ಆ್ಯಪ್ನಗರ

ಮಾನಸಿಕ ಹಿಂಸೆ ನಿಲ್ಲಿಸಲಿ

ಧಾರವಾಡ : ಪ್ರಜಾಪ್ರಭುತ್ವ ಉಳಿಸಿರಿ ಮತ್ತು ಡಿ.ಕೆ.ಶಿವಕುಮಾರ ಅವರಿಗೆ ನೀಡುತ್ತಿರುವ ಮಾನಸಿಕ ಹಿಂಸೆ ನಿಲ್ಲಲಿ ಎಂದು ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ವತಿಯಿಂದ ಇಲ್ಲಿನ ಅಂಬೇಡ್ಕರ ಪುತ್ಥಳಿಯ ಮುಂದೆ ಪ್ರತಿಭಟನೆ ನಡೆಸಲಾಯಿತು. ಕೆಪಿಸಿಸಿ

Vijaya Karnataka 9 Sep 2019, 5:00 am
ಧಾರವಾಡ : ಪ್ರಜಾಪ್ರಭುತ್ವ ಉಳಿಸಿರಿ ಮತ್ತು ಡಿ.ಕೆ.ಶಿವಕುಮಾರ ಅವರಿಗೆ ನೀಡುತ್ತಿರುವ ಮಾನಸಿಕ ಹಿಂಸೆ ನಿಲ್ಲಲಿ ಎಂದು ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ವತಿಯಿಂದ ಇಲ್ಲಿನ ಅಂಬೇಡ್ಕರ ಪುತ್ಥಳಿಯ ಮುಂದೆ ಪ್ರತಿಭಟನೆ ನಡೆಸಲಾಯಿತು. ಕೆಪಿಸಿಸಿ ಸದಸ್ಯ ರಾಬರ್ಟ ದದ್ದಾಪುರಿ ಹಾಗೂ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ಆನಂದ ಜಾಧವ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ವಿವಿಧ ಘೋಷಣೆ ಕೂಗಿ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ದುರಾಡಳಿತ ಖಂಡಿಸಿದರು.
Vijaya Karnataka Web DRW-06RANGA09
ಪ್ರಜಾಪ್ರಭುತ್ವ ಉಳಿಸಿರಿ ಮತ್ತು ಡಿ. ಕೆ. ಶಿವಕುಮಾರ ಅವರಿಗೆ ನೀಡುತ್ತಿರುವ ಮಾನಸಿಕ ಹಿಂಸೆ ನಿಲ್ಲಲಿ ಎಂದು ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ವತಿಯಿಂದ ಧಾರವಾಡ ಅಂಬೇಡ್ಕರ ಪುತ್ಥಳಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.


ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಭಾರತದಲ್ಲಿಂದು ಪ್ರಜಾಪ್ರಭುತ್ವವು ಸಂಕಷ್ಟದಲ್ಲಿದೆ. ರಾಷ್ಟ್ರಪತಿಗಳು ಕೂಡಲೇ ಮಧ್ಯ ಪ್ರವೇಶಿಸಿ ಬಿಜೆಪಿ ಸರಕಾರವು ವಿವಿಧ ಅಂಗಗಳ ಮೇಲೆ ಪ್ರಭಾವ ಬೀರಿ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷ ದವರನ್ನು ಗುರಿಯಾಗಿರಿಸಿಕೊಂಡು ಹಿಂಸಿಸುತ್ತಿರುವುದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಬಸವರಾಜ ಕಿತ್ತೂರ, ಬಸವರಾಜ ಮಲಕಾರಿ, ಶಾಂತಮ್ಮ ಗುಜ್ಜಳ, ನಾಗರಾಜ ಗುರಿಕಾರ, ಗ್ರೆಗರಿ ಜೆವಿಯರ್‌, ಎಚ್‌.ಎಮ್‌ ರಾಜು, ಪ್ರಕಾಶ ಘಾಟಗೆæ, ಮಂಜು ಭೋವಿ, ಶ್ರೀಧರಶೆಟ್‌, ವಸಂತ ಅರ್ಕಾಚಾರಿ, ರೇಣುಕಾ ಕಳ್ಳಿಮನಿ, ಪ್ರಭಾವತಿ ವಡ್ಡಿನ, ಶೋಭಾ ಅಣ್ಣಿಗೇರಿ, ಧೃತಿ ಸಾಲ್ಮನಿ, ಸುಮಾ ಮಿನಗಲರ, ಗಿರಿಜಾ ಗೂಳೆಕೊಪ್ಪ, ವೀಣಾ ಆನಿ, ಸರೋಜಾ ಪಾಟೀಲ, ರಫೀಕ್‌ ದರಗದ, ಸಲೀಂ ಪಠಾಣ, ಗೌಸ ನವಲೂರ, ಆನಂದ ಸಿಂಗನಾಥ, ಹೇಮಂತ ಗುರ್ಲಹೊಸೂರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ