ಆ್ಯಪ್ನಗರ

ಗಣೇಶೋತ್ಸವ ಪರಿಸರ ಸ್ನೇಹಿ ಆಗಿರಲಿ

ಧಾರವಾಡ : ಮುಂಬರುವ ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಮೂಲಕ ಕೆರೆ, ಬಾವಿಗಳನ್ನು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ಹು-ಧಾ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಹೇಳಿದರು.

Vijaya Karnataka 24 Jul 2019, 5:00 am
ಧಾರವಾಡ : ಮುಂಬರುವ ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಮೂಲಕ ಕೆರೆ, ಬಾವಿಗಳನ್ನು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ಹು-ಧಾ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಹೇಳಿದರು.
Vijaya Karnataka Web let the ganeshotsava be eco friendly
ಗಣೇಶೋತ್ಸವ ಪರಿಸರ ಸ್ನೇಹಿ ಆಗಿರಲಿ


ಇಲ್ಲಿನ ಕುಮಾರೇಶ್ವರ ನಗರದ ಸನ್ನಿಧಿ ಮಹಿಳಾ ಮಂಡಳದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಮಣ್ಣಿನ ಬಣ್ಣ ರಹಿತ ಗಣೇಶನ ಮೂರ್ತಿಗಳನ್ನು ಸ್ಥಾಪಿಸಿ, ಅವುಗಳನ್ನು ವಿಸರ್ಜಿಸುವಾಗ ಸಾರ್ವಜನಿಕ ಕೆರೆ ಬಾವಿಗಳಲ್ಲಿ ವಿಸರ್ಜನೆ ಮಾಡದೆ ತಮ್ಮ ಮನೆಯ ಆವರಣದಲ್ಲಿ ನೀರಿನ ತೊಟ್ಟಿಗಳಲ್ಲಿ ವಿಸರ್ಜನೆ ಮಾಡಬೇಕು. ಗಿಡ ನೆಟ್ಟರೆ ಮಾತ್ರ ಪರಿಸರ ಸಂರಕ್ಷ ಣೆ ಅಲ್ಲ. ಅವುಗಳ ಪಾಲನೆ, ಪೋಷಣೆ ಮಾಡುವ ಮೂಲಕ ಮರಗಳನ್ನು ಹೆಮ್ಮರವಾಗಿ ಬೆಳೆಸಬೇಕು. ಅಂದಾಗ ಪರಿಸರ ಉಳಿಯಲು ಸಾಧ್ಯ ಎಂದರು.

ಯುವಕರು ಜನ್ಮದಿನದಂದು ದುಂದುವೆಚ್ಚ ಮಾಡದೆ ದೇವಸ್ಥಾನ, ಶಾಲೆ ಮತ್ತು ಉದ್ಯಾನವನದಲ್ಲಿ ಗಿಡಗಳನ್ನು ನೆಡುವುದರೊಂದಿಗೆ ಜನ್ಮದಿನ ಆಚರಿಸಬೇಕು ಎಂದು ಹೇಳಿದರು.

ಕುಮಾರೇಶ್ವರ ನಗರದ ಅಭಿವೃದ್ಧಿ ಸಂಘದ ಅಧ್ಯಕ್ಷ ಈಶ್ವರಯ್ಯ ಮಾತನಾಡಿದರು. ನಂತರ ಈಶ್ವರ ದೇವಾಸ್ಥಾನದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಸಂಘದ ಅಧ್ಯಕ್ಷ ಸುನಂದಾ ಕೊಂಗವಾಡ ಅಧ್ಯಕ್ಷ ತೆ ವಹಿಸಿದ್ದರು. ನ್ಯಾಯವಾದಿ ಶಿವಾನಂದ ಭಾವಿಕಟ್ಟಿ, ರಾಜೇಶ್ವರಿ ಕಬ್ಬೂರ, ಭಾರ್ಗವಿ ಕುಲಕರ್ಣಿ, ಅನುರಾಧಾ ಅಡಗಿಮಠ, ಕಾವೇರಿ ಹಿರೇಮಠ, ಆರುಂಧತಿ ಓತನಹಳ್ಳಿ, ಪೂರ್ವಿ ಮುಗದ, ಶಿವಲೀಲಾ ಬಿಳೆಹಾಳ, ಸುನಿತಾ ಮುನೊಳಿ, ಚೈತ್ರಾ ನಾಯಕ್‌, ಲಕ್ಷ್ಮೇ ಜೋಷಿ, ಕಮಲಾ ಬಂಡಿ, ಶ್ರೇಯ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶುಭಾ ಅಂಗಡಿ ಸ್ವಾಗತಿಸಿದರು. ರಾಜೇಶ್ವರಿ ಸಾಲಗಟ್ಟಿ ಪ್ರಾಸ್ತಾವಿಸಿದರು. ನಂದಾ ಗುಳೇದಗುಡ್ಡ ನಿರೂಪಿಸಿದರು. ಭಾರ್ಗವಿ ಕುಲಕರ್ಣಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ