ಧಾರವಾಡ : ಸಚಿವ ಡಿ.ಕೆ. ಶಿವಕುಮಾರ ಹಾಗೂ ಇತರ 4 ಜನ ಶಾಸಕರನ್ನು ಮುಂಬಯಿ ಪೊಲೀಲಿಸರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಬಂಧಿಸಿದ್ದು, ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಬಂಧಿತರನ್ನು ಬಿಡುಗಡೆ ಮಾಡವಂತೆ ಒತ್ತಾಯಿಸಿ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಕೆಪಿಸಿಸಿ ಸದಸ್ಯರಾದ ರಾಬರ್ಟ್ ದದ್ದಾಪುರಿ ನೇತೃತ್ವದಲ್ಲಿ ಕೇಂದ್ರ ಸರಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿ, ನೆಲದ ಕಾನೂನಿಗೆ ವಿರುದ್ಧವಾಗಿ ಪೊಲೀಸರು ನಡೆದಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಡಿ.ಕೆ.ಶಿವಕುಮಾರ ಹಾಗೂ ಇತರ 4 ಜನ ಶಾಸಕರು ಪ್ರಜಾಪ್ರಭುತ್ವದ ಅನುಗುಣವಾಗಿ ಹಾಗೂ ಕಾನೂನಿಗೆ ಬದ್ಧವಾಗಿ ಮುಂಬಯಿ ನಗರದಲ್ಲಿರುವ ಹೋಟೆಲ್ದಲ್ಲಿ ರೂಮ್ ಕಾಯ್ದಿರಿಸಿ ಹೋದಾಗಲೂ ಅವರನ್ನು ಹೋಟೆಲ್ನ ಒಳಗೆ ಬಿಡದಿರುವುದು ಪೊಲೀಸರು ಮಾಡಿರುವ ಅನಾಗರಿಕ ವರ್ತನೆ ಆಗಿದೆ ಎಂದು ದೂರಿದರು.
ಮುಂಬಯಿ ಪೊಲೀಸರು ಬಿಜೆಪಿ ಸರಕಾರದ ಕೈಗೊಂಬೆಗಳಾಗಿದ್ದು, ಕೇಂದ್ರ ಬಿಜೆಪಿ ಸರಕಾರದ ಕಾನೂನು ಬಾಹಿರ ಅಣತಿಯಂತೆ ನಡೆಯುತ್ತಿರುವುದು ಅಕ್ಷ ಮ್ಯವಾಗಿದೆ ಎಂದು ಆರೋಪಿಸಿದರು.
ಈ ಕೂಡಲೇ ರಾಷ್ಟಪತಿಗಳು ಮಧ್ಯ ಪ್ರವೇಶಿಸಿ ಸಚಿವ ಡಿ.ಕೆ. ಶಿವಕುಮಾರ ಹಾಗೂ ಸಂಗಡಿಗರನ್ನು ಬಂಧನದಿಂದ ಬಿಡಿಸಬೇಕು. ಇಲ್ಲವಾದರೆ ಕಾಂಗ್ರಸ್ ಪ್ರಜಾಪ್ರಭುತ್ವ ವಿರೋಧಿ ನೀತಿ ಖಂಡಿಸಿ ದೇಶಾದ್ಯಂತ ಹೋರಾಟ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಆನಂದ ಜಾಧವ, ಗ್ರೆಗರಿ ಝೆವಿಯರ್, ನಾಗರಾಜ ಗುರಿಕಾರ, ಬಸವರಾಜ ಕಿತ್ತೂರ, ಬಸವರಾಜ ಮಲಕಾರಿ, ಶ್ರೀಧರ ಶೆಟ್, ಹೇಮಂತ್ ಗುರ್ಲಹೊಸೂರ, ಆನಂದ ಸಿಂಗನಾಥ, ಪೂಜಾ ಹಳಿಯಾಳ, ಆನಂದ ಆದ್ವಾನಿ, ಪ್ರಕಾಶ ಹಳಿಯಾಳ ಸೇರಿದಂತೆ ಇತರರು ಇದ್ದರು.
ಕೆಪಿಸಿಸಿ ಸದಸ್ಯರಾದ ರಾಬರ್ಟ್ ದದ್ದಾಪುರಿ ನೇತೃತ್ವದಲ್ಲಿ ಕೇಂದ್ರ ಸರಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿ, ನೆಲದ ಕಾನೂನಿಗೆ ವಿರುದ್ಧವಾಗಿ ಪೊಲೀಸರು ನಡೆದಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಡಿ.ಕೆ.ಶಿವಕುಮಾರ ಹಾಗೂ ಇತರ 4 ಜನ ಶಾಸಕರು ಪ್ರಜಾಪ್ರಭುತ್ವದ ಅನುಗುಣವಾಗಿ ಹಾಗೂ ಕಾನೂನಿಗೆ ಬದ್ಧವಾಗಿ ಮುಂಬಯಿ ನಗರದಲ್ಲಿರುವ ಹೋಟೆಲ್ದಲ್ಲಿ ರೂಮ್ ಕಾಯ್ದಿರಿಸಿ ಹೋದಾಗಲೂ ಅವರನ್ನು ಹೋಟೆಲ್ನ ಒಳಗೆ ಬಿಡದಿರುವುದು ಪೊಲೀಸರು ಮಾಡಿರುವ ಅನಾಗರಿಕ ವರ್ತನೆ ಆಗಿದೆ ಎಂದು ದೂರಿದರು.
ಮುಂಬಯಿ ಪೊಲೀಸರು ಬಿಜೆಪಿ ಸರಕಾರದ ಕೈಗೊಂಬೆಗಳಾಗಿದ್ದು, ಕೇಂದ್ರ ಬಿಜೆಪಿ ಸರಕಾರದ ಕಾನೂನು ಬಾಹಿರ ಅಣತಿಯಂತೆ ನಡೆಯುತ್ತಿರುವುದು ಅಕ್ಷ ಮ್ಯವಾಗಿದೆ ಎಂದು ಆರೋಪಿಸಿದರು.
ಈ ಕೂಡಲೇ ರಾಷ್ಟಪತಿಗಳು ಮಧ್ಯ ಪ್ರವೇಶಿಸಿ ಸಚಿವ ಡಿ.ಕೆ. ಶಿವಕುಮಾರ ಹಾಗೂ ಸಂಗಡಿಗರನ್ನು ಬಂಧನದಿಂದ ಬಿಡಿಸಬೇಕು. ಇಲ್ಲವಾದರೆ ಕಾಂಗ್ರಸ್ ಪ್ರಜಾಪ್ರಭುತ್ವ ವಿರೋಧಿ ನೀತಿ ಖಂಡಿಸಿ ದೇಶಾದ್ಯಂತ ಹೋರಾಟ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಆನಂದ ಜಾಧವ, ಗ್ರೆಗರಿ ಝೆವಿಯರ್, ನಾಗರಾಜ ಗುರಿಕಾರ, ಬಸವರಾಜ ಕಿತ್ತೂರ, ಬಸವರಾಜ ಮಲಕಾರಿ, ಶ್ರೀಧರ ಶೆಟ್, ಹೇಮಂತ್ ಗುರ್ಲಹೊಸೂರ, ಆನಂದ ಸಿಂಗನಾಥ, ಪೂಜಾ ಹಳಿಯಾಳ, ಆನಂದ ಆದ್ವಾನಿ, ಪ್ರಕಾಶ ಹಳಿಯಾಳ ಸೇರಿದಂತೆ ಇತರರು ಇದ್ದರು.