ಆ್ಯಪ್ನಗರ

ಆಕಾಶವಾಣಿಯಿಂದ ಭಾಷಾ ತಾರತಮ್ಯ; ಪಾಫು ಕಿಡಿ

ಧಾರವಾಡ : ಆಕಾಶವಾಣಿಯು ದೇಶವೆಂದರೆ ಉತ್ತರ ಭಾರತ ಅಷ್ಟೇ ಎಂದು ತಿಳಿದುಕೊಂಡಿರುವಂತಿದೆ ಎಂದು ನಾಡೋಜ ಡಾ.ಪಾಟೀಲ ಪುಟ್ಟಪ್ಪ ಆರೋಪಿಸಿದ್ದಾರೆ.

ವಿಕ ಸುದ್ದಿಲೋಕ 27 Mar 2016, 4:00 am
ಧಾರವಾಡ : ಆಕಾಶವಾಣಿಯು ದೇಶವೆಂದರೆ ಉತ್ತರ ಭಾರತ ಅಷ್ಟೇ ಎಂದು ತಿಳಿದುಕೊಂಡಿರುವಂತಿದೆ ಎಂದು ನಾಡೋಜ ಡಾ.ಪಾಟೀಲ ಪುಟ್ಟಪ್ಪ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅದು ಪ್ರತಿನಿತ್ಯ ಬೆಳಿಗ್ಗೆ ಸುದ್ದಿ ಬಿತ್ತರಣೆಯಲ್ಲಿ ಕೇವಲ ಪಂಜಾಬ, ಹರಿಯಾಣಾ, ದಿಲ್ಲಿ, ಹಿಮಾಚಲ ಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಮಾತ್ರ ಎಂದು ತಿಳಿದುಕೊಂಡಿರುತ್ತದೆ. ಭಾರತದ ಜನರು ಆ ರಾಜ್ಯಗಳ ಪತ್ರಿಕೆಗಳ ಅಭಿಪ್ರಾಯ ಏನೆಂಬುದನ್ನು ತಿಳಿದುಕೊಳ್ಳುತ್ತವೆ. ಆದರೆ ಭಾರತದ ಬೇರೆ ರಾಜ್ಯಗಳ ದೇಶಿಯ ಭಾಷೆಯ ಪತ್ರಿಕೆಗಳು ಏನು ಹೇಳುತ್ತವೆ ಎನ್ನುವುದನ್ನು ತಿಳಿಸುವುದೇ ಇಲ್ಲ.
Vijaya Karnataka Web language discrimination in the radio spark paphu
ಆಕಾಶವಾಣಿಯಿಂದ ಭಾಷಾ ತಾರತಮ್ಯ; ಪಾಫು ಕಿಡಿ


ಬೆಳಗಿನ ಸುದ್ದಿಯಲ್ಲಿ ಗುಜರಾತ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಓರಿಸ್ಸಾ ಮೊದಲಾದ ರಾಜ್ಯಗಳು ಏನು ಆಲೋಚಿಸುತ್ತವೆ ಎನ್ನುವುದನ್ನು ಆಕಾಶವಾಣಿ ತಿಳಿಸುವುದೇ ಇಲ್ಲ. ಈ ದೇಶಿಯ ಭಾಷೆಗಳ ರಾಜ್ಯಗಳಲ್ಲಿಯ ಜನರು ಏನು ಅಭಿಪ್ರಾಯ ಹೊಂದಿದ್ದಾರೆ ಎನ್ನುವುದು ತಿಳಿಯುವುದೇ ಇಲ್ಲ. ಆ ದೇಶಿಯ ಭಾಷೆಗಳ ರಾಜ್ಯಗಳು ಭಾರತದಲ್ಲಿ ಇಲ್ಲವೋ ಹೇಗೆ ? ಅಥವಾ ಭಾರತದಿಂದ ಸಿಡಿದು ಬೇರೆ ಹೋಗಿವೆಯೋ ಹೇಗೆ ? ಆಕಾಶವಾಣಿಗೆ ಅವೆಲ್ಲ ದೇಶಿಯ ಭಾಷೆಯ ಪತ್ರಿಕೆ ಏನು ಹೇಳುತ್ತಿವೆ ಎನ್ನುವುದು ಅಖಿಲ ಭಾರತಕ್ಕೆ ತಿಳಿಸುವದು ಆಕಾಶವಾಣಿಗೇಕೆ ಸಾಧ್ಯವಿಲ್ಲ ? ಹೀಗಿದ್ದು ಅದು ಅವೆಲ್ಲ ರಾಜ್ಯಗಳು ಭಾರತದಲ್ಲಿ ಇಲ್ಲ ಎನ್ನುವಂತೆ ಅವು ಅಭಿವದ್ಧಿ ಹೊಂದಿವೆ ಎನ್ನುವುದನ್ನು ತಿಳಿಸುವುದೇ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ತಿಳಿಸುವಂತೆ ಈ ದೇಶಿಯ ಪತ್ರಿಕೆಗಳ ಅಭಿಪ್ರಾಯವನ್ನೇಕೆ ದೇಶಕ್ಕೆ ತಿಳಿಸುವುದಿಲ್ಲ. ಆ ರಾಜ್ಯಗಳು ಭಾರತದಲ್ಲಿ ಇಲ್ಲವೋ ಹೇಗೆ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ