ಆ್ಯಪ್ನಗರ

ಕಾಲಕ್ಕೆ ತಕ್ಕಂತೆ ಮರುಓದು ನಡೆಯಲಿ

ಧಾರವಾಡ : ಮರು ಓದಿನಿಂದ ಸಾಹಿತ್ಯದ ಅನುಸಂಧನ ಸಾಧ್ಯ, ಯಾವುದೇ ಸಾಹಿತ್ಯವನ್ನು ಸಂಪೂರ್ಣವಾಗಿ ಓದದೇ ವಿಮರ್ಶೆಗೆ ಇಳಿದು ಸಾಹಿತ್ಯಕ್ಕೆ ಧಕ್ಕೆ ಮಾಡಬಾರದು. ಆಯಾ ಕಾಲ ಘಟ್ಟಕ್ಕೆ ತಕ್ಕಂತೆ ಮರು ಓದು ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

Vijaya Karnataka 5 Jan 2019, 5:00 am
ಧಾರವಾಡ : ಮರು ಓದಿನಿಂದ ಸಾಹಿತ್ಯದ ಅನುಸಂಧನ ಸಾಧ್ಯ, ಯಾವುದೇ ಸಾಹಿತ್ಯವನ್ನು ಸಂಪೂರ್ಣವಾಗಿ ಓದದೇ ವಿಮರ್ಶೆಗೆ ಇಳಿದು ಸಾಹಿತ್ಯಕ್ಕೆ ಧಕ್ಕೆ ಮಾಡಬಾರದು. ಆಯಾ ಕಾಲ ಘಟ್ಟಕ್ಕೆ ತಕ್ಕಂತೆ ಮರು ಓದು ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
Vijaya Karnataka Web DRW-04RANGA04
ಧಾರವಾಡ ರೈತ ಜ್ಞಾನಭಿವೃದ್ಧಿ ಕೇಂದ್ರದಲ್ಲಿ ನಡೆದ ಗೋಷ್ಠಿಯಲ್ಲಿ ಅಧ್ಯಕ್ಷ ತೆ ವಹಿಸಿದ್ದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿದರು.


ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಭಿವೃದ್ದಿ ಕೇಂದ್ರದ ಸಭಾಂಗಣದ ಡಾ. ಶಂ.ಖಾ.ಜೋಶಿ ವೇದಿಕೆಯಲ್ಲಿ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ನಡೆದ ಮರು ಓದು: ಪ್ರಾಚೀನ ಹಾಗೂ ಮಧ್ಯಕಾಲಿನ ಗೋಷ್ಠಿಯಲ್ಲಿ ಚರ್ಚೆ ನಡೆಯಿತು.

ಅಂಡಯ್ಯನ ಕಬ್ಬಿಗರ ಕಾವ ಕುರಿತ ವಿಷಯ ಮಂಡಣೆ ಮಾಡಿದ ಡಾ. ವಿಜಯಕುಮಾರಿ ಕರಿಕಲ್‌ , ಅಂಡಯ್ಯನ ಕಬ್ಬಿಗರ ಕಾವನ್ನು ಕನ್ನಡ ಕಟ್ಟುವಲ್ಲಿ ಮಾದರಿ ಆಗಿ ಪರಿಗಣಿಬಹುದು. ಕಾರಣ ಈ ಕೃತಿಯ ಬಗ್ಗೆ ಸಾಕಷ್ಟು ಚರ್ಚೆ ಹಾಗೂ ಸಂಶೋಧನೆಗಳು ನಡೆದಿವೆ ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.

ಡಾ. ಬಸವರಾಜ ಕಲ್ಗುಡಿ ಅವರು ಶೂನ್ಯ ಸಂಪಾದನೆ ಬಗ್ಗೆ ಪ್ರಸ್ತಾಪಿಸಿ ಶೂನ್ಯ ಸಂಪಾದನೆ ಬಗ್ಗೆ ಹಲವು ಪ್ರಮುಖ ವಿದ್ವಾಂಸರು ವಿಮರ್ಶೆ ಮಾಡುವಾಗ ದ್ರೋಹ ಮಾಡುವ ಮೂಲಕ ಓದಿನ ದಾರಿ ತಪ್ಪಿಸಿದ್ದಾರೆ ಎಂದು ಕುಟುಕಿದರು.

ಶೂನ್ಯ ಸಂಪಾದನೆ ಮತೀಯ ವಾದವಲ್ಲ ಅದೊಂದು ಗ್ರಂಥ.ಆದರೆ ವಿಮರ್ಶೆ ಮಾಡುವ ಬರದಲ್ಲಿ ಸೂಕ್ತ ಅಧ್ಯಯನ ಮಾಡದೇ ಕೃತಿಗೆ ನೀತಿ ಸಂಹಿತೆ ಹೇರಿದ್ದಾರೆ.

ಕುಮಾರ ವ್ಯಾಸನ ಕರ್ನಾಟಕ ಭಾರತ ಕಥಾ ಮಂಜರಿ ಹಿನ್ನೆಲೆಯಲ್ಲಿ ಮಾತನಾಡಿದ ಡಾ. ಪ್ರಸನ್ನ ಎ.ವಿ. ಅವರು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸಾಹಿತ್ಯದ ಓದು ನಡೆಯುತ್ತದೆ. ಕಾಲ ಬದಲಾದಂತೆ ಪಂಪ, ಕುಮಾರವ್ಯಾಸರ ಸಾಹಿತ್ಯ ಅರ್ಥ ಆಗುವುದಿಲ್ಲ. ನಮ್ಮಲ್ಲಿಯ ಜ್ಞಾನದ ಕೊರತೆ ಪ್ರಮುಖ ಕಾರಣ. ನಾವು ಹೆಚ್ಚು ಹೆಚ್ಚು ಓದಬೇಕು ಎಂದರು.

ಸಭೆಯ ಅಧ್ಯಕ್ಷ ತೆ ವಹಿಸಿದ್ದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು, ಸಾಹಿತ್ಯ ನಿಂತಲ್ಲಿ ನಿಲ್ಲದೇ ಜೀಗಿಯಬೇಕು . ಜತೆಗೆ ಸಮಕಾಲಿನ ಸಂದರ್ಭದಲ್ಲಿ ನಿಂತು ಓದಬೇಕು . ಇದರಿಂದ ಸಾಹಿತ್ಯದ ಅನುಸಂಧಾನ ಸಾಧ್ಯ. ಮರು ಓದಿನಿಂದ ತೊಂದರೆ ಬರುತ್ತದೆ ಹೀಗಾಗಿ ಪೂರ್ವ ಸಿದ್ದತೆ ಮಾಡಿಕೊಂಡು ಅಧ್ಯಯನ ಮಾಡಬೇಕು. ನಮಗೆ ನಾವೇ ಚೌಕಟ್ಟು ಹಾಕಿಕೊಳ್ಳಬಾರದು ಎಂದು ಚರ್ಚೆಗೆ ತೆರೆ ಎಳೆದರು.

ಕೊಡಗು ಗಣೇಶ ಸ್ವಾಗತಿಸದರು.ಬಸವರಾಜ ಅರಬಗಟ್ಟಿ ನಿರೂಪಿಸಿದರು. ಭಾರತಿ ಪ್ರಕಾಶ ನಿರ್ವಹಿಸಿದರು. ನಾ.ಶ್ರೀಧರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ