ಆ್ಯಪ್ನಗರ

ಮಂಜುನಾಥಗೆ ಟಿಕೆಟ್‌ ನೀಡಲು ಒತ್ತಾಯ

ಹುಬ್ಬಳ್ಳಿ : ಪ್ರಸಕ್ತ ಪಾಲಿಕೆ ಚುನಾವಣೆಯಲ್ಲಿ ವಾರ್ಡ್‌ ನಂ.77ರ ಕಾಂಗ್ರೆಸ್‌ ಟಿಕೆಟ್‌ನ್ನು ಮಹಾನಗರ ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಮಂಜುನಾಥ ಬಸಪ್ಪ ಉಪ್ಪಾರ ಅವರಿಗೆ ನೀಡುವಂತೆ ಒತ್ತಾಯಿಸಿ ಧಾರವಾಡ ಜಿಲ್ಲಾ ಶ್ರೀ ಭಗೀರಥ ಉಪ್ಪಾರ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 28 Jan 2019, 5:00 am
ಹುಬ್ಬಳ್ಳಿ : ಪ್ರಸಕ್ತ ಪಾಲಿಕೆ ಚುನಾವಣೆಯಲ್ಲಿ ವಾರ್ಡ್‌ ನಂ.77ರ ಕಾಂಗ್ರೆಸ್‌ ಟಿಕೆಟ್‌ನ್ನು ಮಹಾನಗರ ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಮಂಜುನಾಥ ಬಸಪ್ಪ ಉಪ್ಪಾರ ಅವರಿಗೆ ನೀಡುವಂತೆ ಒತ್ತಾಯಿಸಿ ಧಾರವಾಡ ಜಿಲ್ಲಾ ಶ್ರೀ ಭಗೀರಥ ಉಪ್ಪಾರ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web manjunath forced to give tickets
ಮಂಜುನಾಥಗೆ ಟಿಕೆಟ್‌ ನೀಡಲು ಒತ್ತಾಯ


ಸಂಘದಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ, ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅಲ್ಲದೆ, ಜನರ ಕುಂದು-ಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸುವ ಕಾರ್ಯದಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಜನಪರ ಕಾಳಜಿಯುಳ್ಳ ಮಂಜುನಾಥ ಅವರಿಗೆ ಈ ಬಾರಿ ಮಹಾನಗರ ಪಾಲಿಕೆಯ 77ನೇ ವಾರ್ಡ್‌ನ ಟಿಕೆಟ್‌ ನೀಡಿ ಜನಪರ ಕೆಲಸಕ್ಕೆ ಅವಕಾಶ ನೀಡಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.

ಈಶ್ವರ ಶಿರಕೋಳ, ಲಕ್ಷ್ಮಣ ಉಪ್ಪಾರ, ಹನುಮಂತಪ್ಪ ಉಪ್ಪಾರ, ವೆಂಕಪ್ಪ ತರ್ಲಬೆಂಚಿ, ಶಂಕ್ರಪ್ಪ ನೀರಾವರಿ, ನಿಂಗಪ್ಪ ಉಪ್ಪಾರ, ಬಸಪ್ಪ ಮುಮ್ಮಿಗಟ್ಟಿ, ದ್ಯಾಮಣ್ಣ ತಳವಾರ, ಸಂಗಯ್ಯ ಹಿರೇಮಠ, ಮಂಜುನಾಥ ಸುಣಗಾರ, ನಜೀರ ಮುನಸಿ, ಗುರುಸಿದ್ದಪ್ಪ ಯರಗಟ್ಟಿ, ಮರಿಸ್ವಾಮಿ ಉಪ್ಪಾರ, ಬಸವರಾಜ ಹರವಿ, ಮಲ್ಲೇಶ ಜೀರಾಳ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ