ಆ್ಯಪ್ನಗರ

ಕಾನೂನು ಅರಿವು ಅವಶ್ಯ

ಹುಬ್ಬಳ್ಳಿ : ಕಾನೂನುಗಳು ನಮ್ಮ ಒಳಿತಿಗಾಗಿ ಇರುವಂತವು. ಪ್ರತಿಯೊಬ್ಬರಿಗೂ ಸುರಕ್ಷತೆ ಹಾಗೂ ಭದ್ರತೆ ಒದಗಿಸುತ್ತವೆ. ಇಂತಹ ಕಾನೂನುಗಳ ಅರಿವು ಪಡೆದು ಅವಗಳಿಂದ ಅಗತ್ಯ ನೆರವು ಪಡೆದುಕೊಳ್ಳಬೇಕು ಎಂದು ನ್ಯಾಯಧೀಶೆ ಅನುರಾಧ ಎಚ್‌.ಟಿ .ಹೇಳಿದರು.

Vijaya Karnataka 23 Jan 2020, 5:00 am
ಹುಬ್ಬಳ್ಳಿ : ಕಾನೂನುಗಳು ನಮ್ಮ ಒಳಿತಿಗಾಗಿ ಇರುವಂತವು. ಪ್ರತಿಯೊಬ್ಬರಿಗೂ ಸುರಕ್ಷತೆ ಹಾಗೂ ಭದ್ರತೆ ಒದಗಿಸುತ್ತವೆ. ಇಂತಹ ಕಾನೂನುಗಳ ಅರಿವು ಪಡೆದು ಅವಗಳಿಂದ ಅಗತ್ಯ ನೆರವು ಪಡೆದುಕೊಳ್ಳಬೇಕು ಎಂದು ನ್ಯಾಯಧೀಶೆ ಅನುರಾಧ ಎಚ್‌.ಟಿ .ಹೇಳಿದರು.
Vijaya Karnataka Web legal awareness is essential
ಕಾನೂನು ಅರಿವು ಅವಶ್ಯ


ಹುಬ್ಬಳ್ಳಿಯ ಗೋಕುಲದಲ್ಲಿತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಪಂಚಾಯಿತಿ, ವಕೀಲರ ಸಂಘ, ವಾರ್ತಾ, ಅಭಿಯೋಜನೆ, ಶಿಕ್ಷಣ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾರ್ಮಿಕ ಹಾಗೂ ಆರಕ್ಷಕ ಇಲಾಖೆಗಳ ಆಶ್ರಯದಲ್ಲಿಆಯೋಜಿಸಿದ್ದ ಕಾನೂನು ಸಾಕ್ಷರತಾ ರಥ ಹಾಗೂ ಜನತಾ ನ್ಯಾಯಾಲಯ ಕುರಿತ ಜನ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರಿಗೆ ಸಾಮಾನ್ಯ ಕಾನೂನುಗಳ ಅರಿವು ಇರಬೇಕು. ಇವುಗಳನ್ನು ಪಾಲಿಸುವುದರ ಜತೆಗೆ ಶೋಷಣೆಯ ವಿರುದ್ಧ ಅವುಗಳ ಸಹಾಯ ಪಡೆಯಬೇಕು. ಇದರಿಂದ ಉತ್ತಮ ರೀತಿಯಲ್ಲಿಜೀವನ ಕಟ್ಟಿಕೊಳ್ಳಬಹುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹುಬ್ಬಳ್ಳಿ ಶಹರ ತಹಸೀಲ್ದಾರ್‌ ಶಶಿಧರ ಮಾಡ್ಯಾಳ, ಇಂದಿಗೂ ದೇಶದಲ್ಲಿಬಹುಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಿಕ್ಷಣ ಪಡೆದವರಿಗೂ ಕಾನೂನಿನ ಅರಿವು ಸಂಪೂರ್ಣ ಇರುವುದಿಲ್ಲ. ಈ ನಿಟ್ಟಿನಲ್ಲಿಎಲ್ಲರೂ ಕಾನೂನು ಅರಿವು ಪಡೆದುಕೊಳ್ಳಬೇಕು ಎಂದರು.

ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ವಕೀಲ ವೈ.ಯು.ಮುದಿಗೌಡ್ರ,ಇಂದಿಗೂ ದೇಶದಲ್ಲಿಬಾಲ್ಯ ವಿವಾಹ ಪದ್ದತಿ ಜಾರಿಯಲ್ಲಿದೆ. ಬಾಲಕಿಯರ ಆರೋಗ್ಯದ ಸಿತ್ಥಿಗತಿ ಅರಿತು ಬಾಲ್ಯ ವಿವಾಹ ತಡೆಯಲು ಎಲ್ಲರೂ ಪಾಲ್ಗೊಳ್ಳಬೇಕು ಎಂದರು.

ಉಪನ್ಯಾಸಕ ಎಂ.ಎಸ್‌.ಹೀರೆಮಠ ಮಾತನಾಡಿದರು. ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಸಿ, ಎಸ್‌.ಎಂ.ಸ್ಪಾಪನಾಳ, ವಿನಯ ಎಸ್‌.ಪಾಟೀಲ…, ವಾರ್ತಾ ಇಲಾಖೆಯ ಅಧೀಕ್ಷಕ ವಿನೋದಕುಮಾರ ಭಗವತಿ, ರೈತ ಸಂಘದ ಅಧ್ಯಕ್ಷ ಬಸಪ್ಪ ಎಲಿಗಾರ, ವಕೀಲ ಎಂ.ಎಸ್‌.ಹೀರೆಮಠ, ಗ್ರಾಮದ ಹಿರಿಯರಾದ ರಾಮಣ್ಣ ಉಣಕಲ…, ಮಹಾದೇವಪ್ಪ ಪೊಜಾರ, ಶಂಕರ ಪಾಟೀಲ, ಮಡಿವಾಲಪ್ಪ ನಾಯ್ಕರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ