ಆ್ಯಪ್ನಗರ

ಸ್ವಾರ್ಥಿ ಶಾಮನೂರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ: ಎಂಬಿ ಪಾಟೀಲ್‌ ವಾಗ್ದಾಳಿ

ಬೀದರ್ ಹಾಗೂ ಬೆಳಗಾವಿ ಹೋರಾಟ ಪ್ರಾರಂಭವಾದಾಗ ನಾನು ಇರಲೇ ಇಲ್ಲ. ಶಿವಶಂಕರಪ್ಪ ಅವರು ಮೊದಲು ಏನಾಗಿದ್ದರು ಎಂಬುದು ಅರ್ಥ ಮಾಡಿಕೊಳ್ಳಬೇಕು. ಮೊದಲು ಕಿರಾಣಿ ಅಂಗಡಿ ಮತ್ತು ದಲ್ಲಾಳಿ ಮಾಡಿದವರು. ಬೇರೊಬ್ಬರ ಬಿ ಫಾರ್ಮ್ ಹರಿದು ಚುನಾವಣೆ ಗೆದ್ದವರಾಗಿದ್ದಾರೆ.

Vijaya Karnataka Web 13 Jan 2019, 2:27 pm
ಹುಬ್ಬಳ್ಳಿ: ಲಂಚದ ಹಣದಿಂದ ಲಿಂಗಾಯತ ಸಮಾವೇಶ ನಡೆಸಿದ್ದಾರೆ ಎಂಬ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ತಿರುಗೇಟು ನೀಡಿರುವ ಗೃಹ ಸಚಿವ ಎಂ.ಬಿ.ಪಾಟೀಲ್, ನನ್ನ ತಂದೆಗೆ ಸಮನಾಗಿರುವ ಶಿವಶಂಕರಪ್ಪ ಅವರು ಸ್ವಾರ್ಥಿಗಳು. ಕೀಳು ಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಅವರು ಕುಟುಂಬದ ಏಳಿಗೆ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ. ಹೀಗಾಗಿ ಮತ್ತೊಬ್ಬರ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಾರೆ. ಸ್ವಾರ್ಥದ ಜೀವನ ನಡೆಸಿರುವ ಅವರು, ಇಲ್ಲಿಯವರೆಗು ಯಾರಿಗಾಗಿ ಏನು ಮಾಡಿದ್ದಾರೆ ತೋರಿಸಲಿ ಎಂದು ಸವಾಲ್ ಎಸೆದರು.
Vijaya Karnataka Web sha


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್ ಹಾಗೂ ಬೆಳಗಾವಿ ಹೋರಾಟ ಪ್ರಾರಂಭವಾದಾಗ ನಾನು ಇರಲೇ ಇಲ್ಲ. ಶಿವಶಂಕರಪ್ಪ ಅವರು ಮೊದಲು ಏನಾಗಿದ್ದರು ಎಂಬುದು ಅರ್ಥ ಮಾಡಿಕೊಳ್ಳಬೇಕು. ಮೊದಲು ಕಿರಾಣಿ ಅಂಗಡಿ ಮತ್ತು ದಲ್ಲಾಳಿ ಮಾಡಿದವರು. ಬೇರೊಬ್ಬರ ಬಿ ಫಾರ್ಮ್ ಹರಿದು ಚುನಾವಣೆ ಗೆದ್ದವರಾಗಿದ್ದಾರೆ. ಮತ್ತೊಬ್ಬರನ್ನ ತುಳಿದು ಬಾಪೂಜಿ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಇವರು ಬೇರೆಯವರು ಸೋತ ಬಗ್ಗೆ ಮಾತನಾಡುತ್ತಾರೆ. ಅವರ ಮಗ ಸೋತಾಗ ಇವರ ವೀರಶೈವ ಹೋರಾಟ ಎಲ್ಲಿ ಹೋಗಿತ್ತು. ಎಂದು ಪ್ರಶ್ನಿಸಿದ್ದಾರೆ.

ಶಾಮನೂರು ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿದೆ. ಈ ಬಾರಿ ಮುಸ್ಲಿಂ ಸಮುದಾಯದ ಅತಿ ಹೆಚ್ಚು ಮತಗಳು ಕಾಂಗ್ರೆಸ್‍ಗೆ ಬಂದಿರುವರ ಕಾರಕಣ ಅವರು ಗೆದ್ದಿದ್ದಾರೆ. ಕೀಳು ಮಟ್ಟದ ರಾಜಕಾರಣ ಮಾಡಬಾರದು. ಇವರ ಜನ್ಮ ದಾಖಲೆಗಳನ್ನ ತೆಗೆದು ನೋಡಿದರೆ ಹಿಂದೂ ಲಿಂಗಾಯತ ಎಂದು ಇದೆ. ನೀವು ಮಾತಾನಾಡಿದರೆ ಪರವಾಗಿಲ್ಲ, ನಾನು ಮಾತಾನಾಡಿದರೆ ನಿಮ್ಮ ಮರ್ಯಾದೆ ಹೋಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ನನ್ನ ಮೈಯಲ್ಲಿ ಹರಿಯುವುದು ನನ್ನ ತಂದೆಯ ರಕ್ತ. ನನಗೆ ಯಾರ ಅಂಜಿಕೆಯೂ ಇಲ್ಲ. ಈ ವಿವಾದವನ್ನು ಇಲ್ಲಿಗೆ ನಿಲ್ಲಿಸಿದರೆ ಉತ್ತಮ. ನನಗೆ ಎಲ್ಲವೂ ಗೊತ್ತಿದೆ. ಅವರ ಬಗ್ಗೆ ಎಲ್ಲವನ್ನೂ ಮಾತನಾಡಬೇಕಾದಿತು. ಇಲ್ಲವಾದರೆ ನಾನು ಮುಂದುವರಿಯುವೆ ಎಂದು ಎಚ್ಚರಿಕೆ ನೀಡಿರುವ ಸಚಿವರು, ಲಿಂಗಾಯತ ಧರ್ಮ ನಮ್ಮ ಅಸ್ಮಿತೆ. ಲಿಂಗಾಯತ ಧರ್ಮ ಒಂದು ಮೇಲು ಕೀಳು ಎಂದು ವಿಭಿನ್ನವಾಗಿದೆ. ಲಿಂಗಾಯತ ಧರ್ಮದ ಮೇಲೆ ನನ್ನ ಅಧಿಕಾರದ ಪ್ರಭಾವ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿವಶಂಕರಪ್ಪ ಅವರಿಗೆ ವೀರಶೈವ ರತ್ನ ಪ್ರಶಸ್ತಿ ಕೊಟ್ಟಿದ್ದಾರೆ. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದ ಅವರು, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮಾಡುವವರು ಇದ್ದಾರೆ. ಅವರು ಹೋರಾಟವನ್ನು ಮುಂದುವರಿಸುತ್ತಾರೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ