ಆ್ಯಪ್ನಗರ

ಪತ್ರಿಕೆ ಸಂಸ್ಕೃತಿ ಬಿಂಬಿಸುವ ಮಾಧ್ಯಮ

ಧಾರವಾಡ: ಹೊಸ ವಿಚಾರಗಳ ಮೂಲಕ ಹೊಸ ಸಮಾಜ ಸೃಷ್ಟಿಯತ್ತ ನಾವೆಲ್ಲಹೆಜ್ಜೆ ಇಡಬೇಕಿದ್ದು, ಈ ಕಾರ್ಯವನ್ನು ಪತ್ರಕರ್ತರು ಸರಿಯಾಗಿ ನಿಭಾಯಿಸಬೇಕು ಎಂದು ಹಿರಿಯ ಪರ್ತಕರ್ತ ರಾಯಚೂರಿನ ಬಸವರಾಜ ಸ್ವಾಮಿ ಹೇಳಿದರು.

Vijaya Karnataka 21 Jan 2020, 5:00 am
ಧಾರವಾಡ: ಹೊಸ ವಿಚಾರಗಳ ಮೂಲಕ ಹೊಸ ಸಮಾಜ ಸೃಷ್ಟಿಯತ್ತ ನಾವೆಲ್ಲಹೆಜ್ಜೆ ಇಡಬೇಕಿದ್ದು, ಈ ಕಾರ್ಯವನ್ನು ಪತ್ರಕರ್ತರು ಸರಿಯಾಗಿ ನಿಭಾಯಿಸಬೇಕು ಎಂದು ಹಿರಿಯ ಪರ್ತಕರ್ತ ರಾಯಚೂರಿನ ಬಸವರಾಜ ಸ್ವಾಮಿ ಹೇಳಿದರು.
Vijaya Karnataka Web media that depicts newspaper culture
ಪತ್ರಿಕೆ ಸಂಸ್ಕೃತಿ ಬಿಂಬಿಸುವ ಮಾಧ್ಯಮ


ನಗರದ ಜೆಎಸ್‌ಎಸ್‌ ಕಾಲೇಜು ಸಭಾಂಗಣದಲ್ಲಿಶಿವಮೊಗ್ಗದ ಮಿಂಚು ಶ್ರೀನಿವಾಸ ಕುಟುಂಬ ಹಾಗೂ ಸಾಕಾರ (ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರತಿಷ್ಟಾನ) ಸಂಸ್ಥೆ 7ನೇ ವಾರ್ಷಿಕೋತ್ಸವದ ನಿಮಿತ್ತ ಭಾನುವಾರ ದಿ.ಮಿಂಚು ಶ್ರೀನಿವಾಸ ಅವರ ಹೆಸರಿನಲ್ಲಿಕೊಡಮಾಡುವ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಅದರಲ್ಲೂವಿಶೇಷವಾಗಿ ಪತ್ರಕರ್ತರು ಹೊಸ ರೀತಿಯ ಆಲೋಚನಾ ಶಕ್ತಿ ಬೆಳೆಸಿಕೊಳ್ಳುವ ಮೂಲಕ ಕೆಲಸ ಮಾಡಬೇಕು. ಯಾವ ವ್ಯಕ್ತಿಯೂ ನೋಡುವ ನೋಟ, ಓದು ಹಾಗೂ ಆಡುವ ಮಾತಿನಿಂದ ಜ್ಞಾನವಂತನಾಗುವುದಿಲ್ಲ. ಆತನಲ್ಲಿಅರಿವು ಎಂಬುದು ಪ್ರಮುಖವಾಗಿರಬೇಕು. ತನ್ನನ್ನು ತಾನು ಸಂಪೂರ್ಣವಾಗಿ ಅರಿತು ಉತ್ತಮ ಜೀವನ ನಡೆಸಿದಾಗ ಮಾತ್ರ ಜ್ಞಾನವಂತನಾಗುತ್ತಾನೆ ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ಸಾಹಿತಿ ಡಾ.ಶ್ಯಾಮಸುಂದರ ಬಿದರಕುಂದಿ ಮಾತನಾಡಿ, ಬರಹ ಒಂದು ಸಂಸ್ಕೃತಿಯಾಗಿದ್ದು, ಆಯಾ ಕಾಲದ ಸಂಸ್ಕೃತಿಯನ್ನು ಪತ್ರಿಕೆಗಳ ಮೂಲಕವೇ ತಿಳಿದುಕೊಳ್ಳಲಾಗುತ್ತಿದೆ. ದಿನಪತ್ರಿಕೆಗಳು ಸಂಸ್ಕೃತಿ ಬಿಂಬಿಸುವ ಮಾಧ್ಯಮ ಎಂದರು.

ಕಲಾವಿದೆ ಶಶಿಕಲಾ ಜೋಶಿ, ಸಿ.ಆರ್‌.ಭಟ್‌ ರಂಗ ಕಲಾವಿದರಲ್ಲ, ನಿರ್ದೇಶಕರೂ ಅಲ್ಲ. ಇಷ್ಟಾಗಿಯೂ ರಂಗಭೂಮಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ, ರಂಗಭೂಮಿ ಅವರನ್ನು ಮರೆತು ಬಿಟ್ಟಿದೆ. ಅವರ ಹೆಸರಿನಲ್ಲಿರಂಗಾಯಣ ವಿಚಾರ ಸಂಕಿರಣ ಆಯೋಜಿಸಬೇಕು ಎಂದರು.

ಹಿರಿಯ ಪತ್ರಕರ್ತ ಬಿ.ವಿ.ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ವೇಳೆ ಸಿ.ಆರ್‌.ಭಟ್‌ ಸ್ಮರಣಾರ್ಥ ರಂಗಭೂಮಿ ಕಲಾವಿದೆ ಶಶಿಕಲಾ ಜೋಶಿ ಹಾಗೂ ದತ್ತಾತ್ರೇಯ ಕುಲಕರ್ಣಿ ಸ್ಮರಣಾರ್ಥ ಅಂತಾರಾಷ್ಟ್ರೀಯ ಯೋಗ ಗುರು ಶಿವಯೋಗಿ ಡಿಗ್ಗಿಮಠ ಅವರನ್ನು ಗೌರವಿಸಲಾಯಿತು. ರತಿಕಾ ನೃತ್ಯನಿಕೇತನ ವತಿಯಿಂದ ಡಾ.ಸಮತಾ, ಸೃಷ್ಟಿ ಕುಲಕರ್ಣಿ ಹಾಗೂ ತಂದಿಂದ ನೃತ್ಯ ಹಾಗೂ ಭರತನಾಟ್ಯ ಪ್ರಸ್ತುತಪಡಿಸಲಾಯಿತು.

ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಮಂಜುನಾಥ ಎನ್‌., ವಿದೂಷಿ ನಾಗರತ್ನಾ ಹಡಗಲಿ ಇದ್ದರು. ಸುನೀಲ ಕುಲಕರ್ಣಿ ನಿರೂಪಿಸಿದರು. ಡಾ.ಶುಭದಾ ಕುಲಕರ್ಣಿ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ