ಆ್ಯಪ್ನಗರ

ಸಮುದಾಯ ಅಭಿವೃದ್ಧಿ ಚಿಂತನೆ ನಡೆಯಲಿ

ಹುಬ್ಬಳ್ಳಿ: ಸಮುದಾಯ ಭವನಗಳು ಕೇವಲ ಮದುವೆ- ಮುಂಜವಿಯಂಥ ಕಾರ್ಯಕ್ರಮಗಳಿಗೆ ಸೀಮಿತವಾಗದೇ, ಸಮಾಜದ ಒಳಿತು ಹಾಗೂ ಸಮುದಾಯದ ಅಭಿವೃದ್ಧಿ ಕುರಿತು ಚಿಂತನೆ ಮಾಡುವ ಚಾವಡಿಯಾಗಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.

Vijaya Karnataka 12 Nov 2019, 5:00 am
ಹುಬ್ಬಳ್ಳಿ: ಸಮುದಾಯ ಭವನಗಳು ಕೇವಲ ಮದುವೆ- ಮುಂಜವಿಯಂಥ ಕಾರ್ಯಕ್ರಮಗಳಿಗೆ ಸೀಮಿತವಾಗದೇ, ಸಮಾಜದ ಒಳಿತು ಹಾಗೂ ಸಮುದಾಯದ ಅಭಿವೃದ್ಧಿ ಕುರಿತು ಚಿಂತನೆ ಮಾಡುವ ಚಾವಡಿಯಾಗಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
Vijaya Karnataka Web let community development thinking take place
ಸಮುದಾಯ ಅಭಿವೃದ್ಧಿ ಚಿಂತನೆ ನಡೆಯಲಿ


ಇಲ್ಲಿನ ಹಳೇಹುಬ್ಬಳ್ಳಿ ಹಿರೇಪೇಟ್‌ನ ಘೋಡಕೆ ಓಣಿಯಲ್ಲಿ50 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಡ ಜನರ ಕಲ್ಯಾಣ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸುಸಜ್ಜಿತ ಭವನಗಳಿಲ್ಲಎಂಬ ಕೊರಗನ್ನು ದೂರ ಮಾಡಲು ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಕೋಟ್ಯಂತರ ರೂ. ವೆಚ್ಚದಲ್ಲಿಅನೇಕ ಭವನಗಳನ್ನು ನಿರ್ಮಿಸಲಾಗಿದೆ ಎಂದರು.

ಅನಾದಿ ಕಾಲದಿಂದಲೂ ಜನರ ಧಾರ್ಮಿಕ ಭಾವನೆಗಳಿಗೆ ಹೆಚ್ಚಿನ ಒತ್ತು ನೀಡಿ ಭಾವೈಕ್ಯತೆಯಿಂದ ಕೂಡಿ ಬಾಳಿದ ದೇಶ ನಮ್ಮದಾಗಿದೆ. ಸಾಧು- ಸಂತರು, ಗುರು- ಹಿರಿಯರ ಮಾರ್ಗದರ್ಶನದಲ್ಲಿಕಟ್ಟಿದ ನಾಡು ನಮ್ಮದಾಗಿದ್ದು, ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿಬದುಕುತ್ತಿರುವುದರಿಂದಲೇ ದೇಶದಲ್ಲಿಐಕ್ಯತೆ ಕಾಣಲು ಸಾಧ್ಯವಾಗಿದೆ ಎಂದರು.

ಢೋರ ಕಕ್ಕಯ್ಯ ಪಂಚ ಕಮಿಟಿ ಅಧ್ಯಕ್ಷ ಜಗನ್ನಾಥ ಮಾ. ಸೋನೊನೆ ಪ್ರಾಸ್ತವಿಕವಾಗಿ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯ ದಶರಥ ವಾಲಿ, ವಿಜನಗೌಡ ಪಾಟೀಲ, ಹುಡಾ ಮಾಜಿ ಸದಸ್ಯ ಪ್ರಭು ಪ್ರಭಾಕರ, ಮುಖಂಡ ಅರುಣ ಘೋಡಕೆ, ಗಣೇಶ ದೊಡ್ಡಮನಿ, ದೀಪಕ ಘೋಡಕೆ, ಲಕ್ಷ್ಮೇಕಾಂತ ನಾರಾಯಣಕರ, ಗಣೇಶ ಘೋಡಕೆ, ನಾರಾಯಣ, ಪರಶುರಾಮ, ಸುರೇಶ, ಲಿಡ್ಕರ್‌ ಸಂಯೋಜಕ ಎ.ಎಸ್‌. ರುದ್ರೇಶ, ವಲಯ ಆಯುಕ್ತ ಆನಂದ ಕಾಂಬಳೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ