ಆ್ಯಪ್ನಗರ

ವಿಜ್ಞಾನ ಅರಿಯುವ ಕೆಲಸವಾಗಲಿ

ಧಾರವಾಡ: ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ವತಿಯಿಂದ ನಗರದ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ವಿಶಿಷ್ಟ -2020 ವಿಜ್ಞಾನ -ಶಿಕ್ಷಣ- ತಂತ್ರಜ್ಞಾನ ಮೇಳಕ್ಕೆ ಮಂಗಳವಾರ ಚಾಲನೆ ದೊರೆಯಿತು.

Vijaya Karnataka 8 Jan 2020, 5:00 am
ಧಾರವಾಡ: ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ವತಿಯಿಂದ ನಗರದ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ವಿಶಿಷ್ಟ -2020 ವಿಜ್ಞಾನ -ಶಿಕ್ಷಣ- ತಂತ್ರಜ್ಞಾನ ಮೇಳಕ್ಕೆ ಮಂಗಳವಾರ ಚಾಲನೆ ದೊರೆಯಿತು.
Vijaya Karnataka Web 07SM-1A_21
ಧಾರವಾಡದಲ್ಲಿನಡೆದ ವಿಶಿಷ್ಟ -2020 ವಿಜ್ಞಾನ -ಶಿಕ್ಷಣ- ತಂತ್ರಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಜ್ಞಾನ ವಸ್ತುಗಳ ದೃಶ್ಯ.


ಮೇಳ ಉದ್ಘಾಟಿಸಿ ಮಾತನಾಡಿದ ಜಿಪಂ ಸಿಇಓ ಡಾ. ಬಿ.ಸಿ.ಸತೀಶ, ವಿಜ್ಞಾನದ ಬಗ್ಗೆ ಪಾಲಕರಲ್ಲಿ, ಶಿಕ್ಷಕರಲ್ಲಿಪ್ರಶ್ನೆಗಳನ್ನು ಮಾಡುವುದರ ಮುಖಾಂತರ ವಿಜ್ಞಾನವನ್ನು ಅರಿತುಕೊಳ್ಳಬೇಕು.ಇಂದು ಮಕ್ಕಳಿಗೆ ವಿಜ್ಞಾನದ ಕುರಿತು ಅರಿವು ಮೂಡಿಸುವ ಹಲವಾರು ಅವಕಾಶಗಳು ಒದಗಿ ಬರುತ್ತವೆ. ಮಕ್ಕಳು ಈ ಸದಾವಕಾಶವನ್ನು ಉಪಯೋಗ ಪಡಿಸಿಕೊಳ್ಳಬೇಕು ಎಂದರು.

ಇದೇ ವೇಳೆ 200ಕ್ಕೂ ಹೆಚ್ಚು ಸರಕಾರಿ ಶಾಲೆ ಮಕ್ಕಳೊಂದಿಗೆ ನೇರ ಸಂವಾದ ನಡೆಸುವ ಮೂಲಕ ಮಕ್ಕಳಲ್ಲಿವಿಜ್ಞಾನದ ಬಗ್ಗೆ ಉತ್ಸಾಹ ತುಂಬಿದರು.

ಡಿಡಿಪಿಐ ಗಜಾನನ ಮನ್ನಿಕೇರಿ ಮಾತನಾಡಿ, ವಿಜ್ಞಾನ ವಿಚಾರದ ಪ್ರಶ್ನೆಗಳನ್ನು ಉಂಟು ಮಾಡುತ್ತದೆ. ಮಕ್ಕಳು ಯಾವುದೇ ಒಂದನ್ನು ಯಾಕೆ? ಹೇಗೆ? ಏಕೆ? ಎಲ್ಲಿ? ಎಂದು ಪ್ರಶ್ನಿಸುವ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಶ್ನೆ ಮಾಡುವುದರಿಂದ ವಿಜ್ಞಾನದ ರಹಸ್ಯ ಹೊರಬರುತ್ತದೆ ಎಂದರು.

ಅಧ್ಯಕ್ಷ ತೆ ವಹಿಸಿದ್ದ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಡಾ. ಗೋಪಾಲಕೃಷ್ಣ ಕಮಲಾಪುರ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿಐಎಎಸ್‌ ಮಾಡಬೇಕು ಎಂಬ ಆಸಕ್ತಿ ಹೆಚ್ಚಿದೆ. ಸೂಕ್ತ ಮಾರ್ಗದರ್ಶನ ದೊರೆತಲ್ಲಿಅವರು ಸಫಲರಾಗಬಲ್ಲರು ಎಂದರು.

ಇದೇ ವೇಳೆ ಸರಕಾರಿ ಪ್ರೌಢ ಶಾಲೆ ನರೇಂದ್ರ ವಿದ್ಯಾರ್ಥಿನಿ ವಿದ್ಯಾ ಯಕ್ಕುಂಡಿಮಠ , ಬಗಡಗೇರಿ ವಿದ್ಯಾರ್ಥಿ ಕಿರಣ ದೊಡಬಸಣ್ಣವರ ಅನಿಸಿಕೆ ಹಂಚಿಕೊಂಡರು. ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಜಯಂತ ಕೆ.ಎಸ್‌ ಸೇರಿದಂತೆ ಸ್ವಯಂ ಸೇವಕರು, ಸಿಬ್ಬಂದಿ ಇದ್ದರು. ಗುರು ಮದ್ನಳ್ಳಿ ಸ್ವಾಗತಿಸಿದರು . ಅನಿಲ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಶಿಸನಹಳ್ಳಿ ವಂದಿಸಿದರು.

ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ
ವಿಶಿಷ್ಟ -2020 ವಿಜ್ಞಾನ -ಶಿಕ್ಷಣ- ತಂತ್ರಜ್ಞಾನ ಮೇಳದಲ್ಲಿ ಜಿಲ್ಲೆಯ ವಿವಿಧ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಂದ 84 ವಿದ್ಯಾರ್ಥಿಗಳಿಂದ 42 ವಿನೂತನ ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡಿದ್ದವು. ನರೇಂದ್ರ ಶಾಲೆಯ ವಿದ್ಯಾರ್ಥಿಗಳು ನಿರ್ಮಿಸಿದ್ದ ಸ್ವಯಂ ಚಾಲಿತ ಮೂತ್ರಾಲಯ, ಕುರವಿನಕೊಪ್ಪ ಶಾಲೆಯ ಜೀವಾಮೃತ, ಕುರಬಟ್ಟಿ ಶಾಲೆಯ ತಾರಸಿ ತೋಟ, ಆನಂದ ನಗರ ಶಾಲೆಯ ಪ್ಲಾಸ್ಟಿಕ್‌ ಮರುಬಳಕೆ, ವೀರಾಪೂರ ಶಾಲೆಯ ಜಾಗತಿಕ ತಾಪಮಾನದ ವಿಜ್ಞಾನ ವಸ್ತುಪ್ರದರ್ಶನ ಗಮನ ಸೆಳೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ