ಆ್ಯಪ್ನಗರ

ನೇಮಕಕ್ಕೆ ಮೆರಿಟ್‌ ಆಧಾರ ಇರಲಿ

ಧಾರವಾಡ : ರಾಜ್ಯ ಸರಕಾರವು ಮೆರಿಟ್‌ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಪದವೀಧರ ಶಿಕ್ಷ ಕ ಆಕಾಂಕ್ಷಿಗಳು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.

Vijaya Karnataka 14 Aug 2019, 5:00 am
ಧಾರವಾಡ : ರಾಜ್ಯ ಸರಕಾರವು ಮೆರಿಟ್‌ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ಪದವೀಧರ ಶಿಕ್ಷ ಕ ಆಕಾಂಕ್ಷಿಗಳು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
Vijaya Karnataka Web let there be merit to the appointment
ನೇಮಕಕ್ಕೆ ಮೆರಿಟ್‌ ಆಧಾರ ಇರಲಿ


ಈ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಆಕಾಂಕ್ಷಿ ಶಿಕ್ಷ ಕರು, ಹತ್ತು ಸಾವಿರ ಶಿಕ್ಷ ಕರ ನೇರ ನೇಮಕ ಅಧಿಸೂಚನೆ ಹೊರಡಿಸಿ ಈಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿದ್ದು, ಶಿಕ್ಷ ಕರ ನೇಮಕ ಪ್ರಶ್ನೆ ಪತ್ರಿಕೆಗಳು ಸಾಮಾನ್ಯವಾಗಿ 100 ಅಂಕಗಳಿಗೆ 3 ಗಂಟೆ ಕಾಲಾವಕಾಶ ನೀಡಲಾಗುತ್ತಿದೆ. ಆದರೆ, ವಿಜ್ಞಾನ, ಗಣಿತ ಮತ್ತು ಇಂಗ್ಲೀಷ ವಿಷಯದ ಕೇವಲ 2 ಗಂಟೆ ಕಾಲಾವಕಾಶ ನೀಡಲಾಗಿದೆ. ಗಣಿತ ಮತ್ತು ವಿಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ 5 ಅಂಕಗಳಗೆ ನೀಡಬೇಕಿದ್ದ ಪ್ರಶ್ನೆಗಳನ್ನು 3 ಅಂಕಗಳಿಗೆ ನೀಡಲಾಗುತ್ತಿದೆ. ಪರೀಕ್ಷೆ ಮುಗಿದು ಒಂದು ವಾರದ ಬಳಿಕ ತನ್ನ ಅಧಿಕೃತ ಜಾಲದಲ್ಲಿ ಯಾವ ಪ್ರಶ್ನೆಗಳಿಗೆ ಎಷ್ಟು ಅಂಕಗಳೆಂದು ತಡವಾಗಿ ಪ್ರಕಟಿಸುವ ಮೂಲಕ ಸರಕಾರ ನಿರ್ಲಕ್ಷ ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ರಾಜ್ಯಪಾಲರು ಮೆರಿಟ್‌ ಮೇಲೆ ನೇಮಕ ಮಾಡಿಕೊಳ್ಳಬೇಕೆಂದು ಆದೇಶ ನೀಡಿದ್ದಾರೆ. ಆದರೆ, ರಾಜ್ಯ ಸರಕಾರ ರಾಜ್ಯಪಾಲರ ಆದೇಶವನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಕಳೆದ ಬಾರಿ ಎನ್‌ಸಿಇಆರ್‌ಟಿ ಪಠ್ಯ ನೀಡಲಾಗಿದ್ದು, ಈ ಭಾರಿ ಸಿಬಿಎಸ್‌ಸಿ ಮತ್ತು ಐಸಿಎಸ್‌ಇ ಪಠ್ಯ ನೀಡಲಾಗಿದೆ. ಇಡೀ ಪ್ರಶ್ನೆ ಪತ್ರಿಕೆ ಅವೈಜ್ಞಾನಿಕವಾಗಿದ್ದು, ಮೆರಿಟ್‌ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು. ಒಂದು ವೇಳೆ ಮೆರಿಟ್‌ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಅಶೋಕ ಪಮ್ಮಾರ, ಸೂರ್ಯ ನಾರಾಯಣ, ಕಮಲೇಶ ಪವಾರ, ಎಚ್‌.ರೆಡ್ಡಿ, ಶಿವಪ್ರಕಾಶ ಆರ್‌.ಎಂ, ಶಿವಪ್ಪ ರಾಠೋಡ, ವಿಜಯಕುಮಾರ, ಯಲ್ಲಪ್ಪ ಸೇರದಿಂತೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ