಣುತಿದ್ದು ಕಾಯಿಲೆಗಳು ಹರಡುತ್ತಿವೆ ಎಂದು ಸ್ಥಳೀಯ ಸಾರ್ವಜನಿಕರು ದೂರುತ್ತಿದ್ದಾರೆ .

ತಾಂತ್ರಿಕ ಸಿಬ್ಬಂದಿ

ಇಲ್ಲಿ ತಾಂತ್ರಿಕ ಸಿಬ್ಬಂದಿಯ ಅವಶ್ಯಕತೆ ಇದ್ದು ಅಭಿವೃದ್ಧಿ ಕೆಲಸಗಳ ಮೇಲ್ವಿಚಾರಣೆಗೆ ಪೂರ್ಣಾವಧಿ ತಾಂತ್ರಿಕ ಸಿಬ್ಬಂದಿ ತಕ್ಷ ಣ ನಿಯೋಜಿಸುವ ಅವಶ್ಯವಿದೆ.ಕಿರಿಯ ಅಭಿಯಂತರರು ಸಹ ನೀಯೊಜನೆ ಮೇಲಿದ್ದು ಹಲವಾರು ತಾತ್ಕಾಲಿಕವಾಗಿ ಅರೆಕಾಲಿಕ ಸಿಬ್ಬಂದಿಯಿರುತ್ತಾರೆ.

ಇಂತಹ ಪರಿಸ್ಥಿತಿಯಲ್ಲಿ ಇದ್ದ ಸಿಬ್ಬಂದಿಯಿಂದಲೇ ಈ ಹಿಂದಿನ ಮುಖ್ಯಾಧಿಕಾರಿ ವಾಯ್‌.ಜಿ.ಗದ್ದಿಗೌಡರು ಕಾರ್ಯನಿರ್ವಹಿಸಿಕೊಂಡು ಹೋಗುತ್ತಿದ್ದರು. ಆದರೆ ಸ್ಥಳೀಯ ಸಂಸ್ಥೆ ಚುನಾವಣೆ ನಿಮಿತ್ತ ಅವರನ್ನು ಬೇರೆಡೆ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಬಂದವರು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೇ ಕೇವಲ ಚುನಾವಣೆ ನಿಮಿತ್ತವಾಗಿ ನಿಯೋಜನೆಗೊಂಡಿದ್ದು ಎನ್ನುವಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ