ಆ್ಯಪ್ನಗರ

ತಿರುಪತಿ ತಿಮ್ಮಪ್ಪ ದೇವಸ್ಥಾನ ಮಾರಾಟ ಕೈಬಿಡಲಿ

ಹುಬ್ಬಳ್ಳಿ : ತಿರುಪತಿ ತಿಮ್ಮಪ್ಪ ದೇವಸ್ಥಾನದ ಆಸ್ತಿ ಮಾರಾಟ ಮಾಡುವ ಹಾಗೂ ಒತ್ತೆ ಇಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಹುಬ್ಬಳ್ಳಿ ಶ್ರೀರಾಮಸೇನೆ ಒತ್ತಾಯಿಸಿದೆ.

Vijaya Karnataka 29 May 2020, 5:00 am
ಹುಬ್ಬಳ್ಳಿ : ತಿರುಪತಿ ತಿಮ್ಮಪ್ಪ ದೇವಸ್ಥಾನದ ಆಸ್ತಿ ಮಾರಾಟ ಮಾಡುವ ಹಾಗೂ ಒತ್ತೆ ಇಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಹುಬ್ಬಳ್ಳಿ ಶ್ರೀರಾಮಸೇನೆ ಒತ್ತಾಯಿಸಿದೆ.
Vijaya Karnataka Web let the tirupati thirmappa temple be sold
ತಿರುಪತಿ ತಿಮ್ಮಪ್ಪ ದೇವಸ್ಥಾನ ಮಾರಾಟ ಕೈಬಿಡಲಿ


ಬುಧವಾರ ಈ ಕುರಿತು ತಹಸೀಲ್ದಾರ್‌ ಮೂಲಕ ಆಂಧ್ರದ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವ ಶ್ರೀರಾಮ ಸೇನೆ ಕಾರ್ಯಕರ್ತರು, ಆಂಧ್ರ ಪ್ರದೇಶ ಸರಕಾರ ತಿರುಪತಿ ತಮ್ಮಪ್ಪ ದೇವಸ್ಥಾನದ ಆಸ್ತಿ ಮಾರಾಟ ಮಾಡುವ ನಿರ್ಧಾರಕ್ಕೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಆದರೆ ಆಂಧ್ರ ಸರಕಾರ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಇದಕ್ಕೆ ಅವಕಾಶ ನೀಡದೇ ರಾಜ್ಯಪಾಲರ ನೇತೃತ್ವದಲ್ಲಿಸಾಧು ಸಂತರ ಸಮಿತಿ ರಚನೆ ಮಾಡಬೇಕು ಒತ್ತಾಯಿಸಿದರು.

ಈಗಾಗಲೇ ಭಕ್ತರು ನೀಡಿರುವ ಹುಂಡಿ ಹಣವನ್ನು ಸರಕಾರ ತೆಗೆದುಕೊಳ್ಳುವುದೇ ಅಪರಾಧ. ನೂರಾರು ವರ್ಷಗಳ ಹಿಂದೆ ರಾಜರು, ಭಕ್ತರು ನೀಡಿರುವ ದೇಣಿಗೆ ಮೇಲೆ ಕಣ್ಣು ಹಾಕಿರುವುದು ಸರಿಯಾದ ಕ್ರಮವಲ್ಲ. ಜಾತ್ಯತೀತ ರಾಷ್ಟ್ರದಲ್ಲಿಕೇವಲ ಹಿಂದೂ ದೇವಸ್ಥಾನಗಳ ಸಂಪತ್ತಿನ ಮೇಲೆ ಕಣ್ಣು ಹಾಕಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ಹೇಳಿದರು.

ದೇಶದ ಮಸೀದಿ, ಮದರಸಾ, ಚರ್ಚ್, ದರ್ಗಾಗಳಲ್ಲಿಸಾಕಷ್ಟು ಆಸ್ತಿಇದ್ದು, ಅದನ್ನು ತೆಗೆದುಕೊಳ್ಳದೇ ಕೇವಲ ಹಿಂದೂ ದೇವಸ್ಥಾನಗಳ ಆಸ್ತಿ್ತ ತೆಗೆದುಕೊಳ್ಳುತ್ತಿರುವುದು ಖಂಡನೀಯ. ಕೂಡಲೇ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜು ಗಾಡಗೋಳಿ, ಅಪ್ಪಣ್ಣ ದಿವಟಗಿ, ರಾಜು ಕಾಟಕರ, ಸಿದ್ದು ರಾಯನಾಳ, ಅಭಿಷೇಕ ಕಾಂಬಳೆ, ವಿಜಯ ದೇವರಮನಿ ಸೇರಿದಂತೆ ಅನೇಕರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ