ಆ್ಯಪ್ನಗರ

ಸಿಎಂ ಯಡಿಯೂರಪ್ಪ ಅಧಿಕಾರ ತ್ಯಜಿಸಲಿ

ಆರ್ಥಿಕ ಅಶಿಸ್ತಿನಿಂದ ರಾಜ್ಯ ದಿವಾಳಿ ಎಂದ ರಾಯರೆಡ್ಡಿ ಸಿಎಂ ಯಡಿಯೂರಪ್ಪ ಅಧಿಕಾರ ತ್ಯಜಿಸಲಿ ವಿಕ ಸುದ್ದಿಲೋಕ ಹುಬ್ಬಳ್ಳಿದುರಾಡಳಿತ, ಭ್ರಷ್ಟಾಚಾರ, ದುಂದು ವೆಚ್ಚ ಹಾಗೂ ...

Vijaya Karnataka 20 Sep 2020, 5:00 am
ಹುಬ್ಬಳ್ಳಿ: ದುರಾಡಳಿತ, ಭ್ರಷ್ಟಾಚಾರ, ದುಂದು ವೆಚ್ಚ ಹಾಗೂ ಆರ್ಥಿಕ ಅಶಿಸ್ತಿನಿಂದಾಗಿ ರಾಜ್ಯ ಬಿಜೆಪಿ ಸರಕಾರ ಸಾಲದ ಸುಳಿಯಲ್ಲಿಸಿಲುಕಿ ದಿವಾಳಿಯಾಗಿದೆ. ರಾಜ್ಯ ಹಣಕಾಸು ಸಚಿವ ಹಾಗೂ ಸಿಎಂ ಆಗಿರುವ ಬಿ.ಎಸ್‌.ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿಯಬೇಕು ಎಂದು ಮಾಜಿ ಹಾಗೂ ಕಾಂಗ್ರೆಸ್‌ ಮುಖಂಡ ಬಸವರಾಜ ರಾಯರೆಡ್ಡಿ ಆಗ್ರಹಿಸಿದರು.
Vijaya Karnataka Web basavaraj rayreddi


ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ''ಆರ್ಥಿಕ ಅಶಿಸ್ತಿನಿಂದಾಗಿ ಜನಪರ ಯೋಜನೆಗಳನ್ನು ಜಾರಿಗೊಳಿಸಲು ಆಗುತ್ತಿಲ್ಲ. ಆಡಳಿತ ಅವ್ಯವಸ್ಥೆ ಹಾಗೂ ಸಚಿವರ ಭ್ರಷ್ಟಾಚಾರದಿಂದ ಹಿಂದಿನ ಯಾವ ಸರಕಾರವೂ ಮಾಡದಷ್ಟು ಸಾಲವನ್ನು ರಾಜ್ಯ ಬಿಜೆಪಿ ಸರಕಾರ ಮಾಡಿದೆ. ನ್ಯಾಯಯುತವಾಗಿ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲನ್ನು ಪಡೆಯಲು, 15ನೇ ಹಣಕಾಸು ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸುವುದು ಸೇರಿ ಯಾವುದೇ ಕಾರ್ಯವನ್ನು ಸರಕಾರ ಮಾಡುತ್ತಿಲ್ಲ'' ಎಂದರು.

53 ಸಾವಿರ ಕೋಟಿ ಸಾಲ:
''2009ಧಿ-10ರಲ್ಲಿಬಿಜೆಪಿ ನೇತೃತ್ವದ ಸರಕಾರ ದೊಡ್ಡ ಮಟ್ಟದ ಸಾಲ ಮಾಡಿ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿತ್ತು. ಈಗಲೂ ಅದು ಮುಂದುವರಿದಿದ್ದು, 53 ಸಾವಿರ ಕೋಟಿ ಸಾಲ ಮಾಡಿದೆ. ಆರ್ಥಿಕ ವ್ಯವಸ್ಥೆಯಲ್ಲಿಹೆಚ್ಚಿನ ಆದಾಯ ಸಂಗ್ರಹ ಹಾಗೂ ವಾಣಿಜ್ಯೋದ್ಯಮದ ಚಟುವಟಿಕೆಯಲ್ಲಿಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಆದರೇ ರಾಜ್ಯದಲ್ಲಿಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಿರಂತರ ಆರ್ಥಿಕ ದಿವಾಳಿಯತ್ತ ಸಾಗಿರುವುದು ಸರಕಾರದ ಅಂಕಿ-ಸಂಖ್ಯೆಗಳೆ ಸ್ಪಷ್ಟಪಡಿಸುತ್ತವೆ'' ಎಂದು ರಾಯರೆಡ್ಡಿ ದೂರಿದರು.

''15ನೇ ಹಣಕಾಸು ಆಯೋಗವು ಕರ್ನಾಟಕ, ಮಣಿಪುರ ಮತ್ತು ತೆಲಂಗಾಣಕ್ಕೆ ವಿಶೇಷ ಅನುದಾನವನ್ನು ನೀಡುವಂತೆ ಸೂಚಿಸಿದರೂ ಕೇಂದ್ರ ಅರ್ಥ ಸಚಿವರು ನಿರಾಕರಿಸಿದ್ದಾರೆ. ಇದರಿಂದ ರಾಜ್ಯಕ್ಕೆ 5 ಸಾವಿರ ಕೋಟಿ ನಷ್ಟವಾಗಿದೆ'' ಎಂದರು.

''ಸಿಎಂ ಬಿಎಸ್‌ವೈ ಅನಾವಶ್ಯಕವಾಗಿ ಕ್ಯಾಬಿನೆಟ್‌ ದರ್ಜೆಯ 6 ರಾಜಕೀಯ ಕಾರ್ಯದರ್ಶಿಗಳನ್ನು ನೇಮಿಸಿಕೊಂಡಿದ್ದಾರೆ. ಪ್ರತಿಯೊಬ್ಬರಿಂದ ತಿಂಗಳಿಗೆ 5 ಲಕ್ಷ ದುಂದು ವೆಚ್ಚವಾಗುತ್ತಿದೆ. ಹೀಗಾದರೆ ರಾಜ್ಯದ ಅರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆಯೇ? ರಾಜ್ಯದ ಅಭಿವೃದ್ಧಿಗೋಸ್ಕರ ಸಾಲ ಮಾಡಿದೆ ಸಚಿವ, ಶಾಸಕರ ವೇತನ ನೀಡಲು ಸಾಲ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ಅಧಿವೇಶನದಲ್ಲಿಕಾಂಗ್ರೆಸ್‌ ಪ್ರಶ್ನಿಸಲಿದೆ'' ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಹು-ಧಾ ಮಹಾನಗರ ಜಿಲ್ಲಾಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಅಲ್ತಾಫ್‌ ಹಳ್ಳೂರು ಇದ್ದರು.

ಡ್ರಗ್ಸ್‌ ಮಾಫಿಯಾ ವಿರುದ್ಧ ಕ್ರಮಕ್ಕೆ ಆಗ್ರಹ
ರಾಜ್ಯದಲ್ಲಿಇತ್ತೀಚೆಗೆ ಕೇಳಿ ಬರುತ್ತಿರುವ ಡ್ರಗ್ಸ್‌ ಮಾಫಿಯಾದ ಬಗ್ಗೆ ಸರಕಾರ ಸಮಗ್ರ ತನಿಖೆ ನಡೆಸುವ ಜತೆಗೆ ತಪ್ಪಿತಸ್ಥರು ಯಾರೇ ಇರಲಿ, ಯಾವುದೇ ಪಕ್ಷಕ್ಕೆ ಸೇರಿರಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕಾಂಗ್ರೆಸ್‌ ಮುಖಂಡರು ಭಾಗಿಯಾಗಿದ್ದರೆ ಪಕ್ಷದಿಂದ ಉಚ್ಚಾಟಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಒತ್ತಾಯಿಸಲಾಗುವುದು ಎಂದು ರಾಯರೆಡ್ಡಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ