ಆ್ಯಪ್ನಗರ

ಪಠ್ಯೇತರ ಚಟುವಟಿಕೆಗಳಿಂದ ನಾಯಕತ್ವ ಗುಣ

ಹುಬ್ಬಳ್ಳಿ : ನಾವಿನ್ಯತೆ ಮತ್ತು ನಾಯಕತ್ವ ಗುಣಗಳನ್ನು ಮೇಳೈಸಿಕೊಳ್ಳುವುದು ಪಠ್ಯೇತರ ಚಟುವಟಿಕೆಗಳಿಂದ ಮಾತ್ರ ಸಾಧ್ಯ ಎಂದು ನಗರದ ಲೆಕ್ಕಪರಿಶೋಧಕ ಶೇಷಗಿರಿ ಕುಲಕರ್ಣಿ ತಿಳಿಸಿದರು.

Vijaya Karnataka 26 Mar 2019, 5:00 am
ಹುಬ್ಬಳ್ಳಿ : ನಾವಿನ್ಯತೆ ಮತ್ತು ನಾಯಕತ್ವ ಗುಣಗಳನ್ನು ಮೇಳೈಸಿಕೊಳ್ಳುವುದು ಪಠ್ಯೇತರ ಚಟುವಟಿಕೆಗಳಿಂದ ಮಾತ್ರ ಸಾಧ್ಯ ಎಂದು ನಗರದ ಲೆಕ್ಕಪರಿಶೋಧಕ ಶೇಷಗಿರಿ ಕುಲಕರ್ಣಿ ತಿಳಿಸಿದರು.
Vijaya Karnataka Web leadership quality from extracurricular activities
ಪಠ್ಯೇತರ ಚಟುವಟಿಕೆಗಳಿಂದ ನಾಯಕತ್ವ ಗುಣ


ಕೆಎಲ್‌ಇ ಸಂಸ್ಥೆಯ ಐಎಂಎಸ್‌ಆರ್‌ ಕಾಲೇಜಿನಲ್ಲಿ ಸ್ನಾತಕ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ 'ಎಕ್ಸಪೇರಿಯಾ-19' ಮ್ಯಾನೇಜಮೆಂಟ್‌ ಉತ್ಸವದಲ್ಲಿ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ನಾಯಕತ್ವ ಗುಣಗಳನ್ನು ತರಗತಿ ಕೋಣೆಗಳಲ್ಲಿ ಪಠ್ಯದಲ್ಲಿ ಬೆಳೆಸಿಕೊಳ್ಳುವುದು ಕಷ್ಟ ಸಾಧ್ಯ. ತರಗತಿ ಕೋಣೆಯ ಹೊರಗಡೆ ಪಠ್ಯೇತರ ಚಟುವಟಿಕೆಗಳಿಂದ ಮಾತ್ರ ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳು ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೃಜನಾತ್ಮಕ, ರಚನಾತ್ಮಕ ಗುಣಗಳನ್ನು ರೂಢಿಸಿಕೊಳ್ಳಬೇಕೆಂದರು.

ರೇಡಿಯೋ ಜಾಕಿ ಮೇಘಾ ಬಾರೋಟ್‌ ಮಾತನಾಡಿ, ಯಾವುದೇ ಕ್ಷೇತ್ರ ಇರಲಿ ಅದರಲ್ಲಿ ಸೋಲು ಅನುಭವಿಸಿದರೆ, ಅದರಿಂದ ಎದೆಗುಂದದೇ ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಐಎಂಎಸ್‌ಆರ್‌ ಎಂಬಿಎ ಕಾಲೇಜು ಪ್ರಾಚಾರ್ಯ ಡಾ. ಪ್ರಸಾದ ರೂಡಗಿ ಮಾತನಾಡಿ, ಇಂದಿನ ಯುವ ಸಮುದಾಯವು ಪ್ರಸ್ತುತ ಶಿಕ್ಷಣ ಪದ್ಧತಿ ಕುರಿತು ನಿರಾಸಕ್ತಿ ಜತೆಗೆ ನಿರುತ್ಸಾಹ ಹೊಂದಿದ್ದಾರೆ. ಹೆಚ್ಚು ಪ್ರಾಯೋಗಿಕ ಅಪೇಕ್ಷೆ ಹೊಂದಿರುವುದರಿಂದ ಸೃಜನಾತ್ಮಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಡಾ. ರಾಜೇಂದ್ರಪ್ರಸಾದ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಿರಣ ಸಿ.ಯು., ವಾಣಿ ಮಠದ ಪ್ರಾರ್ಥಿಸಿದರು. ಯುಸೂಫ್‌ಬೇಗ ಯರಗಟ್ಟಿ, ಐಶ್ವರ್ಯ ಕೊಟ್ರಶೆಟ್ಟಿ ನಿರೂಪಿಸಿದರು. ಡಾ. ಮುಕುಲ ಮಿಶ್ರಾ ವಂದಿಸಿದರು.

ಸ್ಪರ್ಧೆಯಲ್ಲಿ ಕೊಪ್ಪಳ, ಕುಮಟಾ, ಬೆಳಗಾವಿ, ಗದಗ, ಬಾಗಲಕೋಟ, ಹುಬ್ಬಳ್ಳಿ-ಧಾರವಾಡ ಸೇರಿದಂತೆ 20ಕ್ಕೂ ಹೆಚ್ಚು ಕಾಲೇಜು ತಂಡಗಳು ಭಾಗವಹಿಸಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ