ಆ್ಯಪ್ನಗರ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸುರಕ್ಷತೆಗೆ ಮಾಸ್ಕ್‌ ವಿತರಣೆ

ಧಾರವಾಡ : ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ವತಿಯಿಂದ ಎಸ್‌ಎಸ್‌ಎಲ್‌ಸಿ ಮಕ್ಕಳ ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸುವ ಉದ್ದೇಶದಿಂದ ಗುರುವಾರ ಇಲ್ಲಿನ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ 7000 ಮಾಸ್ಕ್‌ ಮತ್ತು 60ಲೀಟರ್‌ ಸ್ಯಾನಿಟೈಸರ್‌ ಕೊಡುಗೆಯಗಿ ನೀಡಲಾಯಿತು.

Vijaya Karnataka 19 Jun 2020, 5:00 am
ಧಾರವಾಡ : ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ವತಿಯಿಂದ ಎಸ್‌ಎಸ್‌ಎಲ್‌ಸಿ ಮಕ್ಕಳ ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸುವ ಉದ್ದೇಶದಿಂದ ಗುರುವಾರ ಇಲ್ಲಿನ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ 7000 ಮಾಸ್ಕ್‌ ಮತ್ತು 60ಲೀಟರ್‌ ಸ್ಯಾನಿಟೈಸರ್‌ ಕೊಡುಗೆಯಗಿ ನೀಡಲಾಯಿತು.
Vijaya Karnataka Web mask distribution for the safety of essence students
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸುರಕ್ಷತೆಗೆ ಮಾಸ್ಕ್‌ ವಿತರಣೆ


ಈ ವೇಳೆ ಮಾತನಾಡಿದ ಉಪ ನಿರ್ದೇಶಕ ಎಂ.ಎಲ್‌. ಹಂಚಾಟೆ, ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ ಸರಕಾರಿ ಶಾಲೆಗಳ ಸುಧಾರಣೆಗೆ ಶಿಕ್ಷಣ ಇಲಾಖೆ ಜೊತೆ ಕೈ ಜೋಡಿಸಿದ್ದು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹಲವು ಉಪಯುಕ್ತ ಚಟುವಟಿಕೆಗಳನ್ನು ನಡೆಸುತ್ತಿದೆ. ಕೊರೊನಾ ಸವಾಲಿನ ಸಂದರ್ಭದಲ್ಲಿಇಲಾಖೆಗೆ ಹಲವು ರೀತಿಯ ನೆರವನ್ನು ನೀಡುತ್ತಿದೆ. ಅಗತ್ಯವಿರುವಲ್ಲಿಅವರ ಸೇವೆ ಬಳಸಿಕೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿಮಾಸ್ಕ್‌ ಡೇ ನಿಮಿತ್ತ ವೈಯಕ್ತಿಕ ಸ್ವಚ್ಛತೆ ಹಾಗೂ ಸಮುದಾಯದ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದು ಮತ್ತು ನಾವು ಮಾಸ್ಕ್‌ ಧರಿಸುವುದಲ್ಲದೆ ಸಮುದಾಯ ಕೂಡ ಮಾಸ್ಕ್‌ ಧರಿಸುವಂತೆ ಜಾಗೃತಿ ಮೂಡಿಸುವ ಪ್ರತಿಜ್ಞೆಯನ್ನು ಡಾ. ಬಿ.ಕೆ.ಎಸ್‌ ವರ್ಧನ ಬೋಧಿಸಿದರು.

ಶಿಕ್ಷಣ ಇಲಾಖೆಯ ವಿವಿಧ ವಿಷಯ ಪರವೀಕ್ಷಕರಾದ ಬಿ.ಬಿ ದುಬ್ಬದ, ಎಸ್‌.ಆರ್‌. ಮಾಳಿ, ಪೂರ್ಣಿಮ ಮುಕ್ಕುಂದಿ, ರೇಖಾ ಭಜಂತ್ರಿ, ಶಿವಲೀಲಾ ಕಳಸಣ್ಣವರ, ಸರ್ವ ಶಿಕ್ಷಣ ಅಭಿಯಾನದ ಉಪ ಸಮನ್ವಯಧಿಕಾರಿ ಪ್ರಮೋದ ಮಹಾಲೆ, ಕಾರ್ಯಕ್ರಮ ಸಂಯೋಜಕ ಜಯಂತ ಕೆ.ಎಸ್‌., ಕಾರ್ಯಕ್ರಮ ವ್ಯವಸ್ಥಾಪಕ ಗುರು ಮದ್ನಳ್ಳಿ, ಸಂತೋಷ ಶೀಸನಳ್ಳಿ ಇತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ