ಆ್ಯಪ್ನಗರ

ಮಾಸ್ಕ್‌ ಉದಾಸೀನ ಬೇಡ ,ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಜಿಲ್ಲಾಧಿಕಾರಿ

ಧಾರವಾಡ: ದೇಶದ ಬೇರೆ ರಾಜ್ಯ ಹಾಗೂ ಜಿಲ್ಲೆಗಳಲ್ಲಿಕೋವಿಡ್‌- 19ರ 2ನೇ ಹಂತದ ಅಲೆ ಆರಂಭವಾಗಿರುವ ಬಗೆಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿಕೊರೊನಾ ಕುರಿತ ಜನ ಜಾಗೃತಿ ಮತ್ತು ಸೂಕ್ತ ಪರೀಕ್ಷೆಗೆ ಕ್ರಮಕೈಗೊಂಡಿದ್ದರೂ ಸಾರ್ವಜನಿಕರು ಉದಾಸೀನತೆಯಿಂದ ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಸಂಚರಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

Vijaya Karnataka 28 Nov 2020, 5:00 am
ಧಾರವಾಡ: ದೇಶದ ಬೇರೆ ರಾಜ್ಯ ಹಾಗೂ ಜಿಲ್ಲೆಗಳಲ್ಲಿಕೋವಿಡ್‌- 19ರ 2ನೇ ಹಂತದ ಅಲೆ ಆರಂಭವಾಗಿರುವ ಬಗೆಗೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿಕೊರೊನಾ ಕುರಿತ ಜನ ಜಾಗೃತಿ ಮತ್ತು ಸೂಕ್ತ ಪರೀಕ್ಷೆಗೆ ಕ್ರಮಕೈಗೊಂಡಿದ್ದರೂ ಸಾರ್ವಜನಿಕರು ಉದಾಸೀನತೆಯಿಂದ ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಸಂಚರಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
Vijaya Karnataka Web 27MALLU8_21
ಧಾರವಾಡ ಡಿಸಿ ಕಚೇರಿಯಲ್ಲಿಆಯೋಜಿಸಿದ್ದ ಸಭೆಯಲ್ಲಿಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿದರು.


ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಕೋವಿಡ್‌ ನಿರ್ವಹಣೆಯ ಜಿಲ್ಲಾಆರೋಗ್ಯ ಕಾರ್ಯಪಡೆಯ ಸಭೆ ಜರುಗಿಸಿ ಮಾತನಾಡಿದರು.

ಜಿಲ್ಲೆಯಲ್ಲಿಈಗಾಗಲೇ ಮಾಸ್ಕ್‌ ಅಭಿಯಾನವನ್ನು ಪರಿಣಾಮಕಾರಿಯಾಗಿ ಆರಂಭಿಸಲಾಗಿದ್ದು ನ. 26ರ ದಿನ ವಿಶೇಷ ಕಾರ್ಯಾಚರಣೆ ಸೇರಿದಂತೆ ಒಟ್ಟು 2700ಕ್ಕೂ ಹೆಚ್ಚು ಜನರಿಗೆ ಕೋವಿಡ್‌ ಪರೀಕ್ಷೆ ಹಾಗೂ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಲಾಗಿದೆ. ಕಾರ್ಯಾಚರಣೆ ತಂಡಗಳು ಪ್ರತಿದಿನ ಮಾರುಕಟ್ಟೆ ಪ್ರದೇಶ, ಕಾಲೇಜು, ಕಾರಾಗೃಹ, ಬಸ್‌ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿಸಂಚರಿಸಿ, ಮಾಸ್ಕ್‌ ಧರಿಸದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಬೇಕು. ಜತೆಗೆ ಅವರಿಗೆ ಕೋವಿಡ್‌ ಪರೀಕ್ಷೆ ಮಾಡಬೇಕೆಂದು ಸೂಚಿಸಿದರು.

ತಕ್ಷಣ ವರದಿ ಕೊಡಿ
ಡಿಮ್ಹಾನ್ಸ್‌, ಕಿಮ್ಸ್‌ ಮತ್ತು ಎಸ್‌ಡಿಎಂ ಆಸ್ಪತ್ರೆಗಳು ಕೊರೊನಾ ಪರೀಕ್ಷೆಯ ನೆಗಟಿವ್‌ ವರಿದಿಯನ್ನು ಸಂಬಂಧಿಸಿದವರಿಗೆ ತಕ್ಷಣ ನೀಡಲು ಕ್ರಮಕೈಗೊಳ್ಳಬೇಕು .ಎಸ್‌ಡಿಎಂ ಆಸ್ಪತ್ರೆಯ ಅಧಿಕ್ಷಕರು ಆಯಾ ದಿನದ ವರದಿಗಳನ್ನು ತಕ್ಷಣ ಸಲ್ಲಿಸಬೇಕು. ಕೊರೊನಾ ಚಿಕಿತ್ಸೆಗೆ ದಾಖಲಾಗುವ ರೋಗಿಗಳ ಸರಿಯಾದ ವಿಳಾಸ ಮತ್ತು ಅವರ ಸ್ವಂತ ಜಿಲ್ಲೆಯ ವಿವರಗಳನ್ನು ನಿಗದಿತ ನಮೂನೆಯಲ್ಲಿದಾಖಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲಾಆರೋಗ್ಯ ಅಧಿಕಾರಿ ಡಾ. ಯಶವಂತ ಮದೀನಕರ ಮಾತನಾಡಿ, ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಸಂಚರಿಸುವವರಿಂದ ಬರುವ ತಿಂಗಳುಗಳಲ್ಲಿಕೊರೊನಾ ಹೆಚ್ಚಳವಾಗುವ ಸಾದ್ಯತೆ ಇದೆ. ಸಾರ್ವಜನಿಕರು ಆರೋಗ್ಯ ಇಲಾಖೆಗೆ ಸಹಕಾರ ನೀಡಿ, ಕೊರೊನಾ ಲಕ್ಷಣಗಳು ಕಂಡುಬಂದಲ್ಲಿತಕ್ಷಣ ಸ್ವಯಂ ಪ್ರೇರಣೆಯಿಂದ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ತಪಾಸಣೆಗೆ ಒಳಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸಿಇಒ ಡಾ. ಸುಶೀಲಾ ಬಿ., ಜಿಲ್ಲಾಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಜಿಲ್ಲಾಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ ಸೇರಿದಂತೆ ಜಿಲ್ಲಾಆರೋಗ್ಯ ಕಾರ್ಯಪಡೆಯ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ