ಆ್ಯಪ್ನಗರ

ಆಯುಷ್ಮಾನ್‌ ಕಾರ್ಡ್‌ ಎಲ್ಲರಿಗೂ ತಲುಪಲಿ

ಧಾರವಾಡ: ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ಮತ್ತು ಎಬಿಎಆರ್‌ಕೆ ಕಾರ್ಡ್‌ನ್ನು ಪ್ರತಿ ಕುಟುಂಬಕ್ಕೆ ತಲುಪುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಡಾ. ಗಿರಿಧರ ಆರ್‌. ಕುಕನೂರ ಹೇಳಿದರು.

Vijaya Karnataka 18 Sep 2019, 5:00 am
ಧಾರವಾಡ: ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ಮತ್ತು ಎಬಿಎಆರ್‌ಕೆ ಕಾರ್ಡ್‌ನ್ನು ಪ್ರತಿ ಕುಟುಂಬಕ್ಕೆ ತಲುಪುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಡಾ. ಗಿರಿಧರ ಆರ್‌. ಕುಕನೂರ ಹೇಳಿದರು.
Vijaya Karnataka Web let the ayushmann card reach everyone
ಆಯುಷ್ಮಾನ್‌ ಕಾರ್ಡ್‌ ಎಲ್ಲರಿಗೂ ತಲುಪಲಿ


ನಗರದ ಜಿಲ್ಲಾಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿಸೋಮವಾರ ಹಮ್ಮಿಕೊಂಡ ಆರೋಗ್ಯ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿಬಡಕುಟುಂಬಗಳು ಸೇರಿದಂತೆ ಎಲ್ಲಕುಟುಂಬಗಳ ಆರೋಗ್ಯ ಚಿಕಿತ್ಸೆಯ ವೆಚ್ಚ ಭರಿಸಲು ರಾಜ್ಯದ ಎಲ್ಲನಿವಾಸಿಗಳಿಗೆ ಆರೋಗ್ಯ ಸೇವೆ ಒದಗಿಸುವ ಮಹತ್ವದ ಯೋಜನೆ ಇದಾಗಿದ್ದು, ಬಿಪಿಎಲ್‌ ಕುಟುಂಬಗಳಿಗೆ ಒಂದು ವರ್ಷಕ್ಕೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಎಪಿಎಲ್‌ ಕುಟುಂಬಗಳಿಗೆ ಸರಕಾರಿ ಪ್ಯಾಕೇಜ್‌ ದರದ ಶೇ.30ರಷ್ಟು ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ. ಹೊಂದಿರಬೇಕು ಎಂದರು.

ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಸೇವೆ ಪಡೆಯಲು ಕಡ್ಡಾಯವಾಗಿ ಕಾರ್ಡ್‌ ಅಗತ್ಯವಿಲ್ಲ. ಚಿಕಿತ್ಸೆಗೆ ಬರುವವರು ತಮ್ಮ ಕುಟುಂಬದ ಪಡಿತರ ಕಾರ್ಡ್‌ ಹಾಗೂ ಆಧಾರ ಕಾರ್ಡ್‌ ತಂದರೆ ಸಾಕು ಚಿಕಿತ್ಸೆ ನೀಡಲಾಗುತ್ತದೆ. ಎಬಿಎಆರ್‌ಕೆ ಕಾರ್ಡ್‌ ಪಡೆಯುವುದರಿಂದ ಯೋಜನಾ ಸೌಲಭ್ಯ ಪಡೆಯುವ ಪ್ರಕ್ರಿಯೆಗೆ ಹೆಚ್ಚು ಸಹಾಯವಾಗಲಿದೆ ಎಂದರು.

ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆಯಲ್ಲಿಧಾರವಾಡ ಜಿಲ್ಲೆರಾಜ್ಯಕ್ಕೆ 8ನೇ ಹಾಗೂ ಬೆಳಗಾವಿ ವಿಭಾಗಕ್ಕೆ 1ನೇ ಸ್ಥಾನದಲ್ಲಿದೆ. ಜಿಲ್ಲೆಯ 5 ಸರಕಾರಿ ಆಸ್ಪತ್ರೆ, 12 ಹುಬ್ಬಳ್ಳಿ-ಧಾರವಾಡ ಒನ್‌ ಕೇಂದ್ರಗಳು ಮತ್ತು 85 ಸೇವಾ ಸಿಂಧು ಕೇಂದ್ರಗಳಲ್ಲಿಕೇವಲ 10 ರೂ.ಗಳ ಶುಲ್ಕ ಪಡೆದು (ಪ್ಲಾಸ್ಟಿಕ ಕಾರ್ಡ್‌ಗೆ 35 ರೂ.ಗಳನ್ನು) ಕಾರ್ಡ್‌ ನೀಡಲಾಗುತ್ತಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ವಿಭಾಗದ ಉಪನಿರ್ದೇಶಕ ಡಾ. ಅಪ್ಪಾಸಾಹೇಬ್‌ ನರಹಟ್ಟಿ, ಡಾ.ಯಶವಂತ ಮದಿನಕರ, ಡಾ.ಎಸ್‌.ಎಂ.ಹೊನಕೇರಿ, ಡಾ.ಶಶಿ ಪಾಟೀಲ, ಡಾ.ಎನ್‌.ಎಂ.ಅಂಗಡಿ,ಬಿ.ಜಿ. ಮಕಾನದಾರ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ