ಆ್ಯಪ್ನಗರ

ಮದುವೆ ಪ್ರಸ್ತಾಪಿಸಿದ್ದಕ್ಕೆ ಮನೆ ಬಿಟ್ಟು ಹೋದ ಯುವತಿ

ಮದುವೆ ವಿಷಯ ಪ್ರಸ್ತಾಪಿಸಿದಕ್ಕೆ ಸಿಟ್ಟು ಮಾಡಿಕೊಂಡ ಯುವತಿಯೊಬ್ಬಳು ಮನೆಯಿಂದ ಹೊರ ಹೋದವಳು ವಾಪಸ್‌ ಬಾರದೇ ಕಾಣೆಯಾದ ಘಟನೆ ಇಲ್ಲಿನ ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ...

Vijaya Karnataka 19 Apr 2019, 3:40 pm
ಹುಬ್ಬಳ್ಳಿ: ಮದುವೆ ವಿಷಯ ಪ್ರಸ್ತಾಪಿಸಿದಕ್ಕೆ ಸಿಟ್ಟು ಮಾಡಿಕೊಂಡ ಯುವತಿಯೊಬ್ಬಳು ಮನೆಯಿಂದ ಹೊರ ಹೋದವಳು ವಾಪಸ್‌ ಬಾರದೇ ಕಾಣೆಯಾದ ಘಟನೆ ಇಲ್ಲಿನ ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web marrige


ರೈಲ್ವೆ ಕ್ವಾಟರ್ಸ್‌ ವಿನೋಬಾನಗರದ ನಿವಾಸಿ ಜಾನ್‌ ಕ್ರಿಸ್ಟಫರ್‌ (29) ಕಾಣೆಯಾದವಳು. ಏ.15 ರಂದು ತಾಯಿ ಎಲಿಜಾಬತ್‌ ಕುಮಾರಿಯ ಮದುವೆ ವಿಷಯ ಪ್ರಸ್ತಾಪಿಸಿದ್ದರು. ಆಗ ಅದರಿಂದ ಸಿಟ್ಟಿಗೆದ್ದು ಮನೆಯಿಂದ ಜಾನ ಕ್ರಿಸ್ಟಫರ್‌ ಹೊರಗೆ ಹೋಗಿ ಕಾಣೆಯಾಗಿದ್ದಾರೆ. ಈ ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಕಾಣೆ

ಹುಬ್ಬಳ್ಳಿ: ಮನೆಯಿಂದ ಹೊರಗೆ ಹೋದ ಯುವತಿ ವಾಪಸ್‌ ಬಾರದೇ ಕಾಣೆಯಾದ ಘಟನೆ ಅಶೋಕ ನಗರ ಠಾಣೆಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದೆ.

ಆದರ್ಶ ನಗರದ ನಿವಾಸಿ ಸೋನಾಲಿ ನಾಯ್ಡು (19) ಕಾಣೆಯಾದ ಯುವತಿ. ಏ.16ರಂದು ತಮ್ಮ ಮನೆಯಿಂದ ಯಾರಿಗೂ ಹೇಳದೇ ಹೊರಗೆ ಹೋದ ಸೋನಾಲಿ ನಾಪತ್ತೆಯಾಗಿದ್ದಾಳೆ. ನಂತರ ಅದೇ ದಿನ ತಮ್ಮ ತಂದೆಗೆ ದೂರವಾಣಿ ಕರೆ ಮಾಡಿ ನಾನು ತಪ್ಪು ಮಾಡಿದ್ದು, ಆ ಕಾರಣಕ್ಕೆ ಮನೆಯಿಂದ ಹೊರಗೆ ಹೋಗಿದ್ದೇನೆ. ನನ್ನನ್ನು ಹುಡುಕಾಡಬೇಡಿ, ನನ್ನನ್ನು ಕ್ಷಮಿಸಿ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ