ಆ್ಯಪ್ನಗರ

ರೈತರಿಗೆ 5 ಲಕ್ಷ ರೂ.ವರೆಗೆ ಸಾಲ:ಬಿಒಬಿ ಇಂಗಿತ

ಹುಬ್ಬಳ್ಳಿ : ಭಾರತದ ಆರ್ಥಿಕತೆ ವೃದ್ಧಿಯಲ್ಲಿ ಕೃಷಿ, ಕೈಗಾರಿಕೆ ಮೂಲ ಸೌಕರ್ಯಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಹೊಸ ಉದ್ಯಮ ಆರಂಭಿಸುವರಿಗೆ ಏಕಗವಾಕ್ಷಿ ವ್ಯವಸ್ಥೆ ಆರಂಭಿಸಬೇಕು. ಕೃಷಿ ಉತ್ಪಾದನೆ ಮತ್ತು ಕೃಷಿಕರ ಅಭಿವೃದ್ಧಿಗೆ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ

Vijaya Karnataka 19 Aug 2019, 5:00 am
ಹುಬ್ಬಳ್ಳಿ : ಭಾರತದ ಆರ್ಥಿಕತೆ ವೃದ್ಧಿಯಲ್ಲಿ ಕೃಷಿ, ಕೈಗಾರಿಕೆ ಮೂಲ ಸೌಕರ್ಯಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಹೊಸ ಉದ್ಯಮ ಆರಂಭಿಸುವರಿಗೆ ಏಕಗವಾಕ್ಷಿ ವ್ಯವಸ್ಥೆ ಆರಂಭಿಸಬೇಕು. ಕೃಷಿ ಉತ್ಪಾದನೆ ಮತ್ತು ಕೃಷಿಕರ ಅಭಿವೃದ್ಧಿಗೆ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಒದಗಿಸಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಮಾಡುವುದಾಗಿ ಬ್ಯಾಂಕ್‌ ಆಫ್‌ ಇಂಡಿಯಾ(ಬಿಒಬಿ) ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಕೊಳ್ಳೆಗಾಲ ತಿಳಿಸಿದರು.
Vijaya Karnataka Web loans up to rs 5 lakh for farmers bob
ರೈತರಿಗೆ 5 ಲಕ್ಷ ರೂ.ವರೆಗೆ ಸಾಲ:ಬಿಒಬಿ ಇಂಗಿತ


ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ದೇಶದ ಆರ್ಥಿಕತೆ ಪ್ರಗತಿಯನ್ನು 3 ಟ್ರಿಲಿಯನ್‌ ಡಾಲರ್‌ದಿಂದ 5 ಟ್ರಿಯಲಿಯನ್‌ ಡಾಲರ್‌ಗೆ ಹೆಚ್ಚಿಸುವ ದಿಸೆಯಲ್ಲಿ ಬ್ಯಾಂಕ್‌ಗಳ ಪಾತ್ರ ಮತ್ತು ಅನುಷ್ಠಾನ ಕ್ರಮಗಳ ಬಗ್ಗೆ ಸಮೀಕ್ಷೆ ಮಾಹಿತಿ ನೀಡುವಂತೆ ಕೇಂದ್ರ ಸರಕಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ವಲಯ ಶಾಖಾ ವ್ಯವಸ್ಥಾಪಕರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಸಾಲ ಸೌಲಭ್ಯ ನೀಡಿಕೆ ಸರಳ ವಿಧಾನ, ವಸೂಲಿಯಲ್ಲೂ ಕಠಿಣ ಕ್ರಮ ಅನುಸರಿಸಬೇಕಾಗಿದೆ. ಡಿಜಿಟಲ್‌ ಬ್ಯಾಂಕಿಂಗ್‌ ವಿಸ್ತರಣೆಗೆ ಆದ್ಯತೆ ನೀಡಬೇಕೆಂದು ಸಲಹೆಗಳು ಕೇಳಿಬಂದಿದೆ ಎಂದರು.

ಎರಡು ದಿನಗಳ ವ್ಯವಸ್ಥಾಪಕರ ಸಭೆಯಲ್ಲಿ, ಬ್ಯಾಂಕ್‌ ವಹಿವಾಟು ಸ್ಥಿತಿಗತಿ, ವ್ಯವಹಾರ ವೃದ್ಧಿಗೆ ಭವಿಷ್ಯದಲ್ಲಿ ನೀತಿ ನಿಯಮ ಅಳವಡಿಕೆ ಹಾಗೂ ಬ್ಯಾಂಕ್‌ನ ಸ್ವಯಂ ಮೌಲ್ಯಮಾಪನ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.

ಒಟ್ಟಾರೆಯಾಗಿ ನಾಗರಿಕರ ಸ್ನೇಹಿಯಾಗಿ ಬ್ಯಾಂಕ್‌ ಕಾರ್ಯನಿರ್ವಹಣೆಗೆ ಮೊದಲ ಅದ್ಯತೆ ನಿಡುವುದಾಗಿ ಜಿಎಂ ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಲಯ ವ್ಯವಸ್ಥಾಪಕ ಬಿ.ವಿ. ರಾಮಕೃಷ್ಣ, ಉಪವ್ಯವ್ಥಾಪಕ ಪಿ.ಜಿ. ಪಪ್ಪು ಹಾಗೂ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ