ಆ್ಯಪ್ನಗರ

ಶ್ವಾಸಕೋಶ ಜಾಗೃತಿ, ಉಚಿತ ತಪಾಸಣಾ ಶಿಬಿರ 23ಕ್ಕೆ

ಹುಬ್ಬಳ್ಳಿ : ಶ್ವಾಸಕೋಶ ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ತಪಾಸಣಾ ಶಿಬಿರವನ್ನು ನ. 23 ರಿಂದ 30 ರವರೆಗೆ ಎಚ್‌.ಸಿ.ಜಿ. ಎನ್‌ಎಂಆರ್‌ ಕ್ಯುರ್‌ ಕ್ಯಾನ್ಸರ್‌ ಸೆಂಟರ್‌ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಡಾ. ವಿನಯಕುಮಾರ ಮುತ್ತಗಿ ತಿಳಿಸಿದರು.

Vijaya Karnataka 19 Nov 2020, 5:00 am
ಹುಬ್ಬಳ್ಳಿ : ಶ್ವಾಸಕೋಶ ಕ್ಯಾನ್ಸರ್‌ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ತಪಾಸಣಾ ಶಿಬಿರವನ್ನು ನ. 23 ರಿಂದ 30 ರವರೆಗೆ ಎಚ್‌.ಸಿ.ಜಿ. ಎನ್‌ಎಂಆರ್‌ ಕ್ಯುರ್‌ ಕ್ಯಾನ್ಸರ್‌ ಸೆಂಟರ್‌ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಡಾ. ವಿನಯಕುಮಾರ ಮುತ್ತಗಿ ತಿಳಿಸಿದರು.
Vijaya Karnataka Web lung awareness free checkup camp 23rd
ಶ್ವಾಸಕೋಶ ಜಾಗೃತಿ, ಉಚಿತ ತಪಾಸಣಾ ಶಿಬಿರ 23ಕ್ಕೆ


ನಗರದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಬುಧವಾರ ಅವರು, ಧೂಮಪಾನ, ದಟ್ಟ ವಾಹನಗಳ ಹೊಗೆ, ಧೂಳಿನಿಂದಾಗಿ ಶ್ವಾಸಕೋಶ ಕ್ಯಾನ್ಸರ್‌ ಉಂಟಾಗುತ್ತದೆ. ಆರಂಭಿಕ ಮಟ್ಟದಲ್ಲಿದ್ದರೆ ಮಾತ್ರ ಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಜನರಲ್ಲಿಜಾಗೃತಿ ಮೂಡಿಸುವುದು ಅವಶ್ಯವಿದ್ದು ಈ ನಿಟ್ಟಿನಲ್ಲಿಜಾಗೃತಿ ಸಪ್ತಾಹ ಆಯೋಜಿಸಿದ್ದೇವೆ ಎಂದರು.

ಡಾ. ರುದ್ರೇಶ ತಬಾಲಿ ಮಾತನಾಡಿ, ಕೆಮ್ಮು, ಎದೆನೋವು ಕಾಣಿಸುವುದು, ಉಸಿರಾಟದ ತೊಂದರೆ, ಆಯಾಸ ಮತ್ತು ದೇಹ ದೌರ್ಬಲ್ಯ, ಹೊಟ್ಟೆ ಹಸಿವಾಗದಿರುವಿಕೆ ಜತೆಗೆ ದೇಹದ ತೂಕ ಕ್ಷೀಣಿಸುವುದು ಅಲ್ಲದೇ ಮೆಟಾಸ್ಟ್ಯಾಟಿಕ್‌ ಕಾಯಿಲೆ ಶ್ವಾಸಕೋಶ ಕ್ಯಾನ್ಸರ್‌ ರೋಗದ ಲಕ್ಷಣಗಳಾಗಿವೆ. ಈ ಬಗ್ಗೆ ಆಸಕ್ತರು ಉಚಿತ ತಪಾಸಣೆಗೊಳಗಾಗಬಹುದು ಎಂದರು.

ಈ ಸಂದರ್ಭದಲ್ಲಿ ಡಾ. ಅನಂತ, ಸೋಮನಾಥ ರಾಯಕೋಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ