ಆ್ಯಪ್ನಗರ

ಮೋದಿ ನಿಲುವು ಸ್ಪಷ್ಟಪಡಿಸಲಿ

ನವಲಗುಂದ: ಜ.3ರಂದು ತುಮಕೂರಿನಲ್ಲಿ ನಡೆಯುವ ರೈತ ಸಮಾವೇಶದಲ್ಲಿಪಾಲ್ಗೊಳ್ಳಲು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಮಹದಾಯಿ ನ್ಯಾಯಾಧಿಕರಣದ ಆದೇಶದಂತೆ ರಾಜ್ಯದ ಪಾಲಿನ 13.5ಟಿ.ಎಂಸಿ ನೀರನ್ನು ಬಳಸಿಕೊಳ್ಳಲು ಕಳಸಾ,ಬಂಡೂರಿ ಹಾಗೂ ಮಹದಾಯಿ ಯೋಜನೆ ಯೋಜನೆ ಅನುಷ್ಠಾನ ಕುರಿತು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಹೋರಾಟಗಾರರು ತಹಸೀಲ್ದಾರ ಮುಖಾಂತರ ಮನವಿ ಸಲ್ಲಿಸಿದರು.

Vijaya Karnataka 1 Jan 2020, 5:00 am
ನವಲಗುಂದ: ಜ.3ರಂದು ತುಮಕೂರಿನಲ್ಲಿ ನಡೆಯುವ ರೈತ ಸಮಾವೇಶದಲ್ಲಿಪಾಲ್ಗೊಳ್ಳಲು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಮಹದಾಯಿ ನ್ಯಾಯಾಧಿಕರಣದ ಆದೇಶದಂತೆ ರಾಜ್ಯದ ಪಾಲಿನ 13.5ಟಿ.ಎಂಸಿ ನೀರನ್ನು ಬಳಸಿಕೊಳ್ಳಲು ಕಳಸಾ,ಬಂಡೂರಿ ಹಾಗೂ ಮಹದಾಯಿ ಯೋಜನೆ ಯೋಜನೆ ಅನುಷ್ಠಾನ ಕುರಿತು ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಹೋರಾಟಗಾರರು ತಹಸೀಲ್ದಾರ ಮುಖಾಂತರ ಮನವಿ ಸಲ್ಲಿಸಿದರು.
Vijaya Karnataka Web let modi stand
ಮೋದಿ ನಿಲುವು ಸ್ಪಷ್ಟಪಡಿಸಲಿ


ಈ ಸಂದರ್ಭದಲ್ಲಿಮಾತನಾಡಿದ ಸುಭಾಸಚಂದ್ರಗೌಡ ಪಾಟೀಲ್‌ ಕಳೆದ 1625 ದಿನಗಳಿಂದ ಮಹದಾಯಿ,ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ಈ ಭಾಗದ ರೈತರು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅಲ್ಲದೇ ಮಹದಾಯಿ ನ್ಯಾಯಾಧಿಕರಣವೂ ರಾಜ್ಯದ ಪಾಲಿನ ನೀರಿನ ಬಳಕೆ ಮಾಡುವಂತೆ ತನ್ನ ತೀರ್ಪಿನಲ್ಲಿತಿಳಿಸಿದೆ. ಆದರೂ ಕೇಂದ್ರ ಸರಕಾರ ಕೇವಲ 2 ಸಂಸದರನ್ನು ಹೊಂದಿದ ಗೋವಾ ಸರಕಾರದ ಒತ್ತಡಕ್ಕೆ ಸಿಲುಕಿ ವಿಳಂಭ ಧೋರಣೆ ತಾಳುತ್ತಿರುವುದು ಈ ಭಾಗದ ರೈತರಿಗೆ ಬೇಸರವನ್ನುಂಟು ಮಾಡಿದೆ. ರಾಜ್ಯದಿಂದಲೂ ತಮ್ಮದೇ ಪಕ್ಷದ 25 ಶಾಸಕರನ್ನು ಆಯ್ಕೆ ಮಾಡಿದ ರಾಜ್ಯದ ಜನತೆಯ ಬಹುದಿನಗಳ ಬೇಡಿಕೆ ಈಡೇರಿಸುವಲ್ಲಿಮೀನ-ಮೇಷ ಎಣಿಸದೇ ಈ ಭಾಗದ ಪ್ರಮುಖ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿದರು. ರಾಜ್ಯದ ಎಲ್ಲಸಂಸದರು ಹಾಗೂ ಮುಖ್ಯಮಂತ್ರಿಗಳು ಈ ವಿಷಯವಾಗಿ ಪ್ರಧಾನಿಗಳ ಮೇಲೆ ಒತ್ತಡ ಹೇರಬೇಕೆಂದರು.

ಹೋರಾಟ ಸಮಿತಿ ಅಧ್ಯಕ್ಷ ಬಸಪ್ಪ ಬೀರಣ್ಣವರ, ಶಿವಪ್ಪ ಸಂಗಳದ,ಡಿ.ವಿ.ಕುರಟ್ಟಿ,ಮಲ್ಲಪ್ಪ ಉಪ್ಪಾರ,ಶಿವಪ್ಪ ಮೇಟಿ,ಗುರಪ್ಪ ಗಡ್ಡಿ,ಅಲ್ಲಾಭಕ್ಷ ಹಂಚಿನಾಳ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ