ಆ್ಯಪ್ನಗರ

ಸೋಲಾರ್‌ ಪ್ಲಾಂಟ್‌ಗಾಗಿ ಜಮೀನು, ಲಿಖಿತ ಭರವಸೆಗೆ ಶಾಸಕರ ಸೂಚನೆ

ನವಲಗುಂದ : ತಾಲೂಕಿನ ಬೆಳಹಾರ ಗ್ರಾಮದ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿ ಸೋಲಾರ್‌ ವಿದ್ಯುತ್‌ ತಯಾರಿಸಲು ಖರೀದಿಸಲಾದ 73 ಎಕರೆ ಜಮೀನಿನಿಂದ ಉಳಿದ ರೈತರ ಜಮಿನುಗಳಲ್ಲಿನ ನೀರು ಸುಲಭವಾಗಿ ಹರಿಯುವುದು ಹಾಗೂ ಜಮೀನು ಖರೀದಿ ನೀಡಿದ ರೈತರಿಗೆ ಸೋಲಾರ

Vijaya Karnataka 9 Jun 2019, 5:00 am
ನವಲಗುಂದ : ತಾಲೂಕಿನ ಬೆಳಹಾರ ಗ್ರಾಮದ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿ ಸೋಲಾರ್‌ ವಿದ್ಯುತ್‌ ತಯಾರಿಸಲು ಖರೀದಿಸಲಾದ 73 ಎಕರೆ ಜಮೀನಿನಿಂದ ಉಳಿದ ರೈತರ ಜಮಿನುಗಳಲ್ಲಿನ ನೀರು ಸುಲಭವಾಗಿ ಹರಿಯುವುದು ಹಾಗೂ ಜಮೀನು ಖರೀದಿ ನೀಡಿದ ರೈತರಿಗೆ ಸೋಲಾರ ಕಂಪನಿಯಲ್ಲಿ ಉದ್ಯೋಗ ಕಲ್ಪಿಸುವ ಕುರಿತಾಗಿ ಸೋಲಾರ್‌ ವಿದ್ಯುತ್‌ ಕಂಪನಿ ಲಿಖಿತವಾಗಿ ಭರವಸೆ ನೀಡಬೇಕೆಂದು ಶಾಸಕ ಶಂಕರ ಪಾಟೀಲ್‌ ಮುನೇನಕೊಪ್ಪ ತಾಕೀತು ಮಾಡಿದರು.
Vijaya Karnataka Web DRW-8-nvl-1
ನವಲಗುಂದ ತಾಲೂಕಿನ ಬೆಳಹಾರ ಗ್ರಾಮದಲ್ಲಿ ಜರುಗಿದ ಗ್ರಾಮಸ್ಥರ ಸಭೆಯಲ್ಲಿ ಶಾಸಕ ಶಂಕರ ಪಾಟೀಲ್‌ ಮುನೇನಕೊಪ್ಪ ಮಾತನಾಡಿದರು.


ಶನಿವಾರ ಬೆಳಹಾರ ಗ್ರಾಮದಲ್ಲಿ ಶಾಸಕರ ಸಮ್ಮುಖದಲ್ಲಿ ಜರುಗಿದ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು. ವಿದ್ಯುತ್‌ ಉತ್ಪಾದಿಸುವ ಕಂಪನಿಯಿಂದ ಇತರೆ ಜಮೀನುಗಳಲ್ಲಿ ಉಳುಮೆ ಮಾಡುವ ರೈತರಿಗೆ ತೊಂದರೆಯಾಗದಂತೆ ಹಾಗೂ ಕಂಪನಿಗೆ ಜಮೀನು ನೀಡಿದ ರೈತರ ನಿರುದ್ಯೋಗಿ ವಿದ್ಯಾವಂತರಿಗೆ ಉದ್ಯೋಗ ನೀಡುವ ಭರವಸೆಯನ್ನು ಕಂಪನಿ ನೀಡಬೇಕು, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಖಾಸಗಿ ಸೋಲಾರ್‌ ಉತ್ಪಾದನಾ ಸಂಸ್ಥೆಯ ವ್ಯವಸ್ಥಾಪಕ ಕರ್ನಲ್‌ ಧನಂಜಯ್‌ ಮಾತನಾಡಿ ಬೆಳಹಾರ ಗ್ರಾಮ ವ್ಯಾಪ್ತಿಯಲ್ಲಿನ 73 ಎಕರೆ ಪ್ರದೇಶದಲ್ಲಿ 200 ಸೋಲಾರ್‌ ಪ್ಲಾಂಟ್‌ ನಿರ್ಮಿಸಿ ಪ್ರತಿದಿನ 20 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಕಂಪನಿ ಹೊಂದಿದೆ, ಈಗಾಗಲೇ ಎಲ್ಲ ಪ್ರಕ್ರಿಯೆಗಳು ಆರಂಭಗೊಳಿಸಲು ಸಿದ್ಧತೆ ನಡೆಸಲಾಗಿದ್ದು, ಕಂಪನಿ ಪಡೆದ ಜಮೀನಿನಿಂದಾಗಲಿ ಅಥವಾ ಕಂಪನಿ ಉತ್ಪಾದಿಸುವ ವಿದ್ಯುತ್‌ನಿಂದಾಗಲಿ ಗ್ರಾಮಸ್ಥರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು, ಜತೆಗೆ ಕಂಪನಿಗೆ ಬೇಷರತ್ತಾಗಿ ಜಮೀನು ನೀಡಿದ ರೈತರ ಮಕ್ಕಳಿಗೆ ಕಂಪನಿಯಲ್ಲಿ ಉದ್ಯೋಗ ನೀಡುವು ಕುರಿತಾಗಿ ಎರಡು ದಿನಗಳಲ್ಲಿ ಚರ್ಚಿಸಿ ನಿರ್ಧಾರ ಮಾಡಿ ಲಿಖಿತ ಭರವಸೆ ನೀಡುವುದಾಗಿ ಹೇಳಿದರು.

ತಾಪಂ ಇಒ ಪ್ರತಿಭಾ ಪಾಟೀಲ್‌,ಎಸ್‌.ಬಿ.ದಾನಪ್ಪಗೌಡರ,ಎ,ಬಿ,ಪಾಟೀಲ್‌, ಸೊಲಾರ್‌ ಕಂಪನಿಯ ಶರಣಪ್ಪ, ರವಿಚಂದ್ರ ದೊಡ್ಡಲಿಂಗಾಪುರ, ಪಾಂಡುರಂಗ ಜೋಶಿ, ಮಹೇಶ (ಆಂಧ್ರ ಪ್ರದೇಶ), ತಾ ಪಂ ಇಒ ಪವಿತ್ರಾ ಪಾಟೀಲ, ಪಿಡಿಒ ಗುರುಸಿದ್ದಪ್ಪ ಮಡಿವಾಳರ, ವೆಂಕಟೇಶ, ವಿ.ಬಿ. ಬರ್ಗೆ, ರಾಮಣ್ಣವರ,ಎಂ.ಬಿ. ಹಿರೇಗೌಡರ, ಶರಣಪ್ಪ ಕನಕಪ್ಪನವರ, ರುದ್ರಪ್ಪ ಬಳಗಲಿ, ಬಸಪ್ಪ ಶೆಲವಡಿ, ಸಿದ್ಧಾರ್ಥ ಪಾಟೀಲ, ರುದ್ರಪ್ಪ ಮಘೇಣ್ಣವರ, ನಿಂಗಪ್ಪ ಮಾದರ ಹಾಗೂ ಗ್ರಾಮದ ಮುಖ್ಯಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ