ಆ್ಯಪ್ನಗರ

ಏಡ್ಸ್‌ ಮುಕ್ತ ಜಿಲ್ಲೆಗೆ ಪಣ ತೊಡೋಣ

ಧಾರವಾಡ: ಜಿಲ್ಲೆಯನ್ನು ಏಡ್ಸ್‌ ಮುಕ್ತ ಜಿಲ್ಲೆಯನ್ನಾಗಿಸಲು ವಿಶ್ವ ಏಡ್ಸ್‌ ದಿನದ ಸಂದರ್ಭದಲ್ಲಿನಾವೆಲ್ಲಪಣ ತೊಡೋಣ. ಏಡ್ಸ್‌ ತಡೆಗೆ ಸಾರ್ವಜನಿಕರಲ್ಲಿಜಾಗೃತಿ ಅವಶ್ಯ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌.ಎಸ್‌.ಚಿಣ್ಣನ್ನವರ ಹೇಳಿದರು.

Vijaya Karnataka 2 Dec 2020, 5:00 am
ಧಾರವಾಡ: ಜಿಲ್ಲೆಯನ್ನು ಏಡ್ಸ್‌ ಮುಕ್ತ ಜಿಲ್ಲೆಯನ್ನಾಗಿಸಲು ವಿಶ್ವ ಏಡ್ಸ್‌ ದಿನದ ಸಂದರ್ಭದಲ್ಲಿನಾವೆಲ್ಲಪಣ ತೊಡೋಣ. ಏಡ್ಸ್‌ ತಡೆಗೆ ಸಾರ್ವಜನಿಕರಲ್ಲಿಜಾಗೃತಿ ಅವಶ್ಯ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌.ಎಸ್‌.ಚಿಣ್ಣನ್ನವರ ಹೇಳಿದರು.
Vijaya Karnataka Web lets bet on the aids free district
ಏಡ್ಸ್‌ ಮುಕ್ತ ಜಿಲ್ಲೆಗೆ ಪಣ ತೊಡೋಣ


ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿಇಲ್ಲಿನ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿಏರ್ಪಡಿಸಿದ್ದ ವಿಶ್ವ ಏಡ್ಸ್‌ ದಿನಾಚರಣೆ ಧಿ-2020ರ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಚ್‌ಐವಿ ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು ಹಾಗೂ ಜವಾಬ್ದಾರಿಯ ಹಂಚಿಕೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ಜಗತ್ತಿನಾದ್ಯಂತ ಏಡ್ಸ್‌ ದಿನ ಆಚರಿಸಲಾಗುತ್ತಿದೆ. ಎಚ್‌ಐವಿ- ಏಡ್ಸ್‌ ಸೋಂಕಿತರನ್ನು ಅನ್ಯದೃಷ್ಟಿಯಿಂದ ನೋಡಬಾರದು. ಕೋವಿಡ್‌ ವೈರಾಣು ನಿಯಂತ್ರಣದ ಈ ದಿನಗಳಲ್ಲಿಮಧುಮೇಹ, ರಕ್ತದೊತ್ತಡ, ಪಾಶ್ರ್ವವಾಯು, ಎಚ್‌ಐವಿ ಸೋಂಕಿತರು, ಗರ್ಭಿಣಿ, ಬಾಣಂತಿಯರ ಆರೋಗ್ಯ ಸುರಕ್ಷತೆಗಾಗಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಮನೆ ಮನೆಗೆ ತೆರಳಿ ಔಷಧೋಪಚಾರ ನೀಡಿರುವುದು ಶ್ಲಾಘನೀಯ ಎಂದರು.

ಡಿಎಚ್‌ಒ ಡಾ.ಯಶವಂತ ಮದೀನಕರ್‌ ಮಾತನಾಡಿ, ಗ್ರಾ.ಪಂ. ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿಈ ಬಾರಿ ಏಡ್ಸ್‌ ದಿನವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಏಡ್ಸ್‌ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ. ಎಚ್‌ಐವಿ ಸೋಂಕಿನ ತ್ವರಿತ ಪತ್ತೆ ಮೂಲಕ ರೋಗ ನಿಯಂತ್ರಿಸಲು ಸಾಧ್ಯ ಎಂದರು.

ಜಿಲ್ಲಾಏಡ್ಸ್‌ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಅಯ್ಯನಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ2013-14ರಲ್ಲಿಶೇ.3ರಷ್ಟಿದ್ದ ಎಚ್‌ಐವಿ ಏಡ್ಸ್‌ ಸೋಂಕಿತರ ಪ್ರಮಾಣ ಪ್ರಸ್ತುತ ಇಳಿಕೆಯಾಗಿದೆ ಎಂದರು.

54 ಬಾರಿ ರಕ್ತದಾನ ಮಾಡಿರುವ ವಿನಾಯಕ ಪನೀರಕರ್‌, 17 ಬಾರಿ ರಕ್ತದಾನ ಮಾಡಿರುವ ಡಾ.ಉಮೇಶ್‌ ಹಳ್ಳಿಕೇರಿ, 7 ಬಾರಿ ರಕ್ತದಾನ ಮಾಡಿರುವ ಚೇತನಾ ಕೋರಿಶೆಟ್ಟರ್‌, ಎನ್‌ಎಸ್‌ಎಸ್‌ ಅಧಿಕಾರಿ ಡಾ. ಮಾನಸ, ಬೆಳಕು ಮಹಿಳಾ ಸಂಘದ ಹುಸೇನ್‌ ಬಿ, ಜಿಲ್ಲೆಯ ರಕ್ತ ಭಂಡಾರ, ಎಆರ್‌ಟಿ ಕೇಂದ್ರಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿ, ಗೌರವಿಸಲಾಯಿತು.

ಜಿಲ್ಲಾಆರ್‌ಸಿಎಚ್‌ ಅಧಿಕಾರಿ ಡಾ.ಎಸ್‌.ಎಂ. ಹೊನಕೇರಿ ಮಾತನಾಡಿದರು. ಜಿಲ್ಲಾಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಶಶಿ ಪಾಟೀಲ, ಜಿಲ್ಲಾಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಬಿ.ನಿಂಬಣ್ಣವರ, ಜಿಲ್ಲಾಸಮೀಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಜಿಲ್ಲಾವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ