ಆ್ಯಪ್ನಗರ

ಹಳೆ ಹುಬ್ಬಳ್ಳಿ ಮಾರುಕಟ್ಟೆ ಯೋಜನೆ ಕೈಬಿಡಲು ಆಗ್ರಹ, ವ್ಯಾಪಾರಸ್ಥರಿಂದ ಮೋದಿಗೆ ಪತ್ರ

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿಯಡಿ ನಿರ್ಮಿಸಲು ಉದ್ದೇಶಿಸಿರುವ ಹಳೆ ಹುಬ್ಬಳ್ಳಿ ಮಾರುಕಟ್ಟೆ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಇಲ್ಲಿನ ಹಳೆ ಹುಬ್ಬಳ್ಳಿ ಡಾ. ಬಿ.ಆರ್‌. ಅಂಬೇಡ್ಕರ್‌ ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರು ಮಂಗಳವಾರ ಪತ್ರ ಚಳವಳಿ ನಡೆಸಿದರು.

Vijaya Karnataka 2 Dec 2020, 5:00 am
ಹುಬ್ಬಳ್ಳಿ: ಸ್ಮಾರ್ಟ್‌ಸಿಟಿಯಡಿ ನಿರ್ಮಿಸಲು ಉದ್ದೇಶಿಸಿರುವ ಹಳೆ ಹುಬ್ಬಳ್ಳಿ ಮಾರುಕಟ್ಟೆ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಇಲ್ಲಿನ ಹಳೆ ಹುಬ್ಬಳ್ಳಿ ಡಾ. ಬಿ.ಆರ್‌. ಅಂಬೇಡ್ಕರ್‌ ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರು ಮಂಗಳವಾರ ಪತ್ರ ಚಳವಳಿ ನಡೆಸಿದರು.
Vijaya Karnataka Web OLD HUBLI PROTEST_21


ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ವ್ಯಾಪಾರಸ್ಥರು, ಇಲ್ಲಿಸ್ಮಾರ್ಟ್‌ಸಿಟಿ ಕಾಮಗಾರಿ ನಡೆಸದಂತೆ ಒತ್ತಾಯಿಸಿದ್ದಾರೆ. ಈ ವೇಳೆ ಮಾತನಾಡಿದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹ್ಮದ್‌ ಯೂನುಸ್‌, ಹಳೆ ಹುಬ್ಬಳ್ಳಿಯಲ್ಲಿಅತ್ಯಾಧುನಿಕ ಮಾದರಿಯ ಸಂತೆ ಮಾರುಕಟ್ಟೆಯ ಅಗತ್ಯವಿಲ್ಲ. ಇಲ್ಲಿಮಳಿಗೆ, ಸಟ್ಟಾ ವ್ಯಾಪಾರಸ್ಥರು ಸೇರಿ ಒಟ್ಟಾರೆ 500 ವ್ಯಾಪಾರಸ್ಥರಿದ್ದಾರೆ. ಉದ್ದೇಶಿತ ಮಾರುಕಟ್ಟೆಯಲ್ಲಿಕೇವಲ 20-25 ಮಳಿಗೆ ಇದೆ. ಇಲ್ಲಿಎಲ್ಲರಿಗೂ ಕುಳಿತು ವ್ಯಾಪಾರ ಮಾಡಲು ಅವಕಾಶ ಸಾಧ್ಯವಿಲ್ಲಎಂದರು.

ಬೇರೆಡೆ ನಿರ್ಮಿಸಿ
ಹಳೆ ಹುಬ್ಬಳ್ಳಿ ಮಾರುಕಟ್ಟೆ ಸನಿಹವೇ 200 ಹಾಸಿಗೆಗಳ ಆಧುನಿಕ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಒಂದು ಕಡೆ ಆಸ್ಪತ್ರೆ ಇನ್ನೊಂದು ಕಡೆ ಮಾರುಕಟ್ಟೆಯಿಂದ ಇಲ್ಲಿಸಂಚಾರಕ್ಕೆ ಸಮಸ್ಯೆ ಆಗಲಿದೆ. ಹೀಗಾಗಿ ಇಲ್ಲಿಹೊಸದಾಗಿ ಸ್ಮಾರ್ಟ್‌ಸಿಟಿ ಮಾರುಕಟ್ಟೆ ನಿರ್ಮಿಸದೆ ಬೇರೆಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಹೆಗ್ಗೇರಿಯಲ್ಲಿನಿರ್ಮಿಸಲು ಉದ್ದೇಶಿಸಿರುವ ತಾತ್ಕಾಲಿಕ ಮಾರುಕಟ್ಟೆಯಲ್ಲಿಕೇವಲ 50-60 ವ್ಯಾಪಾರಸ್ಥರಿಗೆ ಅವಕಾಶ ನೀಡಲು ಪಟ್ಟಿಯನ್ನು ರೂಪಿಸಲಾಗಿದೆ. ಇಲ್ಲಿಯೂ ಉಳಿದ ವರ್ತಕರಿಗೆ ಸಮಸ್ಯೆ ಆಗಲಿದೆ. ಸ್ಮಾರ್ಟ್‌ಸಿಟಿಯ ಹಣವನ್ನು ವ್ಯರ್ಥ ಮಾಡುವ ಬದಲು ಬೇರೆಡೆ ನಿರ್ಮಿಸಿ ಎಂದು ಒತ್ತಾಯಿಸಿದರು.

ಈ ವೇಳೆ ಅಲ್ತಾಫ್‌ ಹುಸೇನ್‌ ಸವಣೂರು, ಡಿ.ಎಫ್‌. ಹೊಸೂರ, ಅಲ್ತಾಫ್‌ ಹುಸೇನ್‌ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ