ಆ್ಯಪ್ನಗರ

ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣಿ

ಹುಬ್ಬಳ್ಳಿ : ವಿದ್ಯಾರ್ಥಿಗಳ ಪ್ರೀತಿ ಹಾಗೂ ವಿಶ್ವಾಸ ಗಳಿಸುವದೇ ಜೀವನದಲ್ಲಿ ದೊಡ್ಡ ಸಂಪತ್ತು ಎಂದು ಪ್ರೊ.ಬಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

Vijaya Karnataka 12 Jul 2019, 5:00 am
ಹುಬ್ಬಳ್ಳಿ : ವಿದ್ಯಾರ್ಥಿಗಳ ಪ್ರೀತಿ ಹಾಗೂ ವಿಶ್ವಾಸ ಗಳಿಸುವದೇ ಜೀವನದಲ್ಲಿ ದೊಡ್ಡ ಸಂಪತ್ತು ಎಂದು ಪ್ರೊ.ಬಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
Vijaya Karnataka Web loving the students
ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಕಾಣಿ


ಭೂಗೋಳಶಾಸ್ತ್ರ ಪ್ರಾಧ್ಯಾಪಕರಾಗಿ 33 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತ ನಿಮಿತ್ತ ಪ್ರೊ.ಗಂಗಾಧರ ಸ್ವಾಮಿ ಅವರನ್ನು ನಗರದ ಕೆಎಲ್‌ಇ ಸಂಸ್ಥೆಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್‌.ಎಸ್‌. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಸನ್ಮಾನಿಸಿ ಬಿಳ್ಕೋಡಲಾಯಿತು.

ಸಹೋದ್ಯೋಗಿಗಳ ಸಹಕಾರ ಮತ್ತು ಪ್ರೀತಿ ಸ್ಮರಿಸಿಕೊಂಡ ಪ್ರೊ.ಗಂಗಾಧರ ಸ್ವಾಮಿ, ಒರಟು ಸ್ವಭಾವದ ವಿದ್ಯಾರ್ಥಿಗಳನ್ನು ಸ್ನೇಹ ಮತ್ತು ಪ್ರೀತಿಯಿಂದಲೇ ತಿದ್ದಿ-ತೀಡಬೇಕು ಎಂದರು.

ಪ್ರೊ.ನಿರ್ಮಲಾ ಅಣ್ಣಿಗೇರಿ, ಕಚೇರಿ ಅಧೀಕ್ಷ ಕ ವೈ.ಎಸ್‌. ಗೌಡರ, ಡಾ.ವೈ.ಎನ್‌. ನಾಗೇಶ, ಡಾ.ಸಿ.ಎಸ್‌. ಹಿರೇಮಠ, ಡಾ.ವಿಜಯಶ್ರೀ ಜಿ. ಹಿರೇಮಠ, ಡಾ.ಎಂ.ಪಿ. ಜಂಗವಾಡ, ಉಪನ್ಯಾಸಕ ಬಿ.ಎಸ್‌. ಜಾರಕುಂಟಿ ಮಾತನಾಡಿದರು.

ಡಾ.ಲಿಂಗರಾಜ ಹೊರಕೇರಿ ಅಧ್ಯಕ್ಷ ತೆ ವಹಿಸಿದ್ದರು. ಪ್ರೊ.ಶೋಭಾ ಲೋಹಾರ ಪ್ರಾರ್ಥಿಸಿದರು. ಪ್ರೊ.ವಿ.ಎಂ. ಖಾನಗೌಡರ ನಿರೂಪಿಸಿದರು. ಪ್ರೊ.ಲಿಂಗರಾಜ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ