ಆ್ಯಪ್ನಗರ

ಕೃಷಿ ವಿವಿ ಕುಲಪತಿಗಳ ಸಭೆ

ಧಾರವಾಡ : ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಸಭಾಭವನದಲ್ಲಿಕರ್ನಾಟಕ ರಾಜ್ಯದ ಐದನೇ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಮಹಾದೇವ ಚೆಟ್ಟಿ ಅಧ್ಯಕ್ಷತೆಯಲ್ಲಿಮಂಗಳವಾರ ನಡೆಯಿತು.

Vijaya Karnataka 3 Jun 2020, 5:00 am
ಧಾರವಾಡ : ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಸಭಾಭವನದಲ್ಲಿಕರ್ನಾಟಕ ರಾಜ್ಯದ ಐದನೇ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಮಹಾದೇವ ಚೆಟ್ಟಿ ಅಧ್ಯಕ್ಷತೆಯಲ್ಲಿಮಂಗಳವಾರ ನಡೆಯಿತು.
Vijaya Karnataka Web meeting of chancellors of agriculture
ಕೃಷಿ ವಿವಿ ಕುಲಪತಿಗಳ ಸಭೆ


ಸಭೆಯಲ್ಲಿಕೃಷಿ ವಿವಿಗಳ ಸಮನ್ವಯ ಸಮಿತಿಯ ಶಿಕ್ಷಣ ಉಪ ಸಮಿತಿ ಸಭೆಯನ್ನು ಆಯೋಜಿಸಿ, ರಾಜ್ಯದ ಎಲ್ಲಾವಿವಿಗಳಲ್ಲಿಕೃಷಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಏಕರೂಪ ನಿಯಮಾವಳಿಗಳನ್ನು ರೂಪಿಸಲು, ಕೃಷಿ ವಿವಿ ಸ್ನಾತಕೋತ್ತರ ಸೀಟು ನಿರೂಪಣೆ ಮಾಡಬೇಕು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಶಿಕ್ಷಣದಲ್ಲಿಕೃಷಿ ಹಾಗೂ ಕೃಷಿ ತಂತ್ರಜ್ಞಾನ ವಿಷಯಗಳ ಬಗ್ಗೆ ಸೇರ್ಪಡೆ ಮಾಡಬೇಕು. ಕೃಷಿ ಉದ್ಯಮಿಗಳ ಜೊತೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳಲ್ಲಿಉದ್ಯಮಶೀಲತೆ ತರುವಯದು, ಕೃಷಿ ವಿವಿಗಳಲ್ಲಿಬೋಧಕರನ್ನು ಆಯ್ಕೆ ಮಾಡಲು ಸ್ಕೋರ್‌ ಕಾರ್ಡ್‌ ಬಗ್ಗೆ ನಿರ್ಣಯ ಹಾಗೂ ಹಲವಾರು ವಿಷಯಗಳನ್ನು ಚರ್ಚಿಸಿ, ನಿರ್ಣಯಿಸಲಾಯಿತು.

ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ, ರಾಯಚೂರು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ನಾಯಕ, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ.ಇಂದಿರೇಶ, ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಶಿಕ್ಷಣ ನಿರ್ದೇಶಕರು, ಕುಲಸಚಿವರು ಹಾಗೂ ವಿವಿಧ ಅಧಿಕಾರಿ ವೃಂದದವರು ಭಾಗವಹಿಸಿದ್ದರು. ಡಾ.ಎಸ್‌.ಬಿ. ಹೊಸಮನಿ, ಡಾ.ವಿ.ಆರ್‌.ಕಿರೇಸೂರ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ