ಆ್ಯಪ್ನಗರ

ಶಿಕ್ಷ ಕರ ವರ್ತನೆ ಸ್ನೇಹಮಯ ಇರಲಿ

ಧಾರವಾಡ : ಶಿಕ್ಷ ಕರ ವರ್ತನೆಯು ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಸ್ನೇಹಮಯವಾಗಿರಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಬಾರಿ ಕುಲಪತಿ ಡಾ.ಎ.ಎಸ್‌.ಶಿರಾಳಶೆಟ್ಟಿ ಹೇಳಿದರು.

Vijaya Karnataka 30 Jul 2019, 5:00 am
ಧಾರವಾಡ : ಶಿಕ್ಷ ಕರ ವರ್ತನೆಯು ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಸ್ನೇಹಮಯವಾಗಿರಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಬಾರಿ ಕುಲಪತಿ ಡಾ.ಎ.ಎಸ್‌.ಶಿರಾಳಶೆಟ್ಟಿ ಹೇಳಿದರು.
Vijaya Karnataka Web DRW-29MAILAR12
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿನ ಉನ್ನತ ಶಿಕ್ಷ ಣ ಅಕಾಡೆಮಿಯಲ್ಲಿ ನಡೆದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಿಗೆ ಇಂಡಕ್ಷ ನ್‌ ತರಬೇತಿ ಸಮಾರೋಪದಲ್ಲಿ ಕವಿವಿ ಪ್ರಬಾರಿ ಕುಲಪತಿ ಡಾ.ಎ.ಎಸ್‌.ಶಿರಾಳಶೆಟ್ಟಿ ಮಾತನಾಡಿದರು.


ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿನ ಉನ್ನತ ಶಿಕ್ಷ ಣ ಅಕಾಡೆಮಿಯಲ್ಲಿ ಸೋಮವಾರ ನಡೆದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಿಗೆ ಇಂಡಕ್ಷ ನ್‌ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷ ಕರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪಠ್ಯಕ್ರಮ ಬೋಧಿಸಿ ವಿಷಯ ತಿಳಿಸಬೇಕು. ವಾಣಿಜ್ಯಶಾಸ್ತ್ರ ಉಪನ್ಯಾಸಕರು ಪ್ರಚಲಿತ ವಿಷಯ ತಿಳಿದಿರುವುದರ ಜತೆಗೆ ವಿದ್ಯಾರ್ಥಿಗಳಿಗೂ ತಿಳಿಸುವ ಕಾರ್ಯವನ್ನು ತರಗತಿಗಳಲ್ಲಿ ಮಾಡಬೇಕು ಎಂದರು.

ಸಾಹಿತಿ ಶ್ರೀನಿವಾಸ ವಾಡಪ್ಪಿ, ಉನ್ನತ ಶಿಕ್ಷ ಣ ಅಕಾಡೆಮಿ ನಿರ್ದೇಶಕ ಪ್ರೊ.ಎಸ್‌.ಎಂ.ಶಿವಪ್ರಸಾದ ಮಾತನಾಡಿದರು. ಡಾ.ಅರುಂಧತಿ ಕುಲಕರ್ಣಿ, ಗ್ರಂಥಪಾಲಕ ಡಾ.ಮಲ್ಲಿಕಾರ್ಜುನ ಮೂಲಿಮನಿ, ಅಕಾಡೆಮಿಯ ಸಿಬ್ಬಂದಿ ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಂದ ತರಬೇತಿಗಾಗಿ ಆಗಮಿಸಿದ 90ಕ್ಕೂ ಹೆಚ್ಚು ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ಇದ್ದರು. ಅಕಾಡೆಮಿಯ ಡೀನ ಡಾ.ಎಚ್‌.ಬಿ.ನೀಲಗುಂದ ಸ್ವಾಗತಿಸಿದರು. ಡಾ.ಎ.ಆರ್‌.ಜಗತಾಪ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ