ಆ್ಯಪ್ನಗರ

ಮದುವೆಯಾಗಿ ಜೀವ ಬೆದರಿಕೆ: ಯುವತಿ ದೂರು

ಧಾರವಾಡ : ಕಾಲೇಜು ದಿನಗಳಲ್ಲಿ ಪ್ರೀತಿಸಿದ ಯುವತಿಯನ್ನು ಗೌಪ್ಯವಾಗಿ ಮದುವೆ ಆಗಿದ್ದ ಯುವಕನೊಬ್ಬ ಇದೀಗ ಆಕೆಯನ್ನು ಮನೆಯಿಂದ ಹೊರಹಾಕಿ ಜೀವಬೆದರಿಕೆ ಹಾಕುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Vijaya Karnataka 10 Jan 2019, 5:00 am
ಧಾರವಾಡ : ಕಾಲೇಜು ದಿನಗಳಲ್ಲಿ ಪ್ರೀತಿಸಿದ ಯುವತಿಯನ್ನು ಗೌಪ್ಯವಾಗಿ ಮದುವೆ ಆಗಿದ್ದ ಯುವಕನೊಬ್ಬ ಇದೀಗ ಆಕೆಯನ್ನು ಮನೆಯಿಂದ ಹೊರಹಾಕಿ ಜೀವಬೆದರಿಕೆ ಹಾಕುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
Vijaya Karnataka Web marriage and threat of life young woman complains
ಮದುವೆಯಾಗಿ ಜೀವ ಬೆದರಿಕೆ: ಯುವತಿ ದೂರು


ನಗರದ ಯುವತಿ ಕಾಲೇಜಿಗೆ ಹೋಗುವ ಸಮಯದಲ್ಲಿ ತನ್ನ ಸ್ನೇಹಿತರಿಂದ ಪರಿಚಯವಾದ ಅತ್ತಿಕೊಳ್ಳದ ನಿವಾಸಿ ಅಭಿಷೇಕ ಪಾಟೀಲ ಎಂಬ ಯುವಕ 2017ರಲ್ಲಿಯೇ ಆಕೆಯನ್ನು ಮದುವೆ ಆಗಿದ್ದಾನೆ. ಆದರೇ ಇದೀಗ ಆಕೆಯನ್ನು ಕೈ ಬಿಟ್ಟು ತಮ್ಮ ಮನೆಗೆ ಬಂದರೆ ಕೊಲೆಮಾಡುವ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ಯುವತಿ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ.

ಸ್ನೇಹಿತನಾಗಿ ಪರಿಚಯ ಆಗಿದ್ದ ಈತ ಮದುವೆ ಆಗದಿದ್ದರೇ ಸತ್ತು ಹೋಗುತ್ತೇನೆ ಎಂದು ಹೇಳಿದ್ದಕ್ಕೆ ಏ. 3, 2017 ರಂದು ಯುವತಿ ಮನೆಯ ದೇವರ ಮುಂದೆ ಮಾಂಗಲ್ಯ ಕಟ್ಟಿಸಿಕೊಂಡು ನಾನು ಆತನೊಂದಿಗೆ ಮದುವೆ ಆಗಿದ್ದೇನೆ. ಆನಂತರದಲ್ಲಿ ಅಭಿಷೇಕ ನನ್ನನ್ನು ಬಳ್ಳಾರಿ, ಚಿಕ್ಕಮಗಳೂರಗೆ ಕೆರದುಕೊಂಡು ಹೋಗಿ ಲಾಡ್ಜನಲ್ಲಿ ವಾಸ್ತವ್ಯ ಹೂಡಿ ಬಂದಿದ್ದಾನೆ. ಆದರೆ, ಈ ವಿಷಯ ಅಭಿಷೇಕ ತಾಯಿ ಸಾಧನಾ ಪಾಟೀಲಗೆ ತಿಳಿದ ಕಾರಣ, ಯುವತಿಯನ್ನು ಮನೆಗೆ ಕರೆಸಿಕೊಂಡು ಇನ್ನೊಮ್ಮೆ ಅದ್ಧೂರಿ ಆಗಿ ಎಲ್ಲರ ಮುಂದೆ ಮದುವೆ ಮಾಡಿಸುವುದಾಗಿ ಭರವಸೆ ನೀಡಿ ಫೋಟೋ ತೆಗಿಸಿಕೊಂಡು ಈಗ ವಂಚಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಈಗ ಆತ ನನಗೆ ಕರೆ ಮಾಡುತ್ತಿಲ್ಲ. ಭೇಟಿಯೂ ಆಗುತ್ತಿಲ್ಲ. ಅನುಮಾನಗೊಂಡು ನಾನು ಅವರ ಮನೆಗೆ ಹೋದರೆ ಅಭಿಷೇಕ ಹಾಗೂ ಅವನ ತಾಯಿ ನೀನು ಯಾರು ಎಂದು ನಮಗೆ ಗೊತ್ತಿಲ್ಲ, ನೀನು ಎಲ್ಲಿ ಹೋಗುತ್ತಿ ಹೋಗು ಎಂದು ಛೇಡಿಸಿ ಹೊರಹಾಕಿದ್ದಾರೆ. ಈಗ ನನಗೆ ಯಾರೂ ಆಸರೆ ಇಲ್ಲ. ನ್ಯಾಯ ಕೊಡಿಸಿ ಎಂದು ಯುವತಿ ಕಳೆದ ಡಿ. 4ರಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ