ಆ್ಯಪ್ನಗರ

ಮಾನಸಿಕ ಆರೋಗ್ಯ ನಿರ್ವಹಣೆ ಅಗತ್ಯ

ಧಾರವಾಡ : ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ತಮ್ಮ ಸುತ್ತಲಿನ ಪರಿಸರದಲ್ಲಿಆತ್ಮಹತ್ಯೆಗಳಿಗೆ ಅವಕಾಶ ನೀಡದೆ ಮಾನಸಿಕ ಆರೋಗ್ಯ ನಿರ್ವಹಣೆಗೆ ಒತ್ತು ನೀಡಬೇಕು ಎಂದು ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾಹಾಗೂ ಸತ್ರ ನ್ಯಾಯಾಧೀಶ ಈಶಪ್ಪ .ಕೆ. ಭೂತೆ ಹೇಳಿದರು.

Vijaya Karnataka 11 Oct 2019, 5:00 am
ಧಾರವಾಡ : ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ತಮ್ಮ ಸುತ್ತಲಿನ ಪರಿಸರದಲ್ಲಿಆತ್ಮಹತ್ಯೆಗಳಿಗೆ ಅವಕಾಶ ನೀಡದೆ ಮಾನಸಿಕ ಆರೋಗ್ಯ ನಿರ್ವಹಣೆಗೆ ಒತ್ತು ನೀಡಬೇಕು ಎಂದು ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾಹಾಗೂ ಸತ್ರ ನ್ಯಾಯಾಧೀಶ ಈಶಪ್ಪ .ಕೆ. ಭೂತೆ ಹೇಳಿದರು.
Vijaya Karnataka Web mental health management is essential
ಮಾನಸಿಕ ಆರೋಗ್ಯ ನಿರ್ವಹಣೆ ಅಗತ್ಯ


ನಗರದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ( ಡಿಮ್ಹಾನ್ಸ್‌) ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಸಹಯೋಗದಲ್ಲಿವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ 2019 ರ ಅಂಗವಾಗಿ '' ಆತ್ಮಹತ್ಯೆ ತಡೆಗಟ್ಟಲು ಒಟ್ಟಾಗಿ ಶ್ರಮಿಸೋಣ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು,

ಜಗತ್ತಿನ ಸೌಂದರ್ಯ, ಸೊಬಗು ಆಸ್ವಾದಿಸದೇ ಬದುಕುವ ಪ್ರೀತಿ ಕಳೆದುಕೊಂಡವರು ಖಿನ್ನತೆಯಿಂದ ಬಳಲಿ ಆತ್ಮಹತ್ಯೆಯಂತಹ ಹೀನ ಕಾರ್ಯಕ್ಕೆ ಕೈ ಹಾಕುತ್ತಾರೆ. ಪ್ರತಿ 40 ಸೆಕೆಂಡಿಗೆ ಒಂದು ಆತ್ಮಹತ್ಯೆ ಸಂಭವಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕುಟುಂಬ ಹಾಗೂ ಸಮಾಜದ ಎಲ್ಲಾಜನ ಒಟ್ಟಾಗಿ ಆತ್ಮಹತ್ಯೆ ತಡೆಯಲು ಶ್ರಮಿಸಬೇಕು. ಕುಟುಂಬದಲ್ಲಿಮಾನಸಿಕ ಅಸ್ವಸ್ಥರು ಇದ್ದರೆ ಇತರ ಸದಸ್ಯರು ಅವರನ್ನು ಪ್ರೀತಿಯಿಂದ ಕಾಣಬೇಕು. ಕೀಟಲೆ, ಕಿರಿಕಿರಿ ಉಂಟು ಮಾಡಬಾರದು. ಪ್ರತಿಯೊಬ್ಬ ಪ್ರರಿಜ್ಞಾವಂತರೂ ಆತ್ಮಹತ್ಯೆ ತಡೆಯಲು ಶಪಥ ಮಾಡಬೇಕು ಎಂದರು.

ಶೇ.37ರಷ್ಟು ಮಹಿಳೆಯರ ಆತ್ಮಹತ್ಯೆ : ಅಧ್ಯಕ್ಷತೆ ವಹಿಸಿದ್ದ ಡಿಮ್ಹಾನ್ಸ್‌ ನಿರ್ದೇಶಕ ಡಾ.ಮಹೇಶ ದೇಸಾಯಿ ಮಾತನಾಡಿ, ಆತ್ಮಹತ್ಯೆ ತಡೆಯುವ ಧ್ಯೇಯದೊಂದಿಗೆ ಜಗತ್ತಿನ ಎಲ್ಲಾರಾಷ್ಟ್ರಗಳಲ್ಲಿಮಾನಸಿಕ ಆರೋಗ್ಯ ದಿನ ಆಚರಿಸಲಾಗುತ್ತಿದೆ. ಭಾರತ ದೇಶವೊಂದರಲ್ಲಿಯೇ ಶೇ.37 ರಷ್ಟು ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಪ್ರಕರಣಗಳಿಗೆ ಶೇ.80 ರಷ್ಟು ಮನೋರೋಗಗಳೇ ಕಾರಣವಾಗಿವೆ ಎಂದರು.

ಜಿಲ್ಲಾಮಾನಸಿಕ ಆರೋಗ್ಯ ತಜ್ಞೆ ವೈದ್ಯೆ ಡಾ.ಎಸ್‌.ವೈಶಾಲಿ ವಿಶೇಷ ಉಪನ್ಯಾಸ ನೀಡಿದರು. ಡಿಮಾನ್ಸ್‌ ನಲ್ಲಿಎಂ.ಫಿಲ್‌ ಹಾಗೂ ಸ್ನಾತಕೋತ್ತರ ಸಂಶೋಧನೆಗೆ ಪ್ರವೇಶ ಪಡೆದಿರುವ 10ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿಹಿರಿಯ ಸಿವಿಲ್‌ ನ್ಯಾಯಾಧೀಶ ಚಿಣ್ಣನ್ನವರ ಆರ್‌.ಎಸ್‌, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ್‌ ಮದೀನಕರ್‌, ಡಾ. ಶಿವಕುಮಾರ್‌ ಮಾನಕರ್‌, ಡಾ. ರಾಘವೇಂದ್ರ ಬಿ.ನಾಯಕ್‌, ಡಾ.ಶ್ರೀನಿವಾಸ ಕೊಸಗಿ, ಮಂಜುನಾಥ ಡಿ.ಡೊಳ್ಳಿನ,ಡಾ. ಶಶಿ ಪಾಟೀಲ, ಆರ್‌.ಸಿ.ಎಚ್‌ ಅಧಿಕಾರಿ ಡಾ.ಎಸ್‌.ಎಂ.ಹೊನಕೇರಿ ಇದ್ದರು. ಅನಂತರಾಮ ನಿರೂಪಿಸಿ, ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ