ಆ್ಯಪ್ನಗರ

ಧಾರವಾಡ: ಗೋವಾಕ್ಕೆ ಹೊರಟವರು ಮಸಣಕ್ಕೆ, ಟೆಂಪೋ ಹತ್ತಿದ ನತದೃಷ್ಟ ಮಹಿಳೆಯರ ನಗುವಿನ ಕೊನೆಯ ಸೆಲ್ಫಿ

ಹಾಡು, ಸೆಲ್ಫಿ, ಹರಟೆಯೊಂದಿಗೆ ಟೆಂಪೋ ಟ್ರಾವೆಲರ್‌ನಲ್ಲಿ ಗೋವಾಗೆ ಹೊರಟ ಹತ್ತು ಮಹಿಳೆಯರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಟಿಪ್ಪರ್‌ನ ರೂಪದಲ್ಲಿ ಬಂದ ಜವರಾಯ ಮಹಿಳೆಯರ ಖುಷಿಯಲ್ಲಿ ಒಂದೇ ಸೆಕೆಂಡ್‌ನಲ್ಲಿ ಕಿತ್ತುಕೊಂಡು ಬಿಟ್ಟಿದ್ದಾನೆ. ನಂತರ ಕೇಳಿದ್ದು ಕೇವಲ ಚೀರಾಟ-ನರಳಾಟ ಮಾತ್ರ. ಇದು ಧಾರವಾಡದಲ್ಲಿ ನಡೆದ ಭೀಕರ ಅವಘಡದ ಕರಾಳ ಸ್ಟೋರಿ.

Vijaya Karnataka Web 16 Jan 2021, 2:51 pm
ಧಾರವಾಡ: ಮಹಿಳೆಯರ ತಂಡವೊಂದು ಖುಷಿ-ಖುಷಿಯಾಗಿ ಟೆಂಪೋ ಟ್ರಾವೆಲರ್‌ ಹತ್ತಿದ್ದರು. ಟೆಂಪೋ ಟ್ರಾವೆಲರ್‌ನಲ್ಲಿ ಕುಳಿತ ಮಹಿಳೆಯರು, ಹರಟೆ ಹೊಡೆಯುತ್ತ ಸಮಯ ಕಳೆಯುತ್ತಿದ್ದರು. ಗೋವಾಗೆ ತೆರಳಿ ಅಲ್ಲಿ ಎಂಜಾಯ್‌ ಮಾಡುವ ಯೋಚನೆಯಲ್ಲಿದ್ದರು. ಆದರೆ ಅದು ಎಲ್ಲಿದ್ದನೋ ಗೊತ್ತಿಲ್ಲ ಜವರಾಯನ ರೂಪದಲ್ಲಿ ಬಂದ ಟಿಪ್ಪರ್‌, ಟೆಂಪೋ ಟ್ರಾವೆಲರ್‌ಗೆ ಡಿಕ್ಕಿ ಹೊಡೆದಿದೆ.
Vijaya Karnataka Web final selfie


ಅವಘಡದ ಪರಿಣಾಮ ] ಟೆಂಪೋದಲ್ಲಿದ್ದ ಹತ್ತು ಮಹಿಳೆಯರ ಪ್ರಾಣಪಕ್ಷಿ ಹಾರಿ ಹೋಗಿದೆ. ವಾಹನದಲ್ಲಿ ಕುಳಿತು ಹರಟೆ ಹೊಡೆಯುತ್ತ, ನಗೆ ಚಟಾಕಿ ಹಾರಿಸುತ್ತಿದ್ದ ಆ ನಗು-ಖುಷಿ ಒಂದೇ ಕ್ಷಣಕ್ಕೆ ಮಾಯವಾಗಿ ಬಿಟ್ಟಿದೆ. ವಿಧಿಯಾಟಕ್ಕೆ 12 ಮಹಿಳೆಯರ ಉಸಿರು ನಿಂತಿದೆ. ಹೌದು, ಶುಕ್ರವಾರ ಮುಂಜಾನೆ ಧಾರವಾಡದ ಇಟ್ಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅತ್ಯಂತ ಭೀಕರ ಹಾಗೂ ದಾರುಣ ಅಪಘಾತದ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಘಟನೆಯಲ್ಲಿ ಲಾರಿ ಚಾಲಕ ಸೇರಿ ಒಟ್ಟು 13 ಮಂದಿ ಸಾವನಪ್ಪಿದ್ದಾರೆ.

ಕೊನೆಯ ಸೆಲ್ಫಿ!
ಖುಷಿಯಿಂದಲೇ ಟೆಂಪೋ ಟ್ರಾವೆಲರ್‌ನಲ್ಲಿ ಕುಳಿತ ಮಹಿಳೆಯರು, ಟ್ರಿಪ್‌ ಆರಂಭಕ್ಕೂ ಮುನ್ನ ಸೆಲ್ಫಿ ತೆಗೆದುಕೊಂಡಿದ್ದರು. ಇದೀಗ ಈ ಸೆಲ್ಫಿ ಕೊನೆಯ ಸೆಲ್ಫಿಯಾಗಿಬಿಟ್ಟಿದೆ. ಖುಷಿಯಿಂದಲೇ ಪೋಸ್‌ ಕೊಡುತ್ತಿದ್ದ ಮಹಿಳೆಯರ ನಗುವಿನ ಫೋಟೊ ನೋಡಿದಾಗ ನಿಜಕ್ಕೂ ಕರಳು ಕಿತ್ತು ಬರುತ್ತಿದೆ. ಆರಂಭದಲ್ಲಿ ಸೆಲ್ಫಿ ತೆಗೆದುಕೊಂಡು ತಮ್ಮ ಕುಟುಂಬಸ್ಥರಿಗೆ ಟೆಂಪೋ ಟ್ರಾವೆಲರ್‌ನಲ್ಲಿದ್ದ ಕೆಲ ಮಹಿಳೆಯರು ಕಳುಹಿಸಿದ್ದರು. ಸಂತೋಷದ ಸಮಯ ಎಂದು ಹಂಚಿಕೊಂಡಿದ್ದರು, ಆದರೆ ಆ ಖುಷಿ ಕೇವಲ ಸ್ವಲ್ಪ ಹೊತ್ತಲ್ಲೇ ಮರೆಯಾಗಿದೆ.

ಹಳೆಯ ಗೆಳಯರ ಸಮಾಗಮ!
ಇನ್ನು ಬಸ್‌ನಲ್ಲಿದ್ದ ಎಲ್ಲರೂ ಹೈಸ್ಕೂಲ್‌ ಮೇಟ್ಸ್‌ಗಳು ಎಂದು ಮಾಜಿ ಶಾಸಕ ಗುರುಸಿದ್ಧನಗೌಡ ಅವರ ಸೊಸೆ ಪ್ರೀತಿ ರವಿಕುಮಾರ್ ಅವರ ಕುಟುಬಸ್ಥರು ತಿಳಿಸಿದ್ದಾರೆ. ಮೃತ ಪ್ರೀತಿ ಕುಟುಂಬಸ್ಥರ ಪ್ರಕಾರ, ಕೆಲವು ತಿಂಗಳಿನಿಂದ ಪ್ರವಾಸ ಹೋಗುವ ಬಗ್ಗೆ ಹೈಸ್ಕೂಲ್‌ ಮೇಟ್ಸ್‌ಗಳು ತೀರ್ಮಾನಿಸಿದ್ದರಂತೆ. ಅದರಂತೆ ಶುಕ್ರವಾರ ಮುಂಜಾನೆ ಗೋವಾಗೆ ಹೊರಟ್ಟಿದ್ದಾರೆ. ಎಲ್ಲ ಗೆಳೆಯರು ಒಂದೆಡೆ ಸೇರಿರುವ ಖುಷಿಯು ಇಮ್ಮಡಿಯಾಗಿದ್ದಾಗಲೇ, ಈ ಅವಘಡ ಸಂಭವಿಸಿರುವುದು ನಿಜಕ್ಕೂ ದುರಾದೃಷ್ಟಕರ.

: ಧಾರವಾಡ: ಟೆಂಪೋ ಟ್ರಾವೆಲರ್- ಟಿಪ್ಪರ್‌ ನಡುವೆ ಭೀಕರ ಅಪಘಾತ, 10 ಮಹಿಳೆಯರು ಸೇರಿ 11 ಮಂದಿ ದುರ್ಮರಣ

ಹಲವು ಗಣ್ಯರ ನಿಧನ!
ಇನ್ನು ಅವಘಡದಲ್ಲಿ ಮಾಜಿ ಸಿಎಂ ಜೆ.ಎಚ್. ಪಟೇಲ್ ತಂಗಿಯ ಸೊಸೆ ಜ್ಯೋತಿ, ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಗುರುಸಿದ್ಧನಗೌಡ ಅವರ ಸೊಸೆ ಪ್ರೀತಿ ರವಿಕುಮಾರ್ ಅವರು ಮೃತಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ