ಆ್ಯಪ್ನಗರ

ಯುವಕರು ಸಂಸ್ಕೃತಿ, ಪರಂಪರೆ ರಕ್ಷಣೆಗೆ ಮುಂದಾಗಲಿ

ನವಲಗುಂದ : ಯುವ ಜನಾಂಗವು ಬದುಕಿಗೆ ಹತ್ತಿರವಾಗಿರುವ ಹಾಗೂ ಉನ್ನತ ಮಟ್ಟಕ್ಕೆ ಏರಲು ಸಹಕಾರಿಯಾಗುವ ಪರಂಪರೆ ಸಂಸ್ಕೃತಿಗಳನ್ನು ರಕ್ಷ ಣೆ ಮಾಡಬೇಕು. ಇಂತಹ ಕಾರ್ಯಗಳನ್ನು ಮಾಡುವುದರಿಂದ ಮುಂದಿನ ಪೀಳಿಗೆಗೆ ದೊಡ್ಡ ಕೊಡುಗೆಯನ್ನು ನೀಡಿದಂತಾಗುತ್ತದೆ ಎಂದು ಧಾರವಾಡ ಜೆಎಸ್‌ಎಸ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜೀನದತ್ತ ಹಡಗಲಿ ಹೇಳಿದರು.

Vijaya Karnataka 6 Aug 2019, 5:00 am
ನವಲಗುಂದ : ಯುವ ಜನಾಂಗವು ಬದುಕಿಗೆ ಹತ್ತಿರವಾಗಿರುವ ಹಾಗೂ ಉನ್ನತ ಮಟ್ಟಕ್ಕೆ ಏರಲು ಸಹಕಾರಿಯಾಗುವ ಪರಂಪರೆ ಸಂಸ್ಕೃತಿಗಳನ್ನು ರಕ್ಷ ಣೆ ಮಾಡಬೇಕು. ಇಂತಹ ಕಾರ್ಯಗಳನ್ನು ಮಾಡುವುದರಿಂದ ಮುಂದಿನ ಪೀಳಿಗೆಗೆ ದೊಡ್ಡ ಕೊಡುಗೆಯನ್ನು ನೀಡಿದಂತಾಗುತ್ತದೆ ಎಂದು ಧಾರವಾಡ ಜೆಎಸ್‌ಎಸ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜೀನದತ್ತ ಹಡಗಲಿ ಹೇಳಿದರು.
Vijaya Karnataka Web DRW-5-NVL-1
ನವಲಗುಂದ ಶ್ರೀ ಶಂಕರ ಕಾಲೇಜಿನಲ್ಲಿ ಜರುಗಿದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಡಾ.ಜೀನದತ್ತ ಹಡಗಲಿ ಮಾತನಾಡಿದರು.


ಸ್ಥಳೀಯ ಶ್ರೀ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಉದ್ಘಾಟನೆ ನೆರವೇರಿಸಿದ ಸಂಸ್ಥೆಯ ಚೇರಮನ್‌ ಡಾ.ಬಿ.ಸಿ.ಪೂಜಾರ ವಿದ್ಯಾರ್ಥಿಗಳು ಸರ್ವತೋಮುಖ ವ್ಯಕ್ತಿತ್ವದ ಬೆಳವಣಿಗೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಅಧ್ಯಕ್ಷ ತೆ ವಹಿಸಿದ್ದ ಪ್ರಾಚಾರ್ಯ ಡಾ. ಕೆ. ಪಿ. ಬಿಕ್ಕಣ್ಣವರರವರು ನಿರ್ದಿಷ್ಟ ಗುರಿ ಸಾಧಿಸಲು ವಿದ್ಯೆಯನ್ನು ಪಡೆಯುವ ಹಂಬಲ ಬೆಳೆಸಿಕೊಳ್ಳಬೇಕು ಹಾಗೂ ನಿಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿ ಒಕ್ಕೂಟದ ಉತ್ತಮ ವೇದಿಕೆ ಎಂದು ತಿಳಿಸಿದರು.

ರಾಘವೇಂದ್ರ ಧಾರವಾಡ, ಬಸಣ್ಣ. ಹಳ್ಳದ, ಪ. ಪೂ ಪ್ರಾಚಾರ್ಯ ಪ್ರೊ. ಜಯರಾಮ ಲಮಾಣಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಮಲ್ಲಿಕಾರ್ಜುನ ಮುಪ್ಪಯ್ಯನವರ, ನಾಗರಾಜ ಚಿಗರಿ, ಅಮೀರಾಬಾನು ನದಾಫ, ವಾಸವಿ ದೊಡಮನಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಾ. ಜಿನದತ್ತ ಹಡಗಲಿಯವರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಎಸ್‌. ಎಸ್‌. ಕಾಡಮ್ಮನವರ ಸ್ವಾಗಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಸ್‌.ವಿ. ಬಡಿಗೇರ ಪರಿಚಯಿಸಿದರು, ಡಾ. ಎಸ್‌.ಎಂ. ತುಬಚಿ ವಂದಿಸಿದರು.ಪ್ರೊ. ಎಸ್‌.ಬಿ. ಬದಾಮಿ ಹಾಗೂ ಮಹೇಶ ಕುರ್ತಕೋಟಿಯವರು ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ