ಆ್ಯಪ್ನಗರ

ವೃತ್ತಿ ಘನತೆಗೆ ವೃದ್ಧಿಗೆ ಶಿಕ್ಷಕ ಶ್ರಮಿಸಲಿ

ಹುಬ್ಬಳ್ಳಿ: ವೃತ್ತಿಯ ಘನತೆ ಹೆಚ್ಚಾಗುವಂತೆ ಪ್ರತಿಯೊಬ್ಬ ಶಿಕ್ಷಕರೂ ಶ್ರಮಿಸಬೇಕು ಎಂದು ಕೆ.ಎಲ್‌.ಇ. ತಾಂತ್ರಿಕ ವಿಶ್ವವಿದ್ಯಾಲಯದ ಕಂಪ್ಯೂಟರ್‌ ವಿಭಾಗದ ಮುಖ್ಯಸ್ಥ ಡಾ.ಗೋಪಾಲ ಜೋಶಿ ಹೇಳಿದರು.

Vijaya Karnataka 29 Jan 2020, 5:00 am
ಹುಬ್ಬಳ್ಳಿ: ವೃತ್ತಿಯ ಘನತೆ ಹೆಚ್ಚಾಗುವಂತೆ ಪ್ರತಿಯೊಬ್ಬ ಶಿಕ್ಷಕರೂ ಶ್ರಮಿಸಬೇಕು ಎಂದು ಕೆ.ಎಲ್‌.ಇ. ತಾಂತ್ರಿಕ ವಿಶ್ವವಿದ್ಯಾಲಯದ ಕಂಪ್ಯೂಟರ್‌ ವಿಭಾಗದ ಮುಖ್ಯಸ್ಥ ಡಾ.ಗೋಪಾಲ ಜೋಶಿ ಹೇಳಿದರು.
Vijaya Karnataka Web let the teacher strive for growth in career dignity
ವೃತ್ತಿ ಘನತೆಗೆ ವೃದ್ಧಿಗೆ ಶಿಕ್ಷಕ ಶ್ರಮಿಸಲಿ


ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮತ್ತು ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿಇಲ್ಲಿಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್‌.ಎಸ್‌. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿಸೋಮವಾರ ಏರ್ಪಡಿಸಿದ್ದ ಕರ್ತವ್ಯ ಬೋಧ ದಿವಸ (ಕಾಯಕ ಸಂಕಲ್ಪ ದಿನ) ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಶಿಕ್ಷಕ ವೃತ್ತಿಗೆ ಒಳ್ಳೆಯ ಹೆಸರು, ಮರ್ಯಾದೆ ಸಿಗುವಂತೆ ನಾವೆಲ್ಲಬೋಧನೆ ಮಾಡಬೇಕು, ಉತ್ತಮ ನಡತೆಯುಳ್ಳವರಾಗಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಕ ಕುರಿತಂತೆ ಸಮಾಜದ ದೃಷ್ಟಿಕೋನ ಬದಲಾಗಬೇಕು. ಅಂದಾಗಲೇ ಶಿಕ್ಷಕರಿಗೆ ಒಳ್ಳೆಯ ಮರ್ಯಾದೆ ಸಿಗುತ್ತದೆ. ಶಿಕ್ಷಕ ವೃತ್ತಿಗೆ ಗೌರವ ಸಿಗಬೇಕೆಂದರೆ ಶಿಕ್ಷಕರು ಏನು ಮಾಡಬೇಕು? ಸಮಾಜಕ್ಕೆ ನಾನೇನು ಒಳ್ಳೆಯದನ್ನು ಕೊಟ್ಟಿದ್ದೇನೆ? ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಶಿಕ್ಷಕ ಎಂದರೆ ಕೇವಲ ಚೆನ್ನಾಗಿ ಪಾಠ ಮಾಡುವುದಲ್ಲ, ಮಾಹಿತಿ ಅಥವಾ ಜ್ಞಾನವನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸುವುದಲ್ಲ. ವಿದ್ಯಾರ್ಥಿಯ ಅಥವಾ ಸಮಾಜದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ಬೆಳೆಸುವುದೇ ಶಿಕ್ಷಣ. ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಶಕ್ತಿ ವಿದ್ಯಾರ್ಥಿಗಳಲ್ಲಿಬೆಳೆಸುವುದೇ ನಿಜವಾದ ಶಿಕ್ಷಣ. ಈ ನಿಟ್ಟಿನಲ್ಲಿಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಎಂದು ಡಾ.ಜೋಶಿ ಸಲಹೆ ನೀಡಿದರು.

ಪ್ರಾಸ್ತಾವಿಕ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ರಘು ಅಕಮಂಚಿ, ಒಂದು ಸಂಸ್ಥೆಯಿಂದ ಒಬ್ಬ ಶಿಕ್ಷಕ - ಎಂಬ ಗುರಿ ಹಾಕಿಕೊಂಡು, ಬರುವ ಅಕ್ಟೋಬರ್‌ ತಿಂಗಳಲ್ಲಿಬೆಂಗಳೂರಲ್ಲಿಸಾವಿರ ಶಿಕ್ಷಕರ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಇದರಿಂದ ಸಂಘಟನೆಗೆ ಇನ್ನಷ್ಟು ಬಲ ಬರುತ್ತದೆ ಎಂಬುದರಲ್ಲಿಸಂಶಯವಿಲ್ಲಎಂದು ಹೇಳಿದರು.

ಸಂಘದ ಹಿರಿಯ ಪದಾಧಿಕಾರಿಗಳಾದ ಸಂದೀಪ ಬೂದಿಹಾಳ, ಕಾಲೇಜಿನ ಪ್ರಾಚಾರ್ಯ ಡಾ.ಎಲ್‌.ಡಿ. ಹೊರಕೇರಿ, ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ (ಧಾರವಾಡ) ಡೀನ್‌ ಡಾ.ಎ.ಆರ್‌.ಜಗತಾಪ್‌, ಡಾ.ಮಹೇಶ ಹೊರಕೇರಿ ಪಾಲ್ಗೊಂಡಿದ್ದರು.

ಸಂಘದ ಜಿಲ್ಲಾಘಟಕದ ಅಧ್ಯಕ್ಷ ಪ್ರೊ.ಎಸ್‌.ಟಿ. ಮೀಸಿ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಡಾ.ಜಿ.ಕೆ.ಬಡಿಗೇರ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಸಿ.ವಿ.ಮರಿದೇವರಮಠ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ