ಆ್ಯಪ್ನಗರ

‘ಮಧ್ವಸಿದ್ಧಾಂತ- ಒಂದು ಜಿಜ್ಞಾಸೆ’ ವಿಚಾರ ಸಂಕೀರ್ಣ

ಹುಬ್ಬಳ್ಳಿ : ಇಲ್ಲಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಏ. 28ರಂದು ಬೆಳಗ್ಗೆ 8.30 ರಿಂದ ಸಂಜೆ 6ರವರೆಗೆ 'ಮಧ್ವಸಿದ್ಧಾಂತ- ಒಂದು ಜಿಜ್ಞಾಸೆ' ಎಂಬ ವಿಷಯ ಕುರಿತು ವಿಚಾರ ಸಂಕೀರ್ಣ ನಡೆಯಲಿದೆ.

Vijaya Karnataka 27 Apr 2019, 5:00 am
ಹುಬ್ಬಳ್ಳಿ : ಇಲ್ಲಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಏ. 28ರಂದು ಬೆಳಗ್ಗೆ 8.30 ರಿಂದ ಸಂಜೆ 6ರವರೆಗೆ 'ಮಧ್ವಸಿದ್ಧಾಂತ- ಒಂದು ಜಿಜ್ಞಾಸೆ' ಎಂಬ ವಿಷಯ ಕುರಿತು ವಿಚಾರ ಸಂಕೀರ್ಣ ನಡೆಯಲಿದೆ.
Vijaya Karnataka Web madhwa siddhanta an intriguing idea complex
‘ಮಧ್ವಸಿದ್ಧಾಂತ- ಒಂದು ಜಿಜ್ಞಾಸೆ’ ವಿಚಾರ ಸಂಕೀರ್ಣ


ಶ್ರಿ ಗುರುಮಹಿಪತಿರಾಜ ನೇತ್ರ ಭಂಡಾರ, ಸಂಶೋಧನಾ ಟ್ರಸ್ಟ್‌ ಹಾಗೂ ಅಖಿಲ ಭಾರತ ಮಾಧ್ವ ಮಹಾಮಂಡಲ ಹುಬ್ಬಳ್ಳಿ ಶಾಖೆ ವತಿಯಿಂದ ಈ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿದೆ. ವಿಚಾರ ಸಂಕೀರ್ಣದಲ್ಲಿ ಮುಂಬಯಿನ ಪಂ. ಮಾಹುಲಿ ವಿದ್ಯಾಸಿಂಹಾಚಾರ್ಯ, ವಿಜಯಪುರದ ಮಧ್ವಾಚಾರ್ಯ ಮೊಖಾಶಿ, ಬೆಂಗಳೂರಿನ ವ್ಯಾಸನಕೆರೆ ಪ್ರಭಂಜನಾಚಾರ್ಯ, ಹುಬ್ಬಳ್ಳಿಯ ಪ್ರದ್ಯುಮ್ನಾಚಾರ್ಯ ಜೋಶಿ, ಧಾರವಾಡದ ಭೀಮಸೇನಚಾರ್ಯ ಮಳಗಿ ಮಧ್ವ ಸಿದ್ಧಾಂತದ ತತ್ವಭಾಗ, ಆಚರಣೆ, ಆಪದ್ಧರ್ಮ, ಸಂದೇಶ ಭಾಗಗಳ ಮೇಲೆ ಉಪನ್ಯಾಸ ಮಂಡಿಸಲಿದ್ದಾರೆ.

ಅಂದು ನಡೆಯುವ ಕಾರ್ಯಕ್ರಮವನ್ನು ಉಡುಪಿ ಪೇಜಾವರಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನತೀರ್ಥರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆ ಭಾಗವಹಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 99642-90100 ಅಥವಾ 94484-51110 ಸಂಪರ್ಕಿಸಬಹುದು ಎಂದು ಕಾರ‍್ಯಕಾರಿ ಮಂಡಳಿ ಗೌರವಾಧ್ಯಕ್ಷ ಡಾ. ಎಂ.ಎಂ. ಜೋಶಿ ಹಾಗೂ ಮಂಡಳಿಯ ಸದಸ್ಯ ವಿನಯ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ